25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ: ಮನೆಗೆ ನುಗ್ಗಿದ್ದ ಕಳ್ಳರು : ಸುಮಾರು ರೂ.46450 ಮೌಲ್ಯದ ಸೊತ್ತುಗಳು ಕಳವು

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಸುಬರ್ನಿ ರವರ ಮನೆಯಲ್ಲಿ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿ ಯಾರೋ ಕಳ್ಳರು ಒಳಗೆ ನುಗ್ಗಿ ಸುಮಾರು ರೂ.46450 ಮೌಲ್ಯ ದ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿದೆ.

ಕಳಿಯ ಗ್ರಾಮದ ಸುಬರ್ನಿ ಬಿರಾ ರವರು, ಜ.11. ರಿಂದ ಮಾ. 01ರವರೆಗೆ ಮನೆಯಿಂದ ಹೋಗಿದ್ದು ಇದರ ಮಧ್ಯೆ ಪತಿ ಉಮ್ಮರ್ ಫಾರೂಕ್ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಫೆ.29 ರಂದು ವಶಕ್ಕೆ ಪಡೆದಿದ್ದು ಈ ಮಾಹಿತಿಯನ್ನು ಪಿರ್ಯಾದಿದಾರರ ನೆರೆಕರೆಯವರು ದೂರವಾಣಿ ಮೂಲಕ ತಿಳಿಸಿದ್ದರು.
‌‌ಇದನ್ನು‌ ತಿಳಿದ ಸುಬರ್ನಿರವರು ಮಾ.02 ರಂದು ಮನೆಗೆ ಬಂದು ನೋಡಿದಾಗ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿದ್ದು ಅಲ್ಲದೇ ಮನೆಯಲ್ಲಿರುವ ಸೊತ್ತುಗಳಾದ, ಹೆಚ್ .ಪಿ ಕಂಪನಿಯ ಖಾಲಿ ಸಿಲೆಂಡರ್ -01 ಅಂದಾಜು ಮೌಲ್ಯ 4500/-, ಡಾ| ವಾಶ್ ಸೋಪ್-15 ಅಂದಾಜು ಮೌಲ್ಯ 600/-, ಲಿರ್ಲಾ ಸೊಪ್ -10 ಅಂದಾಜು ಮೌಲ್ಯ 550/-, 3 ಪವರ್ ಬ್ಯಾಂಕ್ ಅಂದಾಜು ಮೌಲ್ಯ ರೂ 4500/-, ಐ ಪೋನ್ ಏರ್ಪೋಡ್ -01 ಅಂದಾಜು ಮೌಲ್ಯ 26000/-, ಟೇಕ್ನೊ ಸ್ಮಾರ್ಟ್ ವಾಚ್ -01 ಅಂದಾಜು ಮೌಲ್ಯ 4500/-, ಡಕ್ -01 ಅಂದಾಜು ಮೌಲ್ಯ -450, ಕೋಳಿ 3-ಅಂದಾಜು ಮೌಲ್ಯ 1200/-, 2 ಟೀ ಶರ್ಟ್ ಅಂದಾಜು ಮೌಲ್ಯ ರೂ 800/-, ಮೊಬೈಲ್ ಚಾರ್ಚ್ ರ್ 03 ಅಂದಾಜು ಮೌಲ್ಯ ರೂ 950/, ಪರಪ್ಪು ದರ್ಗಾ ಬಾಕ್ಸ್ -1 ಅಂದಾಜು ಮೌಲ್ಯ 1200 ರೂ ಗುರುವಾಯನಕೆರೆ ದರ್ಗಾ ಬಾಕ್ಸ್ 01 ಅಂದಾಜು ಮೌಲ್ಯ 1200 ರೂ, ಆಗಿದ್ದು ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 46,450/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆ ಅ.ಕ್ರ ನಂ 34/2024 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಕ್ಯಾಂಪ್ಕೊ ವತಿಯಿಂದ ಸಹಾಯಧನ ವಿತರಣೆ

Suddi Udaya

ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ, ಭಯಭೀತರಾದ ಗ್ರಾಮಸ್ಥರು: ಚಿರತೆ ಸೆರೆಹಿಡಿಯಲು ಸ್ಥಳೀಯರ ಸಹಕಾರದಲ್ಲಿ ಇಲಾಖೆ ವತಿಯಿಂದ ಬೋನು ಅಳವಡಿಕೆ

Suddi Udaya

ಅಕ್ಷಯ ಕಾಲೇಜಿನ ಬಿಕಾಂ ವಿಥ್ ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ

Suddi Udaya

ಗಣೇಶ ಚತುರ್ಥಿಯ ರಜೆಯನ್ನು ಬದಲಾಯಿಸುವಂತೆ ಮನವಿ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷರ ಪೀಠಾರೋಹಣ ವರ್ದಂತಿ: ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶುಭಾಶಯ

Suddi Udaya

ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಪಂದ್ಯಾಟಕ್ಕೆ ಎಸ್.ಡಿ.ಎಂ ಕಾಲೇಜಿನ 9 ವಿದ್ಯಾರ್ಥಿಗಳು ಆಯ್ಕೆ

Suddi Udaya
error: Content is protected !!