ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರಮದಾನ

Suddi Udaya

ನಿಡ್ಲೆ: ಪಿಲಿಕಜೆ ಬೈಲುವಾರು ಸಮಿತಿಯ ವತಿಯಿಂದ ಇತ್ತೀಚೆಗೆ ಶ್ರಮದಾನ ನಡೆಯಿತು. ಪ್ರತಿವರ್ಷದಂತೆ 7ನೇ ವರ್ಷದ ಶ್ರಮದಾನವು ನಿಡ್ಲೆ ರಾಜ್ಯ ಹೆದ್ದಾರಿಯಿಂದ ಪಟ್ರಮೆ ಜಿ.ಪಂ ರಸ್ತೆಯ 2 ಬದಿಯ ಗಿಡಗಂಟಿ ಕಡಿದು ಪ್ರಯಾಣಿಕರ ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ಮಾಡಿದರು.

ಡಾಂಬರು ರಸ್ತೆ ಅಲ್ಲಲ್ಲಿ, ದೊಡ್ಡದಾದ ಹೊಂಡಗಳಿಗೆ ಮಣ್ಣು ಹಾಕಿ ಸಮತಟ್ಟಗೊಳಿಸಲಾಯಿತು. ಕಳೆಕೊಚ್ಚುವ ಯಂತ್ರವನ್ನು ಲಕ್ಷ್ಮಣ ಗೌಡ ನಂಜಿಲ, ಕೃಷ್ಣಪ್ರಸಾದ್ ಐತೂರು, ಪದ್ಮನಾಭ ನಕ್ಕರೆ ಪದ್ಮಯ್ಯಗೌಡ ಪಿಲಿಕಜೆ, ಪೂವಪ್ಪ ಗೌಡ ಪರಾಂಡ, ಚೀಂಕ್ರ ಮಾಪಲಾಜೆ, ಬೆಳಗಿನ ಉಪಹಾರವನ್ನು ರಾಜೇಶ್ ಉಳ್ಳಾಲ್ತಿ ಚಿಕನ್ ಸೆಂಟರ್ ನಿಡ್ಲೆ ಹಾಗೂ ಪಿಕಪ್ ವ್ಯವಸ್ಥೆಯನ್ನು ಜಿತೇಂದ್ರ ಶೆಟ್ಟಿ, ಪೆಟ್ರೋಲ್ ವ್ಯವಸ್ಥೆಯನ್ನು ಯಾದವ್ ಸಣಿಲ, ಊಟದ ವ್ಯವಸ್ಥೆಯನ್ನು ಅಧ್ಯಕ್ಷರಾದ ಹೊನ್ನಪ್ಪಗೌಡ ಹಿರಿಂಬಿ, ತಂಪು ಪಾನೀಯ ವ್ಯವಸ್ಥೆಯನ್ನು ನಾರಾಯಣ ಮಾಪಲಾಜೆ, ಜಯಪ್ರಸಾದ್ ಪರಾಂಡ, ಗೋವಿಂದಗೌಡ, ಶಂಕರಡ್ಡ, ಪುಷ್ಪರಾಜ್ ಪಿಲಿಕಜೆ, ವಸಂತ ಶಂಕರಡ್ಡ ಇವರೆಲ್ಲರು ಕೊಟ್ಟು ಸಹಕರಿಸಿದರು.

ರಾಮಣ್ಣ ಗೌಡ ಹೊಸಮನೆ ಪೆರ್ಲೆ ಹಾಗೂ ಚಿದಾನಂದ ಶೆಟ್ಟಿ ಸಹಕರಿಸಿದರು. ಪಿಲಿಕಜೆ ಬೈಲುವಾರು ಸಮಿತಿಯ ಕಾರ್ಯದರ್ಶಿಯರಾದ ಅಶೋಕ ಪಿಲಿಕಜೆ ಧನ್ಯವಾದ ಸಲ್ಲಿಸಿದರು.

Leave a Comment

error: Content is protected !!