ಬೆಳ್ತಂಗಡಿ ರಾಮ ಭಕ್ತರಿಂದ ರಾಮೋತ್ಸವ ಸಂಭ್ರಮ: ಅಯೋಧ್ಯ ಕರ ಸೇವೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಕಣ್ಣಾಜೆರವರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ : ಅಯೋಧ್ಯ ನಗರದ ಶ್ರೀರಾಮ ಪ್ರತಿಷ್ಠಾ ಕಾರ್ಯಕ್ರಮ ಪ್ರಯುಕ್ತ ಬೆಳ್ತಂಗಡಿ ರಾಮಭಕ್ತರಿಂದ ರಾಮ ನಾಮ ತಾರಕ ಮಂತ್ರ, ಹನುಮಾನ್ ಚಾಲೀಸ್ ಪಠಣ, ದೀಪೋತ್ಸವ ಸುಡು ಮದ್ದು ಪ್ರದರ್ಶನ, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಲ್ಲ ಇವರಿಂದ ಕುಣಿತ ಭಜನೆ, ಅಯೋಧ್ಯ ಕರಸೇವೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಕಣ್ಣಾಜೆ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮವು ಜ.22ರಂದು ಬೆಳ್ತಂಗಡಿ ಸಂತೆಕಟ್ಟೆ ರಾಮನಗರ ಅಯ್ಯಪ್ಪ ದೇವಸ್ಥಾನ ವಠಾರದಲ್ಲಿ ಜರಗಿತ್ತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಪಟ್ಟ ಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಯನಂದ ಗೌಡ, ಭಾರತೀಯ ಮಜೂರ್ ಸಂಘ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಪ್ರಕಾಶ್ ಆಚಾರ್ಯ, ಸ್ವಸ್ತಿಕ್ ಸಂಕೇತ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!