September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ: ಮನೆಗೆ ನುಗ್ಗಿದ್ದ ಕಳ್ಳರು : ಸುಮಾರು ರೂ.46450 ಮೌಲ್ಯದ ಸೊತ್ತುಗಳು ಕಳವು

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಸುಬರ್ನಿ ರವರ ಮನೆಯಲ್ಲಿ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿ ಯಾರೋ ಕಳ್ಳರು ಒಳಗೆ ನುಗ್ಗಿ ಸುಮಾರು ರೂ.46450 ಮೌಲ್ಯ ದ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿದೆ.

ಕಳಿಯ ಗ್ರಾಮದ ಸುಬರ್ನಿ ಬಿರಾ ರವರು, ಜ.11. ರಿಂದ ಮಾ. 01ರವರೆಗೆ ಮನೆಯಿಂದ ಹೋಗಿದ್ದು ಇದರ ಮಧ್ಯೆ ಪತಿ ಉಮ್ಮರ್ ಫಾರೂಕ್ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಫೆ.29 ರಂದು ವಶಕ್ಕೆ ಪಡೆದಿದ್ದು ಈ ಮಾಹಿತಿಯನ್ನು ಪಿರ್ಯಾದಿದಾರರ ನೆರೆಕರೆಯವರು ದೂರವಾಣಿ ಮೂಲಕ ತಿಳಿಸಿದ್ದರು.
‌‌ಇದನ್ನು‌ ತಿಳಿದ ಸುಬರ್ನಿರವರು ಮಾ.02 ರಂದು ಮನೆಗೆ ಬಂದು ನೋಡಿದಾಗ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿದ್ದು ಅಲ್ಲದೇ ಮನೆಯಲ್ಲಿರುವ ಸೊತ್ತುಗಳಾದ, ಹೆಚ್ .ಪಿ ಕಂಪನಿಯ ಖಾಲಿ ಸಿಲೆಂಡರ್ -01 ಅಂದಾಜು ಮೌಲ್ಯ 4500/-, ಡಾ| ವಾಶ್ ಸೋಪ್-15 ಅಂದಾಜು ಮೌಲ್ಯ 600/-, ಲಿರ್ಲಾ ಸೊಪ್ -10 ಅಂದಾಜು ಮೌಲ್ಯ 550/-, 3 ಪವರ್ ಬ್ಯಾಂಕ್ ಅಂದಾಜು ಮೌಲ್ಯ ರೂ 4500/-, ಐ ಪೋನ್ ಏರ್ಪೋಡ್ -01 ಅಂದಾಜು ಮೌಲ್ಯ 26000/-, ಟೇಕ್ನೊ ಸ್ಮಾರ್ಟ್ ವಾಚ್ -01 ಅಂದಾಜು ಮೌಲ್ಯ 4500/-, ಡಕ್ -01 ಅಂದಾಜು ಮೌಲ್ಯ -450, ಕೋಳಿ 3-ಅಂದಾಜು ಮೌಲ್ಯ 1200/-, 2 ಟೀ ಶರ್ಟ್ ಅಂದಾಜು ಮೌಲ್ಯ ರೂ 800/-, ಮೊಬೈಲ್ ಚಾರ್ಚ್ ರ್ 03 ಅಂದಾಜು ಮೌಲ್ಯ ರೂ 950/, ಪರಪ್ಪು ದರ್ಗಾ ಬಾಕ್ಸ್ -1 ಅಂದಾಜು ಮೌಲ್ಯ 1200 ರೂ ಗುರುವಾಯನಕೆರೆ ದರ್ಗಾ ಬಾಕ್ಸ್ 01 ಅಂದಾಜು ಮೌಲ್ಯ 1200 ರೂ, ಆಗಿದ್ದು ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 46,450/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆ ಅ.ಕ್ರ ನಂ 34/2024 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

Suddi Udaya

ಧರ್ಮಸ್ಥಳ ನಾರ್ಯ ದಲ್ಲಿ ಸೇತುವೆ ಕುಸಿತ

Suddi Udaya

ಕೊಕ್ಕಡ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ

Suddi Udaya

ಪುದುವೆಟ್ಟು : ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅಳದಂಗಡಿ ಶ್ರೀ ಕ್ಷೇ ಧ. ಗ್ರಾ. ಯೋಜನೆಯ ಜನಜಾಗೃತಿ ಗ್ರಾಮಸಮಿತಿ ಸಭೆ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಧಾತ್ರಿ ಪಿ ನಾಲ್ಕೂರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya
error: Content is protected !!