ಮಲವಂತಿಗೆ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.02 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಅ.ಖಾ.ಹಿ. ಪ್ರಾ. ಶಾಲಾ ವಠಾರದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಮುಖ್ಯ ಪಶು ವೈದ್ಯಾಧಿಕಾರಿ ಮಂಜ ನಾಯ್ಕ ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ಎಳನೀರು ಗುತ್ಯಡ್ಕ ಶಾಲೆಗೆ ಶಿಕ್ಷಕರ ಕೊರತೆ ಇರುವುದರ ಬಗ್ಗೆ ಮಲವಂತಿಗೆ ಗ್ರಾ. ಪಂ ಅಧ್ಯಕ್ಷ ಪ್ರಕಾಶ್ ರವರು ಶಿಕ್ಷಣ ಇಲಾಖಾ ಅಧಿಕಾರಗಳ ಜೊತೆ ಚರ್ಚಿಸಿ ಈ ಶಾಲೆಗಳಲ್ಲಿ ಅನೇಕ ಜನ ಮಕ್ಕಳಿದ್ದು ಅವರಿಗೆ ಭೋದಿಸುವಂತಹ ಶಿಕ್ಷಕರು ಇಲ್ಲ, ಮಕ್ಕಳ ಭವಿಷ್ಯ ಅಗತ್ಯ, ಶಾಲೆ ಮುಚ್ಚುವುದಕ್ಕೆ ಶಿಕ್ಷಣ ಇಲಾಖೆಗಳೇ ಕಾರಣ. ಯಾವುದೇ ಮಕ್ಕಳಾದರೂ ಅವರಿಗೆ ಉತ್ತಮ ರೀತಿಯ ಶಿಕ್ಷಣ ಸಿಗಬೇಕು ಆದಷ್ಟು ಬೇಗ ಈ ಶಾಲೆಗಳಿಗೆ ಶಿಕ್ಷಕರ ನೇಮಾಕಾತಿ ಮಾಡಿಸುವುದಕ್ಕೆ ಆಗ್ರಾಹ ಮಾಡಿದರು. ಹಾಗೂ ಸಭೆಯ ನಡುವೆ ತೆರಳುವಂತಹ ಅಧಿಕಾರಗಳ ವಿರುದ್ಧ ಗರಂ ಆದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ರೋಹಿಣಿ, ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿ ಬಿ ಸ್ವಾಗತಿಸಿ, ನಿರ್ವಹಿಸಿದರು ಹಾಗೂ ಕಳೆದ ಗ್ರಾಮ ಸಭೆಯ ನಡವಳಿಗಳ ಬಗ್ಗೆ ಅನುಪಾಲನ ವರದಿ ವಾಚಿಸಿದರು.
ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.













