April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಬೆಳಾಲಿನಲ್ಲಿ, ಹದಿನೆಂಟು ದಿನಗಳ ಭಗವದ್ಗೀತೆ ತರಗತಿಯ ಸಮಾರೋಪ

ಬೆಳಾಲು: ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ವತಿಯಿಂದ ಕಳೆದ ಸಪ್ಟಂಬರ ತಿಂಗಳಲ್ಲಿ ಆರಂಭಗೊಂಡ ಭಗವದ್ಗೀತೆಯ ತರಗತಿಯು, ಹದಿನಂಟು ತರಗತಿಗಳನ್ನು ಪೂರೈಸುವುದರೊಂದಿಗೆ ಮುಕ್ತಾಯಗೊಂಡಿತು.

ಕೊಲ್ಪಾಡಿ ಭಜನಾ ಮಂಡಳಿಯವರು ಪ್ರತೀ ಶನಿವಾರ ವಾರದ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಈ ಸಂದರ್ಭದಲ್ಲಿ ಸೇರುವ ಭಜಕರಿಗೆ ಭಗವದ್ಗೀತೆಯ ವಿಶೇಷ ತರಗತಿಯನ್ನು ಆಯೋಜಿಸಲಾಗಿತ್ತು.

ಭಗವದ್ಗೀತೆಯ ತರಗತಿಯನ್ನು ನಿರಂತರವಾಗಿ ಹಾಗೂ ಸಮರ್ಥ ಗುರುಗಳಾಗಿ ನಡೆಸಿಕೊಟ್ಟವರು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು. ಪ್ರತೀ ತರಗತಿಯಲ್ಲಿ ಒಂದು ಅಧ್ಯಾಯದ ಆಯ್ದ ಶ್ಲೋಕಗಳ ವಾಚನದ ಅಭ್ಯಾಸ ಹಾಗೂ ಸೂಕ್ಷ್ಮವಾಗಿ ಅರ್ಥ ವಿವರಣೆ. ಜೊತೆಗೆ ಪ್ರಧಾನವಾಗಿ ಮಹಾಭಾರತದ ಮತ್ತು ರಾಮಾಯಣದ ಕಥೆಗಳನ್ನು ಹೇಳಿಕೊಡಲಾಗುತ್ತಿತ್ತು. ಗುರುಗಳ ಸಮರ್ಥ ನಿರ್ವಹಣೆ, ಆಕರ್ಷಕ ವಿವರಣೆ, ಚಿಕ್ಕ ಮಕ್ಕಳಿಗೂ ಅರ್ಥ ಆಗುವ ಭಾಷೆ ಮತ್ತು ಪದ ಪ್ರಯೋಗ ತರಗತಿಯನ್ಧು ಅರ್ಥಪೂರ್ಣವಾಗಿಸಿತು.

ಈ ತರಗತಿಯ ಮೂಲಕ ಭಾರತದ ಸಂಸ್ಕೃತಿಯ, ಜೀವನ ಮೌಲ್ಯಗಳ ಪರಿಚಯ ಮತ್ತು ಪ್ರಸಾರದ ಕಾರ್ಯವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯವರು ಶ್ರದ್ಧಾ ಭಕ್ತಿಯಿಂದ ನಡೆಸಿಕೊಟ್ಟಿದ್ದಾರೆ. ಮಂಡಳಿಯ ಅಧ್ಯಕ್ಷರಾದ ಸದಾಶಿವ ಮೈರಾಜೆ ಮತ್ತು ಸದಸ್ಯರೆಲ್ಲರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನರವರಿಗೆ ” ಕನ್ನಡ ರಾಜ್ಯೋತ್ಸವ ಪ್ರಶಸ್ತಿ”

Suddi Udaya

ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಡಾ ರವಿಕುಮಾರ್ ವಿತರಿಸಿದರು.

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ಚಾಲನೆ: ಧ್ವಜಾರೋಹಣ, ಉತ್ಸವ ಬಲಿ, ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ರೆಖ್ಯ: 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು

Suddi Udaya
error: Content is protected !!