23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಬೆಲ್ಡೆ ಗುಂಡ ಶ್ರೀ ಪಂಚಧೂಮವತಿ ವರ್ಷಾವಧಿ ಜಾತ್ರೋತ್ಸವ

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಬೆಲ್ಡೆ ಗುಂಡ ಶ್ರೀ ಪಂಚಧೂಮವತಿ ದೇವಸ್ಥಾನದ ವರ್ಷಾವಧಿ ಜಾತ್ರೆ ಫೆ.13 ರಂದು ಫೆ.15 ರ ತನಕ ವಿವಿಧ ಸಾಂಸ್ಕೃತಿಕ ಹಾಗೂ ಕ್ಷೇತ್ರದ ದೈವಗಳಿಗೆ ನೇಮೋತ್ಸವ ಜರಗಿತು.


ಫೆ. 13 ರಂದು ಗೊನೆ ಮೂರ್ತ,ಪಡಿಯಕ್ಕಿ ವಿತರಣೆ, ಶ್ರೀ ಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಮಹಾ ಪೂಜೆ,ಫೆ‌.14 ರಂದು ಕಲಶ ಮಹಾ ಪೂಜೆ,ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಭಜನೆ,ಮಹಾಪೂಜೆ, ಬಲಿ,ಕವಾಟ ಬಂಧನ,ಫೆ.15 ರಂದು ಕೊಯ್ಯೂರು ಉಣಿಲೆ ಗುತ್ತಿನಿಂದ ದೈವಗಳ ಭಂಡಾರ ಆಗಮನ, ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿ,ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ, ಕೊಯ್ಯೂರು ನಾದ ನಾಟ್ಯಾಲ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.ರಾತ್ರಿ ಅನ್ನದಾನದ ಸೇವಾರ್ಥಿ ಕೊಯ್ಯೂರು ಕಡಮ್ಮಾಜೆ ಶ್ರೀಮತಿ ಹೇಮಾವತಿ ಮತ್ತು ಉಮೇಶ್ ಗೌಡ ಮನೆಯವರಿಂದ ನಡೆಯಿತು.


ರಾತ್ರಿ ಕ್ಷೇತ್ರದ ದೈವಗಳಿಗೆ ಮತ್ತು ಉಳ್ಳಾಲ್ತಿ ದೈವದ ನೇಮೋತ್ಸವ ಮತ್ತು ಮಹಾ ಪೂಜೆ ಜರುಗಿತು. ಫೆ.16 ರಂದು ಸಂಪ್ರೋಕ್ಷಣೆ ಮಹಾ ಪೂಜೆಯೊಂದಿಗೆ ಸಮಾಪನಗೊಂಡಿದೆ.
ವರ್ಷಾವಧಿ ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಚಂಡಭಾನು ಪಾಂಬೇಲು,ಅಧ್ಯಕ್ಷ ವಸಂತ ಗೌಡ ಕಡಮ್ಮಾಜೆ, ಉಪಾಧ್ಯಕ್ಷ ವಿಜಯ ಗೌಡ ಬರೆ ಮೇಲು, ಆಡಳಿತ ಮೊಕ್ತೇಸರ ಕೆ.ಬಿ.ಹರಿಶ್ಚಂದ್ರ ಬಲ್ಲಾಳ್,ಕೊಯ್ಯೂರು ದೇವಸ್ಥಾನದ ಪ್ರಧಾನ ಅರ್ಚಕ ಆಶೋಕ್ ಕಮಾರ್,ಕಾರ್ಯದರ್ಶಿ ದನಜಂಯ ಆಚಾರ್ಯ ಕೊಡ್ಯೇಲು, ಜತೆ ಕಾರ್ಯದರ್ಶಿ ಪದ್ಮನಾಭ ಗೌಡ ಬೊಳೋಳಿ, ಕೋಶಾಧಿಕಾರಿ ಪೆರ್ನು ಗೌಡ ಬೆಲ್ಡೆ, ಉಪ ಕೋಶಾಧಿಕಾರಿ ಶೇಖರ ಗೌಡ ಬೊಳೊಳಿ,ಭಜನ ಮಂಡಳಿ ಸದಸ್ಯರು, ವಿವಿಧ ಸಂಘದ ಪದಾಧಿಕಾರಿಗಳು ಮತ್ತು ಭಕ್ತರು ಆಗಮಿಸಿದರು.

Related posts

ಮದ್ದಡ್ಕ ಬಸ್ ನಿಲ್ದಾಣದ ಬದಿಯ ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆ: ಸಂಬಂಧಪಟ್ಟವರು ಕೂಡಲೇ ಗಮನಹರಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya

ನಡ: ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ

Suddi Udaya

ಗೇರುಕಟ್ಟೆ : ಪರಪ್ಪು ಜಮಾಅತಿನ ಗೌರವಾದ್ಯಕ್ಷರಾಗಿ ಕಾಜೂರು ತಂಙಳ್ ರವರು ಅಧಿಕಾರ ಸ್ವೀಕಾರ ಮತ್ತು ಮಹಾಸಭೆ

Suddi Udaya

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸೇವಾಭಾರತಿಗೆ ಅಂಬ್ಯುಲೆನ್ಸ್ ಕೊಡುಗೆ

Suddi Udaya

ಬೆಳ್ತಂಗಡಿ ತುಳುನಾಡು ಕೋಳಿ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನೆ: ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಉಚ್ಚೂರು, ಪ್ರ.ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲಾ ಅಮೃತ ಕೊಯ್ಲು- ಅಮೃತ ಮಹೋತ್ಸವ: ಕೆ.ಮೋಹನ್ ಕುಮಾರ್ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡ ಶಾಲೆಗೆ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ: ಕೆ. ಮೋಹನ್ ಕುಮಾರ್ ದಂಪತಿಗಳಿಗೆ ಹಾಗೂ ಸುಮಂತ್ ಕುಮಾರ್ ಜೈನ್, ಹರೀಶ್ ಆರಿಕೋಡಿ, ರಕ್ಷಿತ್ ಶಿವರಾಂ ರವರುಗಳಿಗೆ ಸನ್ಮಾನ

Suddi Udaya
error: Content is protected !!