September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನದ ವಾರ್ಷಿಕ ‌ಜಾತ್ರೆ: ದೀಕ್ಷಿತ್ ಅರಂತೊಟ್ಟು ಇವರ ‘ಡಿಲೈಟ್ ಡೆಕೋರೇಷನ್ಸ್’ ಉದ್ಘಾಟನೆ

ಕೊಯ್ಯೂರು : ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನ ಕೊಯ್ಯೂರು ಇದರ ವಾರ್ಷಿಕ ‌ಜಾತ್ರಾ ಮಹೋತ್ಸವದಂದು ಅರಂತೊಟ್ಟು ಕಟ್ಟೆಪೂಜೆಯನ್ನು ನೆರವೇರಿಸಲಾಯಿತು.

ಮೂಲಗುಂಡದಿಂದ‌ ಭಂಡಾರದ ಆಗಮನದ ಸಂದರ್ಭ ಸಂದೇಶ್ ಮದ್ದಡ್ಕ ಇವರ ನೇತೃತ್ವದಲ್ಲಿ ಸುಮಾರು 10 ಭಜನಾ ತಂಡಗಳಿಂದ ಭಜನಾ ‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ದೀಕ್ಷಿತ್ ಅರಂತೊಟ್ಟು ಇವರ ಡಿಲೈಟ್ ಡೆಕೋರೇಷನ್ಸ್ (Delight Decorations) ನ್ನು ದ್ವಾರಕಾ ಡ್ರೈವಿಂಗ್ ಸ್ಕೂಲ್ ‌ಮಾಲಕರಾದ ಯಶವಂತ ಆರ್ ಬಾಳಿಗಾ ಉದ್ಘಾಟಿಸಿದರು.

ಈ ವೇಳೆ ಅರಂತೊಟ್ಟು ‌ಕುಟುಂಬಸ್ಥರ ವತಿಯಿಂದ ‌ಬೆಳ್ತಂಗಡಿ‌ ತಾಲೂಕಿನ ‌ಹೆಸರಾಂತ ಸ್ನೇಕ್‌‌ಮಾಸ್ಟರ್ ಅಶೋಕ್‌‌ಕುಮಾರ್ ಲಾಯಿಲ ಹಾಗೂ ಚಂದ್ರಶೇಖರ ‌ಗೌಡ ಮಾವಿನಕಟ್ಟೆ ಇವರಿಗೆ ಸನ್ಮಾನವನ್ನು ಯಶವಂತ ಬಾಳಿಗಾ ಹಾಗೂ ಪ್ರವೀಣ್ ಗೌಡ ನೆರವೇರಿಸಿದರು.

ಈ‌‌ ಸಂದರ್ಭದಲ್ಲಿ ಹಿತೇಶ್ ಬಳ್ಳಾಲ್ ಕೊಯ್ಯೂರು ಗುತ್ತು, ತೃಪ್ತ ಜೈನ್‌ ಉಣಿಲೆ ಗುತ್ತು, ಯಶವಂತ ಬಾಳಿಗಾ ಬೆಳ್ತಂಗಡಿ, ಪ್ರವೀಣ್ ಗೌಡ ಮಾವಿನಕಟ್ಟೆ ಹಾಗೂ ಅರಂತೊಟ್ಟು ‌ಕುಟುಂಬಸ್ಥರು ಮತ್ತು ಭಕ್ತಾದಿಗಳು ಊರ ಪರವೂರ‌ ಗಣ್ಯರು ಉಪಸ್ಥಿತರಿದ್ದರು.

Related posts

ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ನಾಗತಂಬಿಲ ಸೇವೆ

Suddi Udaya

ಉಜಿರೆ ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಲೆನ್ಸಿ ಪಿಂಟೊ, ಉಪಾಧ್ಯಕ್ಷರಾಗಿ ಫ್ರಾನ್ಸಿಸ್ ವಿ.ವಿ ಅವಿರೋಧ ಆಯ್ಕೆ

Suddi Udaya

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕರ್ತರಿಗೆ ಸಾಮಾನ್ಯ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಮಾಲಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya
error: Content is protected !!