July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರಮದಾನ

ನಿಡ್ಲೆ: ಪಿಲಿಕಜೆ ಬೈಲುವಾರು ಸಮಿತಿಯ ವತಿಯಿಂದ ಇತ್ತೀಚೆಗೆ ಶ್ರಮದಾನ ನಡೆಯಿತು. ಪ್ರತಿವರ್ಷದಂತೆ 7ನೇ ವರ್ಷದ ಶ್ರಮದಾನವು ನಿಡ್ಲೆ ರಾಜ್ಯ ಹೆದ್ದಾರಿಯಿಂದ ಪಟ್ರಮೆ ಜಿ.ಪಂ ರಸ್ತೆಯ 2 ಬದಿಯ ಗಿಡಗಂಟಿ ಕಡಿದು ಪ್ರಯಾಣಿಕರ ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ಮಾಡಿದರು.

ಡಾಂಬರು ರಸ್ತೆ ಅಲ್ಲಲ್ಲಿ, ದೊಡ್ಡದಾದ ಹೊಂಡಗಳಿಗೆ ಮಣ್ಣು ಹಾಕಿ ಸಮತಟ್ಟಗೊಳಿಸಲಾಯಿತು. ಕಳೆಕೊಚ್ಚುವ ಯಂತ್ರವನ್ನು ಲಕ್ಷ್ಮಣ ಗೌಡ ನಂಜಿಲ, ಕೃಷ್ಣಪ್ರಸಾದ್ ಐತೂರು, ಪದ್ಮನಾಭ ನಕ್ಕರೆ ಪದ್ಮಯ್ಯಗೌಡ ಪಿಲಿಕಜೆ, ಪೂವಪ್ಪ ಗೌಡ ಪರಾಂಡ, ಚೀಂಕ್ರ ಮಾಪಲಾಜೆ, ಬೆಳಗಿನ ಉಪಹಾರವನ್ನು ರಾಜೇಶ್ ಉಳ್ಳಾಲ್ತಿ ಚಿಕನ್ ಸೆಂಟರ್ ನಿಡ್ಲೆ ಹಾಗೂ ಪಿಕಪ್ ವ್ಯವಸ್ಥೆಯನ್ನು ಜಿತೇಂದ್ರ ಶೆಟ್ಟಿ, ಪೆಟ್ರೋಲ್ ವ್ಯವಸ್ಥೆಯನ್ನು ಯಾದವ್ ಸಣಿಲ, ಊಟದ ವ್ಯವಸ್ಥೆಯನ್ನು ಅಧ್ಯಕ್ಷರಾದ ಹೊನ್ನಪ್ಪಗೌಡ ಹಿರಿಂಬಿ, ತಂಪು ಪಾನೀಯ ವ್ಯವಸ್ಥೆಯನ್ನು ನಾರಾಯಣ ಮಾಪಲಾಜೆ, ಜಯಪ್ರಸಾದ್ ಪರಾಂಡ, ಗೋವಿಂದಗೌಡ, ಶಂಕರಡ್ಡ, ಪುಷ್ಪರಾಜ್ ಪಿಲಿಕಜೆ, ವಸಂತ ಶಂಕರಡ್ಡ ಇವರೆಲ್ಲರು ಕೊಟ್ಟು ಸಹಕರಿಸಿದರು.

ರಾಮಣ್ಣ ಗೌಡ ಹೊಸಮನೆ ಪೆರ್ಲೆ ಹಾಗೂ ಚಿದಾನಂದ ಶೆಟ್ಟಿ ಸಹಕರಿಸಿದರು. ಪಿಲಿಕಜೆ ಬೈಲುವಾರು ಸಮಿತಿಯ ಕಾರ್ಯದರ್ಶಿಯರಾದ ಅಶೋಕ ಪಿಲಿಕಜೆ ಧನ್ಯವಾದ ಸಲ್ಲಿಸಿದರು.

Related posts

ತುಳು ಶಿವಳ್ಳಿ ಸಭಾ: ದಶಮಾನೋತ್ಸವ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಜೆ ಇ ಇ ಮೈನ್ಸ್ ನಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya

ತೋಟತ್ತಾಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

Suddi Udaya

ಡಿ.14: ಮುಂಡೂರು ನಾಗಾಂಬಿಕಾ ಕ್ಷೇತ್ರದಲ್ಲಿ 40ಕ್ಕೂ ಮಿಕ್ಕಿ ಭಜನಾ ಮಂಡಳಿಗಳಿಂದ ಏಕಕಾಲದಲ್ಲಿ ಕಣಿತ ಭಜನೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಡಾ.ಹೆಗ್ಗಡೆಯವರ ವ್ಯಕ್ತಿತ್ವದ ತೇಜೋವಧೆ: ಭಾರತೀಯ ಜೈನ್ ಮಿಲನ್ ಸಭೆಯಲ್ಲಿ ಖಂಡನಾ ನಿರ್ಣಯ

Suddi Udaya

ಕನ್ಯಾಡಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ ವಿತರಣೆ

Suddi Udaya
error: Content is protected !!