22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

ರೆಖ್ಯ: ರೆಖ್ಯದ ಬೀಡು ನಿವಾಸಿ ಬಾಲಕೃಷ್ಣ ಗೌಡ ಅವರು ತೋಟಕ್ಕೆ ಹೋಗಿದ್ದ ಸಮಯದಲ್ಲಿ ಬೋರ್‌ವೆಲ್ ವಿಷಯವಾಗಿ ಮಾತುಕತೆ ನಡೆಯುತ್ತಿರುವ ಸಂದರ್ಭ ಗಂಗಾಧರ ಎಂಬವರು ಬಾಲಕೃಷ್ಣ ಗೌಡ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದರೆಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕೃಷಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಾಲಕೃಷ್ಣರವರು ತಮ್ಮ ಸುರೇಶ್ ಎಂಬವರಿಗೆ ರೆಖ್ಯ ಗ್ರಾಮದ ದೇವಸ ಎಂಬಲ್ಲಿರುವ ಸುಮಾರು 2 ಎಕರೆ ಜಾಗದಲ್ಲಿ ತಂದೆ-ತಾಯಿ, ತಮ್ಮ ಒಟ್ಟಿಗೆ ಹಳೆ ಮನೆಯಲ್ಲಿ ಇದ್ದೇವೆ. ಇತ್ತೀಚಿಗೆ ಹೊಸಮನೆ ನಿರ್ಮಾಣದ ಕೆಲಸ ಆಗುತ್ತಿದ್ದು, ಈ ಬಗ್ಗೆ ನಾನು ನಿನ್ನೆ ದಿನ ರಾತ್ರಿ 10 ಗಂಟೆಗೆ ಮನೆಯ ಕೆಲಸದ ಬಗ್ಗೆ ಹೋದಾಗ, ತಮ್ಮನ ಜಾಗದ ಬದಿಯಲ್ಲಿ ಭವಾನಿ ಎಂಬವರು ಬೋರ್‌ವೆಲ್ ಕೊರೆಯುತ್ತಿದ್ದರು.

ಈ ಬಗ್ಗೆ ಅಲ್ಲಿಯ ಸ್ಥಳಿಯ ಪಂ. ಸದಸ್ಯರಾದ ನಾಗೇಶ್ ಎಂಬುವರು, ಯಾಕೆ ಬೋರ್‌ವೆಲ್ ಕೊರೆಯುವುದು ಎಂದು ಅವರೊಳಗೆ ಮಾತುಕತೆಯಾಗುತ್ತಿತ್ತು. ಆ ಸಮಯ ನಾನು ಯಾಕೆ ಮಾತನಾಡುವುದು ಅವರು ಪಾಪದವರು ಬೋರ್‌ವೆಲ್ ತೆಗೆಯಲಿ ಎಂದು ಹೇಳಿದಾಗ ಕೋಪಗೊಂಡ ಗಂಗಾಧರ ಬಂದು, ಬೈದು ಕೈಯಿಂದ ಹಲ್ಲೆ ನಡೆಸಿದರೆಂದು ಆರೋಪಿಸಿದ್ದಾರೆ, ಪೊಲೀಸರು ದೂರು ಸ್ವೀಕರಿಸಿದ್ದಾರೆ.

Related posts

ಅಖಿಲ ಭಾರತ ವೃತ್ತಿ ಪರೀಕ್ಷೆ: ಎಸ್‌ಡಿಎಂ ಮಹಿಳಾ ಐಟಿಐ ಸಂಸ್ಥೆಗೆ ಶೇ.100 ಫಲಿತಾಂಶ

Suddi Udaya

ಅಂಡಿಂಜೆ: ಗಾಂದೋಟ್ಯ ನಿವಾಸಿ ಲಲಿತ ನಿಧನ

Suddi Udaya

ಕಳೆದ 18 ವರ್ಷಗಳಿಂದ ಪಡಂಗಡಿ ಪ್ರಾ.ಕೃ.ಪ.ಸ. ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಕೇಶಿನಿ ಎ ಅವರಿಗೆ ಕಾಯಕ ದೀಕ್ಷಾಮಣಿ ಪ್ರಶಸ್ತಿ ಪ್ರದಾನ

Suddi Udaya

ಮಚ್ಚಿನ: ರಸ್ತೆಯಲ್ಲಿ ಹರಿದ ಮಳೆ ನೀರು; ಗ್ರಾ.ಪಂ.ನಿಂದ ಚರಂಡಿ ದುರಸ್ತಿ: ಸುದ್ದಿ ಉದಯ ಜನಧ್ವನಿ ಇಫೇಕ್ಟ್ .

Suddi Udaya

ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಶಿವರಾತ್ರಿ ಆಚರಣೆ

Suddi Udaya

ಧರ್ಮಸ್ಥಳ: ಬೊಳಿಯಾರುನಲ್ಲಿ ಕಾಡಾನೆಗಳು ಎಳೆದ ಮರ, ವಿದ್ಯುತ್ ಲೈನಿನ ಮೇಲೆ ಬಿದ್ದು ಕಂಬಗಳಿಗೆ ಹಾನಿ

Suddi Udaya
error: Content is protected !!