April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

ರೆಖ್ಯ: ರೆಖ್ಯದ ಬೀಡು ನಿವಾಸಿ ಬಾಲಕೃಷ್ಣ ಗೌಡ ಅವರು ತೋಟಕ್ಕೆ ಹೋಗಿದ್ದ ಸಮಯದಲ್ಲಿ ಬೋರ್‌ವೆಲ್ ವಿಷಯವಾಗಿ ಮಾತುಕತೆ ನಡೆಯುತ್ತಿರುವ ಸಂದರ್ಭ ಗಂಗಾಧರ ಎಂಬವರು ಬಾಲಕೃಷ್ಣ ಗೌಡ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದರೆಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕೃಷಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಾಲಕೃಷ್ಣರವರು ತಮ್ಮ ಸುರೇಶ್ ಎಂಬವರಿಗೆ ರೆಖ್ಯ ಗ್ರಾಮದ ದೇವಸ ಎಂಬಲ್ಲಿರುವ ಸುಮಾರು 2 ಎಕರೆ ಜಾಗದಲ್ಲಿ ತಂದೆ-ತಾಯಿ, ತಮ್ಮ ಒಟ್ಟಿಗೆ ಹಳೆ ಮನೆಯಲ್ಲಿ ಇದ್ದೇವೆ. ಇತ್ತೀಚಿಗೆ ಹೊಸಮನೆ ನಿರ್ಮಾಣದ ಕೆಲಸ ಆಗುತ್ತಿದ್ದು, ಈ ಬಗ್ಗೆ ನಾನು ನಿನ್ನೆ ದಿನ ರಾತ್ರಿ 10 ಗಂಟೆಗೆ ಮನೆಯ ಕೆಲಸದ ಬಗ್ಗೆ ಹೋದಾಗ, ತಮ್ಮನ ಜಾಗದ ಬದಿಯಲ್ಲಿ ಭವಾನಿ ಎಂಬವರು ಬೋರ್‌ವೆಲ್ ಕೊರೆಯುತ್ತಿದ್ದರು.

ಈ ಬಗ್ಗೆ ಅಲ್ಲಿಯ ಸ್ಥಳಿಯ ಪಂ. ಸದಸ್ಯರಾದ ನಾಗೇಶ್ ಎಂಬುವರು, ಯಾಕೆ ಬೋರ್‌ವೆಲ್ ಕೊರೆಯುವುದು ಎಂದು ಅವರೊಳಗೆ ಮಾತುಕತೆಯಾಗುತ್ತಿತ್ತು. ಆ ಸಮಯ ನಾನು ಯಾಕೆ ಮಾತನಾಡುವುದು ಅವರು ಪಾಪದವರು ಬೋರ್‌ವೆಲ್ ತೆಗೆಯಲಿ ಎಂದು ಹೇಳಿದಾಗ ಕೋಪಗೊಂಡ ಗಂಗಾಧರ ಬಂದು, ಬೈದು ಕೈಯಿಂದ ಹಲ್ಲೆ ನಡೆಸಿದರೆಂದು ಆರೋಪಿಸಿದ್ದಾರೆ, ಪೊಲೀಸರು ದೂರು ಸ್ವೀಕರಿಸಿದ್ದಾರೆ.

Related posts

ಬೆಳ್ತಂಗಡಿ ಬೋಧಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಿರಣ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ

Suddi Udaya

ಚಾರ್ಮಾಡಿ ಮೃತ್ಯುಂಜಯ ನದಿ ಕಿನಾರೆಯಲ್ಲಿ ದನದ ತ್ಯಾಜ್ಯ ಎಸೆದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Suddi Udaya

ಮಡಂತ್ಯಾರು: ಕೊಲ್ಪೆದಬೈಲು ಅತಿ೯ಲ ನಿವಾಸಿ ಜನಾನಂದ ಆಚಾರ್ಯ ನಿಧನ

Suddi Udaya

ಗೇರುಕಟ್ಟೆ ಹಿರಿಯರಾದ ಹಾಮದ್ ಕುಂಇೆ ನಿಧನ

Suddi Udaya

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಕ್ರಿಯಗೊಳಿಸಿ: ಎಂ ಸಿ ವೇಣುಗೋಪಾಲ್

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸೌರ ಯುಗಾದಿ ವಿಷು ಆಚರಣೆ

Suddi Udaya
error: Content is protected !!