September 6, 2026
ಅಪರಾಧ ಸುದ್ದಿ

ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕೆಡವಿದ ಪ್ರಕರಣ: ಶಿಬಾಜೆಯ ಮಹಿಳೆಯಿಂದ ಪೊಲೀಸರಿಗೆ ದೂರು

ಶಿಬಾಜೆ: ನಮ್ಮ ಪಟ್ಟಾ ಜಮೀನಿಗೆ ಸೇರಿದ ಜಾಗದಲ್ಲಿದ್ದ ನಮ್ಮ ಅಂಗಡಿ ಕಟ್ಟಡವನ್ನು ರಾತ್ರಿ ಸಮಯ ಕೆಡವಿ ಹಾಕಿರುವುದಾಗಿ ಶಿಬಾಜೆ ಗ್ರಾಮದ ಅರಂಪಾದೆ ಶ್ರೀಮತಿ ಲತಾ ಪಿ.ಎಸ್ ಅವರು ಟಿ.ಕೆ ಮ್ಯಾಥ್ಯು ಮತ್ತಿತರರ ಮೇಲೆ ಆರೋಪ ಹೊರಿಸಿ ಡಿ.20ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ನಮ್ಮ ವಶದಲ್ಲಿದ್ದ ಪಟ್ಟಾ ಜಮೀನಿನ ಲಗ್ತಿ ಜಾಗದಲ್ಲಿ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದ ಸುತ್ತ ಅವರು ಡಿ.14ರಂದು ಬೇಲಿ ನಿರ್ಮಾಣ ಮಾಡಿದ್ದರು. ಸದ್ರಿ ಬೇಲಿಯನ್ನು ನಾನು ಮತ್ತು ನನ್ನ ಗಂಡ ತೆರವುಗೊಳಿಸಿದ್ದೆವು. ಇದನ್ನು ತಿಳಿದ ಅವರು ಡಿ.19ರಂದು ಬೆಳಗ್ಗೆ ಅನಾವಶ್ಯಕವಾಗಿ ತಗಾದೆ ತೆಗೆದು ನಮಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಠಾಣೆಗೆ ದೂರು ನೀಡಿದ್ದೇವೆ. ಇದನ್ನು ತಿಳಿದ ಅವರು ಡಿ.19ರಂದು ತಡರಾತ್ರಿ ಅಂಗಡಿ ಕಟ್ಟಡ ಇರುವ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕಡವುತ್ತಿದ್ದ ಸಂದರ್ಭ ಆಕ್ಷೇಪಿಸಿದ ನಮಗೆ ಜೀವಬೆದರಿಕೆ ಹಾಕಿರುವುದಾಗಿ ಲತಾ ಪಿ.ಎಸ್ ಡಿ.2೦ರಂದು ಧರ್ಮಸ್ಥಳ ಠಾಣೆಗೆ ಮತ್ತೊಂದು ದೂರು ನೀಡಿದ್ದಾರೆ.

Related posts

ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಬಿಹಾರದ ಆರೋಪಿಯನ್ನು ಹೆಡೆಮುರಿ ಕಟ್ಟಿದ ವೇಣೂರು ಪೊಲೀಸರು

Suddi Udaya

ಬರಾಯಕೆರೆ ಕಪ್ಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಭೇಟಿ

Suddi Udaya

ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಥಾರ್

Suddi Udaya

ಶಿಬಾಜೆ ಬರ್ಗುಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವತಿ ಸಾವು: ರೂ.25 ಲಕ್ಷ ಪರಿಹಾರ ನೀಡುವಂತೆ ಮೆಸ್ಕಾಂ ಇಲಾಖೆಗೆ ಶಾಸಕ ಹರೀಶ್ ಪೂಂಜಾ ಆಗ್ರಹ

Suddi Udaya

ಮಾಚಾರು: ಕೊಲೆಯತ್ನ ಪ್ರಕರಣ ಆರೋಪಿಗಳಿಗೆ ಹೈಕೋರ್ಟ್ ಜಾಮೀನು

Suddi Udaya

ಅಕ್ರಮ ಮದ್ಯ ಮಾರಾಟ ಪೊಲೀಸರ ದಾಳಿ

Suddi Udaya
error: Content is protected !!