September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ : ವೀಲ್ ಚೇರ್ ಹಸ್ತಾಂತರ

ಬೆಳ್ತಂಗಡಿ ತಾಲೂಕು ಬಳೆಂಜ ಗ್ರಾಮದ ತೆಂಕಕಾರಂದೂರಿನ ಶ್ರೀ ಪ್ರಶಾಂತ ಹಾಗೂ ಶ್ರೀಮತಿ ಲಾವಣ್ಯ ಅವರ ಎರಡನೇ ಪುತ್ರಿ ,ಏಳು ವರ್ಷ ಪ್ರಾಯದ ಕು.ಮಾನ್ಯ ಹುಟ್ಟಿನಿಂದಲೇ ಬುದ್ದಿಮಾಂದ್ಯ ಹಾಗೂ ವಿಕಲಚೇತನೆ. ಎಲ್ಲಾ ಕೆಲಸಗಳಿಗೂ ಇನ್ನೊಬ್ಬರನ್ನೇ ಅವಲಂಬಿತವಾಗಿರ ಬೇಕಾದಂತಹ ಸನ್ನಿವೇಶ.

ಇಂತಹ ಪರಿಸ್ಥಿತಿ ಯಲ್ಲಿ.ಉಜಿರೆ ಗ್ರಾಮ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರಾದ ವಿಪುಲ್ ಪೂಜಾರಿ ಅವರ ಮನವಿಗೆ ಕೂಡಲೇ ಸ್ಪಂದಿಸಿದ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘವು , ಆ ವಿಕಲಚೇತನ ಮಗುವಿಗಾಗಿ ರೂ 19000/- ಮೌಲ್ಯ ದ ವಿಶೇಷ ವೀಲ್ ಚೇರ್ ನ್ನು ಇಂದು ಅವರ ಮನೆಗೆ ಹೋಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಧರ ಕೆ.ವಿ, ಪೂರ್ವಾಧ್ಯಕ್ಷರಾದ ನವೀನ್ ಚಂದ್ರ ಕಜೆಕಾರ್, ಕೋಶಾಧಿಕಾರಿ ಗಣಪತಿ ಭಟ್, ಸಂಚಾಲಕರಾದ ಪ್ರಕಾಶ್ ಹಾಗೂ ಉಜಿರೆ ಗ್ರಾಮ ದ ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ ಹಾಗೂ ಬಳೆಂಜ ಗ್ರಾಮದ ಪುನರ್ವಸತಿ ಕಾರ್ಯಕರ್ತೆ ಕು.ವಿನೋದ ಇವರುಗಳು ಉಪಸ್ಥಿತರಿದ್ದರು

Related posts

ಇಂದಬೆಟ್ಟುನಲ್ಲಿ ಮೆಸ್ಕಾಂ 33ಕೆವಿ ಸಬ್‌ಸ್ಟೇಷನ್ ನಿರ್ಮಾಣಕ್ಕೆ 66 ಸೆಂಟ್ಸ್ ಜಾಗ ಮಂಜೂರು

Suddi Udaya

ನಿಡ್ಲೆ ಗ್ರಾಮ ಪಂಚಾಯತಿನಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಬೆಳ್ತಂಗಡಿ ಘಟಕ ವತಿಯಿಂದ ಪರಿಸರ ಸ್ವಚ್ಚತಾ ಆಂದೋಲನ

Suddi Udaya

ರಾಜ್ಯಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ :ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಚಾಂಪಿಯನ್

Suddi Udaya

ತಣ್ಣೀರುಪಂತ: ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.2.26 ಕೋಟಿ ವ್ಯವಹಾರ, ರೂ.5.47 ಲಕ್ಷ ಲಾಭ

Suddi Udaya

ಸುಲ್ಕೇರಿ: ಶ್ರೀರಾಮ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

Suddi Udaya
error: Content is protected !!