28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಭಯ ಜಿಲ್ಲಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಇದರ ವಾರ್ಷಿಕ ಕ್ರೀಡಾಕೂಟ

ಬೆಳ್ತಂಗಡಿ:ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲಾ ಮೊಬೈಲ್ ರಿಟೇಲರ್ ( ಮಾಲಕರ )ಸಂಘದ ವಾರ್ಷಿಕ ಕ್ರೀಡಾಕೂಟ ಮಂಗಳೂರಿನ ಕೆ ಪಿ ಟಿ ಕ್ರಿಡಾಂಗಣದಲ್ಲಿ ನಡೆಯಿತು .

ಕ್ರೀಡಾ ಕೂಟವನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಮೊಬೈಲ್ ರಿಟೇಲರ್ ಅಸೊಶಿಯೇಶನ್ ಇದರ ಅಧ್ಯಕ್ಷ ಮೊಹಮ್ಮದ್ ಮುನೀರ್, ಉಪಾಧ್ಯಕ್ಷ ಉಮೇಶ್ ಬೆಳ್ತಂಗಡಿ ಹಾಗೂ ಕಾರ್ಯದರ್ಶಿಯಾದ ಅರಿಹಂತ್ ಜೈನ್ ರವರು ಉದ್ಘಾಟಿಸಿದರು.

ಉಭಯ ಜಿಲ್ಲೆಯ ಪ್ರಮುಖ 8 ತಾಲ್ಲೂಕು ತಂಡಗಳು ಕ್ರೀಡಾ ಕೂಟದಲ್ಲಿ ಪಾಳ್ಗೊಂಡಿದವು .
ಕ್ರಿಕೆಟ್ ವಿಭಾಗದಲ್ಲಿ ಮಂಗಳೂರು ತಂಡ ಪ್ರಥಮ ಸ್ಥಾನಗಳಿಸಿದರೆ, ಉಡುಪಿ ದ್ವಿತೀಯ ಸ್ಥಾನ ಪಡೆಯಿತು. ಹಗ್ಗ ಜಗ್ಗಾಟದಲ್ಲಿ ಮೂಡಬಿದಿರೆ ಪ್ರಥಮ ಸ್ಥಾನ ಪಡೆದರೆ ಉಡುಪಿ ದ್ವಿತೀಯ ಸ್ಥಾನ ಪಡೆಯಿತು.

ಸಂಚಾಲಕರಾಗಿ ರಿಯಾಜ್ ಮಂಗಳೂರು ಹಾಗೂ ಫಾರೂಖ್ ಮೂಡಬಿದ್ರೆ ಕ್ರೀಡಾ ಕೂಟವನ್ನು ನಡೆಸಿ ಕೊಟ್ಟರು. ಉಭಯ ಜಿಲ್ಲೆಯ ರಿಟೆಲರ್ ಅಸೊಶಿಯೇಶನ್ ಇದರ ಸ್ಥಾಪಕ ಅಧ್ಯಕ್ಷರಾದ ಸಲೀಮ್ ಮೊಬೈಲ್ ಕೇರ್, ಗೌರವ ಅಧ್ಯಕ್ಷರಾದ ಗುರುದತ್ ಕಾಮತ್, ಕೋಶಾಧಿಕಾರಿ ಮೊಹಮ್ಮದ್ ಅಜ಼ರ್, ಜೊತೆ ಕಾರ್ಯದರ್ಶಿ ರಾಘವೇಂದ್ರ ಕಿನ್ನಿಗೊಳಿ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ಶೈಲೆಂದ್ರ ಶರಲಾಯ, ಕಾರ್ಯದರ್ಶಿ ಪ್ರಶಾಂತ್ ಕಾರ್ಕಳ ಉಪಸ್ಥಿತರಿದ್ದರು.

Related posts

ಪಾಕ್ ನ ಉಗ್ರವಾದದ ನಿಜ ಬಣ್ಣ ಬಯಲು ಮಾಡಲು ವಿದೇಶಕ್ಕೆ ಹೊರಟ ಸರ್ವಪಕ್ಷಗಳ ನಿಯೋಗ

Suddi Udaya

ಬ್ರಿಜೇಶ್ ಚೌಟ ಗೆಲುವು, ಉಜಿರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಧ್ವಜಾರೋಹಣದೊಂದಿಗೆ ಪ್ರಾರಂಭ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಡಿಸಿಸಿ ಬ್ಯಾಂಕ್ ನಿಂದ ಸತತ 6ನೇ ಬಾರಿಗೆ ಪ್ರಶಸ್ತಿ

Suddi Udaya

ತಾಲೂಕು ಮಟ್ಟದ ಎರಡು ದಿನದ ತುಳು ಸಾಹಿತ್ಯ ರಚನಾ ಕಮ್ಮಟದ ಸಮಾರೋಪ

Suddi Udaya

ನಿಡ್ಲೆ : ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Suddi Udaya
error: Content is protected !!