September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ “ಆನ್‌ಪ್ಲೈ” ಲಾಯಿಲದಲ್ಲಿ ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಆರಂಭ ಗೊಂಡು ಪ್ರಖ್ಯಾತಿಗಳಿಸಿರುವ ಜವಳಿ ಮಳಿಗೆ ಆನ್ ಸಿಲ್ಕ್ ನ ಸಹ ಸಂಸ್ಥೆ ಹೋಲ್ ಸೇಲ್ ಹಾಗೂ ರಖಂ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ ‘ಆನ್‌ಪ್ಲೈ’
ಲಾಯಿಲ ವಿಆರ್‌ಎಲ್ ಕಚೇರಿ ಹತ್ತಿರದ ಸಿಕ್ವೇರ ಕಂಪೌಂಡ್‌ನಲ್ಲಿ ನ.8 ರಂದು ಶುಭಾರಂಭ ಗೊಂಡಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೇಮ್ಸ್ ಪಟ್ಟೇರಿಲ್ ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಡಾ. ಲಾರೆನ್ಸ್ ಮುಕ್ಕುಯಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬಳಿಕ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೇಮ್ಸ್ ಪಟ್ಟೇರಿಲ್ ಪ್ರಾಥ೯ನಾ‌ ವಿಧಿಯನ್ನು ನೆರವೇರಿಸಿ, ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಮಂಗಳೂರು ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬದ್ಯಾರು ಸೈಂಟ್ ರಾಫೆಲ್ ಚರ್ಚ್ ಧರ್ಮಗುರು ಫಾ| ರೋಶನ್ ಕ್ರಾಸ್ತ , ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಸುರೇಶ್ ಬಂಗೇರ ಎಂ.ಡಿ., ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೊ, ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಚೇಯರ್‌ಮೆನ್ ಸಯ್ಯದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಸುಗಂಧಿ, ಸಿಕ್ವೇರಾ ಕಾಂಪ್ಲೆಕ್ಸ್ ಮಾಲಕ ಕ್ಲಿಟಸ್ ವಿಜಯ್ ವಿಲ್ಪ್ರೆಡ್ ಸಿಕ್ವೇರಾ, ಬೆಳ್ತಂಗಡಿ ಧರ್ಮಪ್ರಾಂತ್ಯ ಕೆಪಿಸಿಡಿಸಿ ಸಂಯೋಜಕ ಜೈಸನ್ ಪಟ್ಟೇರಿ, ಕೆಎಸ್‌ಎಂಸಿಎ ಬೆಳ್ತಂಗಡಿ ಘಟಕ ಅಧ್ಯಕ್ಷ ರೆಜಿ ಜಾರ್ಜ್ ಉಪಸ್ಥಿತರಿದ್ದರು.

ಆಡಳಿತ ಪಾಲುದಾರರಾದ ಯೇಸುದಾಸ್ ಎನ್.ಜೆ., ಶ್ರೀಮತಿ ಡಯಾನಾ ಮತ್ತು ಜೀವನ್ ಜೀಸನ್, ಜಿಸ್ನಾ (ಆನ್ ಮರಿಯ) ಆಗಮಿಸಿದ ಅತಿಥಿ-ಗಣ್ಯರನ್ನು ಗೌರವಿಸಿದರು. ಫ್ರಾನ್ಸಿಸ್ ವಿ.ವಿ ಮಡಂತ್ಯಾರು ಕಾಯ೯ಕ್ರಮ ನಿರೂಪಿಸಿದರು. ಜೀವನ್ ಧನ್ಯವಾದವಿತ್ತರು.

ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯ: ನೂತನ ಸಂಸ್ಥೆಯಲ್ಲಿ ಹೋಲ್‌ಸೇಲ್ ಹಾಗೂ ರಖಂ ದರದಲ್ಲಿ ಇರುವ ಉತ್ಪನ್ನಗಳು ಪ್ಲೈವುಡ್, ಬ್ಲಾಕ್ ಬೋರ್ಡ್, ಫ್ಲಶ್ ಡೋರ್, ಲ್ಯಾಮಿನೇಟ್, ಹಾರ್ಡ್ವೇರ್, ವೆನೀರ್, MDF&HDMR ಬೋರ್ಡ್ಗಳು, ಪಿವಿಸಿ ಫೋಮ್ ಬೋರ್ಡ್, WPC ಡೋರ್ ಮತ್ತು ಫ್ರೇಮ್, ಮೆಂಬರನೇ ಡೋರ್, WPC ಬೋರ್ಡ್ಗಳು, ಪಾರ್ಟಿಕಲ್ ಬೋರ್ಡ್ಗಳು ಇತ್ಯಾದಿ ಲಭ್ಯವಿದೆ.

Related posts

ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ, ರತ್ನಗಿರಿ ಪುನರ್ ಪ್ರತಿಷ್ಠಾ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ

Suddi Udaya

2023-24ನೇ ಸಾಲಿನಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

Suddi Udaya

ಪಾಲಡ್ಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ

Suddi Udaya

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ದಿಗ್ವಿಜಯ: ಬೆಳ್ತಂಗಡಿಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ

Suddi Udaya

ತೀರಾ ಹದಗೆಟ್ಟ ಪಡಂಗಡಿ ರಸ್ತೆ: ದುರಸ್ತಿಗೊಳಿಸುವಂತೆ ಪಡಂಗಡಿ ಗ್ರಾಮಸ್ಥರಿಂದ ಮನವಿ

Suddi Udaya
error: Content is protected !!