July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರಮದಾನ

ನಿಡ್ಲೆ: ಪಿಲಿಕಜೆ ಬೈಲುವಾರು ಸಮಿತಿಯ ವತಿಯಿಂದ ಇತ್ತೀಚೆಗೆ ಶ್ರಮದಾನ ನಡೆಯಿತು. ಪ್ರತಿವರ್ಷದಂತೆ 7ನೇ ವರ್ಷದ ಶ್ರಮದಾನವು ನಿಡ್ಲೆ ರಾಜ್ಯ ಹೆದ್ದಾರಿಯಿಂದ ಪಟ್ರಮೆ ಜಿ.ಪಂ ರಸ್ತೆಯ 2 ಬದಿಯ ಗಿಡಗಂಟಿ ಕಡಿದು ಪ್ರಯಾಣಿಕರ ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ಮಾಡಿದರು.

ಡಾಂಬರು ರಸ್ತೆ ಅಲ್ಲಲ್ಲಿ, ದೊಡ್ಡದಾದ ಹೊಂಡಗಳಿಗೆ ಮಣ್ಣು ಹಾಕಿ ಸಮತಟ್ಟಗೊಳಿಸಲಾಯಿತು. ಕಳೆಕೊಚ್ಚುವ ಯಂತ್ರವನ್ನು ಲಕ್ಷ್ಮಣ ಗೌಡ ನಂಜಿಲ, ಕೃಷ್ಣಪ್ರಸಾದ್ ಐತೂರು, ಪದ್ಮನಾಭ ನಕ್ಕರೆ ಪದ್ಮಯ್ಯಗೌಡ ಪಿಲಿಕಜೆ, ಪೂವಪ್ಪ ಗೌಡ ಪರಾಂಡ, ಚೀಂಕ್ರ ಮಾಪಲಾಜೆ, ಬೆಳಗಿನ ಉಪಹಾರವನ್ನು ರಾಜೇಶ್ ಉಳ್ಳಾಲ್ತಿ ಚಿಕನ್ ಸೆಂಟರ್ ನಿಡ್ಲೆ ಹಾಗೂ ಪಿಕಪ್ ವ್ಯವಸ್ಥೆಯನ್ನು ಜಿತೇಂದ್ರ ಶೆಟ್ಟಿ, ಪೆಟ್ರೋಲ್ ವ್ಯವಸ್ಥೆಯನ್ನು ಯಾದವ್ ಸಣಿಲ, ಊಟದ ವ್ಯವಸ್ಥೆಯನ್ನು ಅಧ್ಯಕ್ಷರಾದ ಹೊನ್ನಪ್ಪಗೌಡ ಹಿರಿಂಬಿ, ತಂಪು ಪಾನೀಯ ವ್ಯವಸ್ಥೆಯನ್ನು ನಾರಾಯಣ ಮಾಪಲಾಜೆ, ಜಯಪ್ರಸಾದ್ ಪರಾಂಡ, ಗೋವಿಂದಗೌಡ, ಶಂಕರಡ್ಡ, ಪುಷ್ಪರಾಜ್ ಪಿಲಿಕಜೆ, ವಸಂತ ಶಂಕರಡ್ಡ ಇವರೆಲ್ಲರು ಕೊಟ್ಟು ಸಹಕರಿಸಿದರು.

ರಾಮಣ್ಣ ಗೌಡ ಹೊಸಮನೆ ಪೆರ್ಲೆ ಹಾಗೂ ಚಿದಾನಂದ ಶೆಟ್ಟಿ ಸಹಕರಿಸಿದರು. ಪಿಲಿಕಜೆ ಬೈಲುವಾರು ಸಮಿತಿಯ ಕಾರ್ಯದರ್ಶಿಯರಾದ ಅಶೋಕ ಪಿಲಿಕಜೆ ಧನ್ಯವಾದ ಸಲ್ಲಿಸಿದರು.

Related posts

ಓಡಿಲ್ನಾಳ: ಬಟ್ಟೆಮಾರ್ ನಲ್ಲಿ ಧರ್ಣಪ್ಪ ಪೂಜಾರಿ ಯವರ ಮನೆಗೆ ಗುಡ್ಡ ಕುಸಿತ

Suddi Udaya

ಕಂಬಳ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ

Suddi Udaya

ಕಾಶಿಪಟ್ಣ: ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ : ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

Suddi Udaya

ವೇಣೂರು ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 666ನೇ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಮಾಸಾಶನ ಜನಮಂಗಳ ಕಾರ್ಯಕ್ರಮ: ಪರೋಪಕಾರ ಮತ್ತು ಭಕ್ತಿಯ ಭಗವಂತನ ಆರಾಧನೆಯಿಂದ ಜೀವನ ಪಾವನ: ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು

Suddi Udaya
error: Content is protected !!