24.4 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.10-19: ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ”

ಉಜಿರೆ : ಪ್ರಗತಿ ಮಹಿಳಾ ಮಂಡಲ ಉಜಿರೆ ಪ್ರಸ್ತುತಪಡಿಸುವ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್‌ ಇವರ ನೇತೃತ್ವದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ ಚಿಲಿಪಿಲಿ -2024 ಎ.10 ರಿಂದ 19 ರ ವರೆಗೆ ಉಜಿರೆ ಅನುಗ್ರಹ ಪ್ರೈಮರಿ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಶಿಬಿರವು ನಡೆಯಲಿದ್ದು, 5ರಿಂದ 9 ವರ್ಷ, 10ರಿಂದ 16 ವರ್ಷ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಭವ್ಯ ಕೀರ್ತಿರಾಜ್ ರವರು ಬ್ಯಾಗ್, ಪೌಚ್ ತಯಾರಿ, ಫ್ರೆಡ್ ಆರ್ಟ್, ಆರ್ಟ್ ಮತ್ತು ಕ್ರಾಫ್ಟ್ ಮತ್ತು ಗೊಂಬೆ ತಯಾರಿ ಬಗ್ಗೆ, ಶ್ರೀಮತಿ ಚೇತನ ಉಜಿರೆ ರವರು ಕಸದಿಂದ ರಸ , ಶ್ರೀಮತಿ ಅನ್ನಪೂರ್ಣ ಉಜಿರೆ ರವರು ಆರ್ಟ್ ಮತ್ತು ಕ್ರಾಫ್ಟ್ , ಡಾ| ದೀಪಾಲಿ ಡೋಂಗ್ರೆ ರವರು ದಂತ ಮಾಹಿತಿ ಮತ್ತು ತಪಾಸಣೆ, ಶ್ರೀಮತಿ ರೇವತಿ ಉಜಿರೆ ರವರು ಯೋಗದ ಬಗ್ಗೆ, ಸತೀಶ್ ಕಾನತ್ತೂರು ಸುಳ್ಯ ರವರು ವ್ಯಂಗ್ಯ ಚಿತ್ರದ ಬಗ್ಗೆ , ಧರ್ಮೇಂದ್ರ ಪೂಜೆಹಿತ್ಲು ರವರು ದೈಹಿಕ ಸಧೃಡತೆ ಯ ಬಗ್ಗೆ, ಶ್ರೀರಾಮ್ ಉಜಿರೆ ರವರು ಕ್ಲೇ ಆರ್ಟ್ ಬಗ್ಗೆ, ಶ್ರೀಮತಿ ಅರುಣ ಶ್ರೀನಿವಾಸ್ ಉಜಿರೆ ರವರು ಕಥಾ, ಕಾವ್ಯ, ಕಮ್ಮಟದ ಬಗ್ಗೆ, ಸಹನ್ ಎಂ. ಎಸ್., ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೀವ್ ಉಜಿರೆ ರವರು ನೃತ್ಯದ ಬಗ್ಗೆ, ಅಶ್ವತ್ ಎಸ್. ಪುತ್ತೂರು ರವರು ರಂಗಭೂಮಿಯ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಂಪರ್ಕಿಸಿ : 9731963325 / 8277141506

Related posts

ರಬ್ಬರ್ ಬೆಳೆಗಾರರಿಗೆ ಪ್ರೋತ್ಸಾಹ ಧನ ಅಥವಾ ಬೆಂಬಲ ಬೆಲೆ ನೀಡುವ ಕುರಿತು ಸಂಸದರ ಮೂಲಕ ಕೇಂದ್ರ ಕೃಷಿ ಸಚಿವರಿಗೆ ರಬ್ಬರ್ ಸೊಸೈಟಿಯಿಂದ ಮನವಿ

Suddi Udaya

ಫ್ಯಾಷನ್ ಡಿಸೈನ್ ನಲ್ಲಿ ಮಂಗಳೂರು ವಿ.ವಿ. ಗೆ 3ನೇ ರ‍್ಯಾಂಕ್ ಪಡೆದ ಉಜಿರೆಯ ಹವನ ಪಿ. ಪೂಜಾರಿ

Suddi Udaya

ಕ್ಯಾಂಟಿನ್ ಒಳಗಡೆ ವೇಶ್ಯಾವಟಿಕೆ ದಂಧೆ ಬಯಲು ; ಬೆಳ್ತಂಗಡಿ ಪೊಲೀಸರಿಂದ ದಾಳಿ: ಪ್ರಕರಣ ದಾಖಲು

Suddi Udaya

ಸತೀಶ್ ಕುರ್ಡುಮೆ ನಿಧನಕ್ಕೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಸಂತಾಪ

Suddi Udaya

ಮುಳಿಯ ಜ್ಯುವೆಲ್ಸ್‌ನ ಡೈಮಂಡ್ ಫೆಸ್ಟ್‌ಗೆ ಗ್ರಾಹಕರಿಂದ ವ್ಯಾಪಕ ಬೆಂಬಲ; ಮನಮೆಚ್ಚಿದ ವಜ್ರಾಭರಣಗಳ ಖರೀದಿಗೆ ಸಾಲುಗಟ್ಟಿದ ಗ್ರಾಹಕರು

Suddi Udaya

ಬಂದಾರು : ಮುರ್ತಾಜೆ ಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಸೋಲಾರ್ ಲೈಟ್ ಉದ್ಘಾಟನೆ

Suddi Udaya
error: Content is protected !!