ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ 4ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಝೇಂಕಾರ ಬೇಸಿಗೆ ಶಿಬಿರವು ಎ.16 ರಿಂದ ಎ. 21 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 4.15 ರ ವರೆಗೆ ಮಹಿಳಾ ವೃಂದ ಸಭಾಂಗಣದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಸ್ತಿ ವಿಜೇತ ಜನಪದ ಕಲಾವಿದ ಉದಯ್ ಕುಮಾರ್ ಲಾಯಿಲ, ಶೃಂಗೇರಿ ಏಕತಾರಿ ಹಾಡುಗಾರರಾದ ನಾದ ಮಣಿನಾಲ್ಕೂರು, ಮಂಗಳೂರು ಚಿತ್ರಕಲಾವಿದ ತಾರಾನಾಥ್ ಕೈರಂಗಳ, ಬೆಳ್ತಂಗಡಿ ಸ್ಪೂರ್ತಿ ಯಕ್ಷಿಣಿ ಲೋಕ ರಾಜೀವ್ ಬಿ.ಹೆಚ್, ಉಜಿರೆ ಶಿಕ್ಷಕರು ಅನ್ನಪೂರ್ಣ ಭಟ್, ವಲಯ ತರಬೇತುದಾರರು ಜೆಸಿ ಹೇಮಾವತಿ.ಕೆ, ಬೆಳ್ತಂಗಡಿ ರಂಗಭೂಮಿ ಕಲಾವಿದ ಜೇಸಿಐ ಇಂಡಿಯಾ ಪ್ರಶಾಂತ್ ಬೆಳ್ತಂಗಡಿ ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಮನೋರಂಜನಾ ಆಟಗಳು, ಜೀವನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ, ವರ್ಲಿ ಚಿತ್ರಕಲೆ, ಕೊಲಾಜ್ ಮ್ಯಾಜಿಕ್ ಶೋ ಮತ್ತು ತರಬೇತಿ, ಕ್ರಾಫ್ಟ್, ಗ್ರೀಟಿಂಗ್ ಕಾರ್ಡ್, ಗೂಡು ದೀಪ ತಯಾರಿ, ಹಾಡು, ಅಭಿನಯ ಮತ್ತು ಹೊರಾಂಗಣ ಪರಿಸರ ಚಟುವಟಿಕೆಗಳು ಇರಲಿದೆ.

ಶಿಬಿರದಲ್ಲಿ ಊಟ ಉಪಾಹಾರದ ವ್ಯವಸ್ಥೆ ಇರುತ್ತದೆ ಎಂದು ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್ ತಿಳಿಸಿದ್ದಾರೆ.

Leave a Comment

error: Content is protected !!