ಕಣಿಯೂರು ಶೌರ್ಯ ವಿಪತ್ತು ನಿರ್ವಹಣೆ ಘಟಕದ ಮಾಸಿಕ ಸಭೆ

Suddi Udaya

ಕಣಿಯೂರು : ಕಣಿಯೂರು ಶೌರ್ಯ ವಿಪತ್ತು ನಿರ್ವಹಣೆ ಘಟಕದ ಮಾಸಿಕ ಸಭೆಯು ಪದ್ಮುಂಜ ಸಿ ಎ ಬ್ಯಾಂಕ್ ಸಭಾ ಭವನದಲ್ಲಿ ಮಾ.7 ರಂದು ನಡೆಯಿತು.

ಸಭೆಯಲ್ಲಿ ಕಣಿಯೂರು ವಲಯ ಮೇಲ್ವಿಚಾರಕ ಶಿವಾನಂದ ರವರು ಘಟಕವನ್ನು ಬಲಪಡಿಸುವ ಬಗ್ಗೆ ಮತ್ತು ಪ್ರತಿ ತಿಂಗಳು ಘಟಕದ ಮಾಸಿಕ ಸಭೆ ಮತ್ತು ಒಂದು ಸೇವಾಕಾರ್ಯ ನಡೆಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.


ಮಾಸಿಕ ಸಭೆಯಲ್ಲಿ ಘಟಕದ ಸಂಯೋಜಕರಾದ ಶ್ರೀಲತ, ಘಟಕ ಪ್ರತಿನಿಧಿ ಶರತ್, ಸ್ವಯಂ ಸೇವಕರಾದ ಆನಂದ ಗೌಡ, ದಿನೇಶ್, ಸುಂದರ, ಉಮೇಶ್ , ರತನ್, ಪ್ರಶಾಂತ್, ಪುರುಷೋತ್ತಮ್, ಸೇವಾಪ್ರತಿನಿಧಿಗಳಾದ ಪ್ರೇಮ, ಸರೋಜ ನಿರಂಜನ್ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ಸ್ವಾಗತಿಸಿ, ಧನ್ಯವಾದ ವಿತ್ತರು.

Leave a Comment

error: Content is protected !!