July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

ಗುರುವಾಯನಕೆರೆ: ಕಳೆದ ಹಲವಾರು ವರ್ಷಗಳಿಂದ ನಿಸರ್ಗ ಕರ್ಟನ್ ಹಾಗೂ ವಾಲ್ ಪೇಪರ್ ಉದ್ಯಮದೊಂದಿಗೆ ಉತ್ತಮ ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆ ನೀಡಿ ಗ್ರಾಹಕರೊಂದಿಗೆ ಉತ್ತಮ ಸಂಭಂಧ ಹೊಂದಿರುವ ನಾಗೇಶ್ ಕೋಟ್ಯಾನ್ ರವರ ನಿಸರ್ಗ ಆರ್ಕೇಡ್‌ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ ಫೆ.೨೪ ರಂದು ನಡೆಯಲಿದೆ.


ಪ್ರಸಿದ್ದ ಗುರುವಾಯನಕೆರೆಯ ಮುಂಭಾಗದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಉತ್ತಮ ವಿನ್ಯಾಸ ಮಾಡಲಾಗಿದೆ. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ವಿವಿಧ ಉದ್ಯಮಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಲಾಗಿದೆ. ಇಗಾಗಲೇ ಬಾಡಿಗೆಗೆ ಅಂಗಡಿ ಕೋಣೆಗಳ ಬುಕ್ಕಿಂಗ್ ಪೂರ್ಣಗೊಂಡಿದೆ. ಮೂರನೇ ಮಹಡಿಯಲ್ಲಿ ನಿಸರ್ಗ ಮನೆ ನಿರ್ಮಿಸಿದ್ದು ಮನೆಯು ವಾಸ್ತು ಹಾಗೂ ವಿವಿಧ ವಿನ್ಯಾಸದಿಂದ ಕೂಡಿದ್ದು ಎಲ್ಲರ ಗಮನ ಸೆಳೆಯಲಿದೆ.


ನಿಸರ್ಗ ಆರ್ಕೇಡ್‌ಗೆ ಆಗಮಿಸುವ ಗ್ರಾಹಕರಿಗೆ ಅನುಕೂಲವಾಗುವಂತೆ ಲಿಪ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯಿದೆ. ಭದ್ರತೆಗಾಗಿ ಸಿಸಿ ಕ್ಯಾಮರ ಅಳವಡಿಸಲಾಗಿದೆ.
ಪ್ರಶಾಂತ ಹಾಗೂ ಸುಂದರ ಪರಿಸರದ ಗುರುವಾಯನಕೆರೆಯ ಮುಂಭಾಗದಲ್ಲಿರುವ ನಿಸರ್ಗ ಆರ್ಕೇಡ್‌ಗೆ ಕೆರೆಯ ಸೌಂದರ್ಯದಿಂದ ಇನ್ನಷ್ಟು ಮೆರಗು ಬಂದಿದೆ.
ಫೆ.24 ಶನಿವಾರ ಗಂಟೆ 11.25 ಕ್ಕೆ ವೃಷಭ ಲಗ್ನದಲ್ಲಿ ನಡೆಯುವ ನಿಸರ್ಗ ಆರ್ಕೇಡ್‌ನ ಶುಭಾರಂಭ ಹಾಗೂ ಗೃಹ ಪ್ರವೇಶಕ್ಕೆ ಬಂಧು-ಮಿತ್ರರು ಆಗಮಿಸಿ ಶುಭವನ್ನು ಹಾರೈಸಬೇಕಾಗಿ ಸಂಸ್ಥೆಯ ಮಾಲಕರಾದ ನಾಗೇಶ್ ಕೋಟ್ಯಾನ್ ಮತ್ತು ಶ್ರೀಮತಿ ಯಶ್ಮಿತಾ ನಾಗೇಶ್, ಮಕ್ಕಳಾದ ಮಾ. ಯಶ್ವಿನ್ ಎನ್, ಮಾ ಯುವಿನ್ ಎನ್. ಪ್ರಕಟಣೆಯಲ್ಲಿ ತಿಳಿಸಿದರು.

ಬೆಳಿಗ್ಗೆ ಗಂಟೆ 10.00ಕ್ಕೆ ನಿಸರ್ಗ ಆರ್ಕೇಡ್ ಉದ್ಘಾಟನೆ, ದಿವಾ ಗಂಟೆ 11.25ಕ್ಕೆ ವೃಷಭ ಲಗ್ನದಲ್ಲಿ ಗೃಹ ಪ್ರವೇಶ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಗಂಟೆ 5.30 ಕ್ಕೆ ಕುಣಿತಾ ಭಜನೆ, ಸಂಜೆ 7.30ಕ್ಕೆ ದುರ್ಗಾ ಪೂಜೆ ನಡೆಯಲಿದೆ.

Related posts

ಉಜಿರೆ : ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಮಾ.24: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಬೆಳ್ತಂಗಡಿಗೆ ಭೇಟಿ

Suddi Udaya

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಆಡಳಿತ ಮಂಡಳಿಯಿಂದ ಭಾರತೀಯ ಸೇನೆಗೆ ಆಯ್ಕೆಯಾದ ಪ್ರೀತಮ್ ಜೈನ್ ರವರಿಗೆ ಗೌರವ

Suddi Udaya

ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ: ಮಿತ್ತಬಾಗಿಲು ನಿವಾಸಿ ಕಬೀರ್ ಬಂಧನ

Suddi Udaya

ನಾಳ: ಆಟೋ ಮಾಲಕ ಚಾಲಕ ಜಾರಪ್ಪ ಶೆಟ್ಟಿ ನಿಧನ

Suddi Udaya

ಬೆಳ್ತಂಗಡಿ ಪಿಡಬ್ಲೂಡಿ ಎಇಇ ಆಗಿ ಸಂಜೀವ ಕುಮಾರ್ ಜಿ .ಕೆ.

Suddi Udaya
error: Content is protected !!