
ಕೊಕ್ಕಡ: ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಸೇವಾ ಕೌಂಟರ್ ಫೆ.2ರಂದು ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ರವರು ಉದ್ಘಾಟಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಕೆನರಾ ಬ್ಯಾಂಕಿನ ನಿವೃತ ಡಿ.ಜಿ.ಎಂ ಉದಯ್ ಭಟ್, ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಅಂಕಿತ್ ಸಿಂಗ್, ದೇವಳದ ಆಡಳಿತ ಅಧಿಕಾರಿ ಕೆ.ವಿ ಶ್ರೀನಿವಾಸ್, ಕುಶಾಲಪ್ಪ ಗೌಡ ಪೂವಾಜೆ, ಇಂಜಿನಿಯರ್ ದಿನೇಶ್ ರಾವ್, ವಿಜಯ್ ಪ್ರಕಾಶ್ ಶುಕ್ಲಾ, ಸುರೇಶ್ ಎಂ, ಗಿರಿಧರ್ ಕಲ್ಲಾಪು, ಬಿಪಿನ್, ಮೋಹನ್ ರಾವ್, ಯತೀಶ್, ಅವಿನಾಶ್, ಅರ್ಚಕರಾದ ಸತ್ಯಪ್ರಿಯ ಕಲ್ಲುರಾಯ, ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಗುರುರಾಜ್ ಉಪ್ಪರ್ಣ, ಬಾಲಕೃಷ್ಣ ನೈಮಿಷ, ಆಡಳಿತ ಮಂಡಳಿಯ ಸದಸ್ಯರು ಹಾಗೂ ದೇವಳದ ಸಿಬ್ಬಂದಿ ವರ್ಗ ಮತ್ತು ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಳದ ಸೇವಾ ಕೌಂಟರ್ ಗೆ ಗ್ರಾನೈಟ್ ಉಚಿತವಾಗಿ ನೀಡಿದ ದಿನೇಶ್ ರಾವ್ ಬೆಂಗಳೂರು ಹಾಗೂ ದೇವಳದ ಅಭಿವೃದ್ಧಿಯಲ್ಲಿ ಕೆನರಾ ಬ್ಯಾಂಕಿನ ವತಿಯಿಂದ ಕೈ ಜೋಡಿಸಿದ ಉದಯ್.ಕೆ ಮತ್ತು ಅಂಕಿತ್ ಸಿಂಗ್ ದಂಪತಿಗಳನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.













