July 23, 2026
ಅಪರಾಧ ಸುದ್ದಿ

ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕೆಡವಿದ ಪ್ರಕರಣ: ಶಿಬಾಜೆಯ ಮಹಿಳೆಯಿಂದ ಪೊಲೀಸರಿಗೆ ದೂರು

ಶಿಬಾಜೆ: ನಮ್ಮ ಪಟ್ಟಾ ಜಮೀನಿಗೆ ಸೇರಿದ ಜಾಗದಲ್ಲಿದ್ದ ನಮ್ಮ ಅಂಗಡಿ ಕಟ್ಟಡವನ್ನು ರಾತ್ರಿ ಸಮಯ ಕೆಡವಿ ಹಾಕಿರುವುದಾಗಿ ಶಿಬಾಜೆ ಗ್ರಾಮದ ಅರಂಪಾದೆ ಶ್ರೀಮತಿ ಲತಾ ಪಿ.ಎಸ್ ಅವರು ಟಿ.ಕೆ ಮ್ಯಾಥ್ಯು ಮತ್ತಿತರರ ಮೇಲೆ ಆರೋಪ ಹೊರಿಸಿ ಡಿ.20ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ನಮ್ಮ ವಶದಲ್ಲಿದ್ದ ಪಟ್ಟಾ ಜಮೀನಿನ ಲಗ್ತಿ ಜಾಗದಲ್ಲಿ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದ ಸುತ್ತ ಅವರು ಡಿ.14ರಂದು ಬೇಲಿ ನಿರ್ಮಾಣ ಮಾಡಿದ್ದರು. ಸದ್ರಿ ಬೇಲಿಯನ್ನು ನಾನು ಮತ್ತು ನನ್ನ ಗಂಡ ತೆರವುಗೊಳಿಸಿದ್ದೆವು. ಇದನ್ನು ತಿಳಿದ ಅವರು ಡಿ.19ರಂದು ಬೆಳಗ್ಗೆ ಅನಾವಶ್ಯಕವಾಗಿ ತಗಾದೆ ತೆಗೆದು ನಮಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಠಾಣೆಗೆ ದೂರು ನೀಡಿದ್ದೇವೆ. ಇದನ್ನು ತಿಳಿದ ಅವರು ಡಿ.19ರಂದು ತಡರಾತ್ರಿ ಅಂಗಡಿ ಕಟ್ಟಡ ಇರುವ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಟ್ಟಡ ಕಡವುತ್ತಿದ್ದ ಸಂದರ್ಭ ಆಕ್ಷೇಪಿಸಿದ ನಮಗೆ ಜೀವಬೆದರಿಕೆ ಹಾಕಿರುವುದಾಗಿ ಲತಾ ಪಿ.ಎಸ್ ಡಿ.2೦ರಂದು ಧರ್ಮಸ್ಥಳ ಠಾಣೆಗೆ ಮತ್ತೊಂದು ದೂರು ನೀಡಿದ್ದಾರೆ.

Related posts

ಬಜಿರೆಯಲ್ಲಿ ಎರಡು ಕುಟುಂಬಗಳ ನಡುವೆ ಜಾಗದ ಪಾಲಿನ ವಿಷಯದಲ್ಲಿ ಹೊಡೆದಾಟ: ಪರಸ್ಪರ ಆರೋಪಿಸಿ ಪೊಲೀಸರಿಗೆ ದೂರು

Suddi Udaya

ಸವಣಾಲು: ಹುಲಿ ಗಣತಿಗೆ ಹಾಕಿದ್ದ ಕ್ಯಾಮೆರಾಗಳ ಕಳ್ಳತನ

Suddi Udaya

ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ: ಇಬ್ಬರ ವಿರುದ್ಧ ಪ್ರಕರಣ ದಾಖಲು

Suddi Udaya

ಬೆಳಾಲು ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಬಡೆಕ್ಕಿಲ್ಲಾ ಬರ್ಬರ ಹತ್ಯೆ ಪ್ರಕರಣ: ಆಸ್ತಿ ಪಾಲಿನ ವಿಚಾರದಲ್ಲಿ ಆಳಿಯ ಮತ್ತು ಮೊಮ್ಮಗನಿಂದ ಕೊಲೆ ಪ್ರಕರಣ ಬೆಳಕಿಗೆ- ಪೊಲೀಸರ ಯಶಸ್ವಿ ಕಾರ್ಯಾಚರಣೆ- ಕಾಸರಗೋಡಿನ ಮನೆಯಿಂದ ಆರೋಪಿಗಳಿಬ್ಬರ ಬಂಧನ

Suddi Udaya

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವ‌ರ್ ವಿರುದ್ಧ ದಾಖಲಾಗಿದ್ದ FIR ರದ್ದುಗೊಳಿಸಿ ಹೈ ಕೋರ್ಟ್ ಆದೇಶ

Suddi Udaya

ಮೂರು ವರ್ಷಗಳ ಹಿಂದೆ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣ: ಮರು ತನಿಖೆಗೆ ಎಸ್.ಐ.ಟಿ ರಚಿಸಿ ರಾಜ್ಯ ಸರಕಾರ ಆದೇಶ

Suddi Udaya
error: Content is protected !!