22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಪಟಾಕಿ ಅಂಗಡಿಗಳಿಗೆ ಅಧಿಕಾರಿಗಳಿಂದ ಪರಿಶೀಲನೆ: ಪಟಾಕಿ ದಾಸ್ತಾನು ಮಾಡಿದ್ದ ಮೂರು ಗೋದಾಮಿಗೆ ಬೀಗ

ಬೆಳ್ತಂಗಡಿ : ವೇಣೂರು ಪಟಾಕಿ ತಯಾರಿಕೆ ಮಾಡುವ ವೇಳೆ ಸ್ಫೋಟಗೊಂಡ ಪ್ರಕರಣ ಸಂಬಂಧ ಪಟಾಕಿ ಮಾರಾಟ ಮತ್ತು ಗೋಡೌನ್ ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ಜ.29 ರಂದು ಜಿಲ್ಲಾಧಿಕಾರಿ ರದ್ದು ಮಾಡಿದ್ದಾರೆ. ಈ ಸಂಬಂಧ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಮೇಲೆ ಜ.30 ರಂದು ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 9 ಕಡೆ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಇದ್ದು. ಬೆಳ್ತಂಗಡಿ ತಹಶೀಲ್ದಾರ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಜ.30 ರಂದು ಏಕಕಾಲದಲ್ಲಿ 7 ಸ್ಥಳಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿ ಪಟಾಕಿ ಮಾರಾಟ ಮತ್ತು ದಾಸ್ತಾನು ಮಾಡದಂತೆ ಅಂಗಡಿಗೆ ನೋಟಿಸ್ ಅಂಟಿಸಿದ್ದಾರೆ.

ಮೂರು ಪಟಾಕಿ ದಾಸ್ತಾನು ಗೋಡೌನ್ ಸೀಝ್: ಉಜಿರೆ ಪ್ರಭಾತ್ ಸ್ಟೋರ್ ,ಬೆಳ್ತಂಗಡಿ ಮುಖ್ಯರಸ್ತೆ ಬೆಳ್ತಂಗಡಿ ಜನರಲ್ ಮರ್ಚೆಂಟ್ , ಚಾಮುಂಡೇಶ್ವರಿ ಎಂಟರ್ ಪ್ರೈಸಸ್ ಬೆಳ್ತಂಗಡಿ ಇದರ ಮೂರು ಗೋಡೌನ್ ನಲ್ಲಿ ಪಟಾಕಿ ದಾಸ್ತಾನು ಮಾಡಲಾಗಿದ್ದು ಇದನ್ನು ಕಂದಾಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮುಂದಿನ ಸರಕಾರದ ಆದೇಶದವರೆಗೂ ಬೀಗ ಹಾಕಿದ್ದಾರೆ.

ದಾಳಿ ಮಾಡಲಾದ ಪಟಾಕಿ ಅಂಗಡಿಗಳು: ಬೆಳ್ತಂಗಡಿಯ ಎಸ್.ಪುಂಡಲೀಕ ಭಟ್ ಮಾಲೀಕತ್ವದ ಪ್ರಭಾತ್ ಸ್ಟೋರ್, ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿರುವ ಕೆ.ಮಂಜುನಾಥ್ ಕಾಮತ್ ಮಾಲೀಕತ್ವದ ಜನರಲ್ ಮರ್ಚೆಂಟ್, ಬೆಳ್ತಂಗಡಿಯ ಸುಧೀರ್ ಹೊಳ್ಳ ಮಾಲೀಕತ್ವದ ಚಾಮುಂಡೇಶ್ವರಿ ಎಂಟರ್ ಪ್ರೈಸಸ್ , ಉಜಿರೆಯ ಬಿ.ರಾಜರಾಮ್ ಭಟ್ ಮಾಲೀಕತ್ವದ ಮಂಜು ಶ್ರೀ ಸ್ಟೋರ್ , ಉಜಿರೆಯ ಪ್ರಭಾತ್ ಸ್ಟೋರ್, ಪುಂಜಾಲಕಟ್ಟೆಯ ಬಿ.ವಸಂತ ಬಾಳಿಗ ಮಾಲೀಕತ್ವದ ವಸಂತ್ ಸ್ಟೋರ್ , ವೇಣೂರಿನ ಬಿ.ಮೋಹನ್ ದಾಸ್ ನಾಯಕ್ ಸೇರಿದಂತೆ ಏಳು ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ರಿಜಿನಲ್ ಫೈರ್ ಅಫಿಸರ್ ರಂಗನಾಥ್ ಮತ್ತು ಸಿಬ್ಬಂದಿಗಳು ಮತ್ತು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಐತಿಹಾಸಿಕ “ಧರ್ಮಯಾನ” ಶೋಭಾಯಾತ್ರೆ: ಉಜಿರೆ ಉದ್ಯಮಿ ಕೆ. ಮೋಹನ್ ಕುಮಾರ್ ಅವರಿಗೆ “ಶ್ರೀ ಜನಾರ್ಧನ ವಿಭೂಷಣ ಗೌರವ”

Suddi Udaya

ನಡ : ಮಂಜೊಟ್ಟಿ ಬಿ.ಕೆ ಹರಿಪ್ರಸಾದ್ ಅನುದಾನದಲ್ಲಿ ನಿರ್ಮಾಣವಾದ ಆಟೋ ನಿಲ್ದಾಣ ಉದ್ಘಾಟನೆ

Suddi Udaya

ಲಾಯಿಲ ಗ್ರಾ.ಪಂ ಹಾಗೂ ನಡ ಗ್ರಾ.ಪಂ. ನಿಂದ “ಸ್ವಚತೆಯೇ ಸೇವೆ 2024” ಅಂದೋಲನದಡಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ

Suddi Udaya

ಆ.15: ತೆಂಕಕಾರಂದೂರು- ಕಾಪಿನಡ್ಕ ಗೆಳೆಯರ ಬಳಗ ಮತ್ತು ಶ್ರೀ ಹರಿ ಭಜನಾ ಮಂಡಳಿಯಿಂದ ಮೊಸರು ಕುಡಿಕೆ ಉತ್ಸವ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕ ಮತ್ತು ರೋವರ್ಸ್ ಹಾಗೂ ರೇಂಜರ್ಸ್ ಬಂಗೇರ ದಳದ ವತಿಯಿಂದ ಗಾಂಧಿಜಯಂತಿಯ ಪ್ರಯುಕ್ತ ಸ್ವಚ್ಚತಾ ಹೀ ಭಾರತ ಅಭಿಯಾನ

Suddi Udaya

ಮೇಲಂತಬೆಟ್ಟು: ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya
error: Content is protected !!