23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂದಾರು : ಒಂದೇ ವರ್ಷದ ಅಡಿಕೆ ಸಸಿಯಲ್ಲಿ ಮೂಡಿದ ಚೊಚ್ಚಲ ಹಿಂಗಾರ; ಶಾಲಾ ತೋಟದಲ್ಲಿ ಹೀಗೊಂದು ಪ್ರಕೃತಿ ವೈಚಿತ್ರ್ಯ

ಬಂದಾರು : ಸರಕಾರಿ ಶಾಲೆಯ ಅಡಿಕೆ ತೋಟದಲ್ಲಿ ಒಂದೇ ವರ್ಷದ ಅಡಿಕೆ ಸಸಿಯೊಂದರಲ್ಲಿ ಕಾಂಡದ ತುದಿಯ ಗರಿಗಳ ಮಧ್ಯ ಭಾಗದಲ್ಲಿ ಚೊಚ್ಚಲ ಹಿಂಗಾರ ಮೂಡಿದ ಪ್ರಕೃತಿ ವೈಚಿತ್ರ್ಯವೊಂದು ಬಂದಾರು ಬಳಿ ಕಂಡು ಬಂದಿದೆ.

ಹೌದು, ಬೆಳ್ತಂಗಡಿ ತಾಲೂಕು ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಒಂದು ವರ್ಷದ ಮಂಗಳ ತಳಿಯ ಅಡಿಕೆ ತೋಟದ ಅಡಿಕೆ ಸಸಿಯೊಂದರಲ್ಲಿ ಗರಿ ಮೂಡುವ ಕಾಂಡದ ತುದಿಯಲ್ಲಿ ಹೊಚ್ಚ ಹೊಸ ಹಿಂಗಾರವೇ ಚಿಗುರಿ ಅರಳಿದೆ. ಇದೀಗ ಕಡಲೆ ಕಾಳಿನ ಗಾತ್ರದಲ್ಲಿ ಎಳೆ ಅಡಿಕೆ ಕಾಯಿಯೂ ಬೆಳೆಯುತ್ತಿದೆ.ನೆಟ್ಟ ಒಂದೇ ವರ್ಷಕ್ಕೆ ಅಡಿಕೆ ಸಸಿಯಲ್ಲಿ ಕಂಡು ಬಂದ ಈ ಪ್ರಕೃತಿ ವೈಚಿತ್ರ್ಯದ ಬಗ್ಗೆ ಕುತೂಹಲ ಮೂಡಿದ್ದು ಹಿಂಗಾರದ ಮುಂದಿನ ಬೆಳವಣಿಗೆ ಬಗ್ಗೆ ಕಾತರದಿಂದ ಕಾಯುವಂತಾಗಿದೆ.

ಅಚುಶ್ರೀ ಬಾಂಗೇರು.

Related posts

ಉಜಿರೆ: ಶ್ರೀ. ಧ. ಮಂ. ಪ.ಪೂ. ಕಾಲೇಜಿನ ಸಂಸ್ಕೃತ ವಿಭಾಗದ ” ಸುಬೋಧಿನಿ ” ಡಿಜಿಟಲ್ ಭಿತ್ತಿಪತ್ರಿಕೆ ಬಿಡುಗಡೆ

Suddi Udaya

ಗೀತೆ ಜತೆ ಸಾಹಿತ್ಯ ಸಾಂಗತ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಪನ್ಯಾಸ ಮಾಲಿಕೆಯ ಮೂರನೆಯ ಅಧ್ಯಾಯ

Suddi Udaya

ಮಡಂತ್ಯಾರು: ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿಯಲ್ಲಿ ಯೋಗ ತರಗತಿ

Suddi Udaya

ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೃಷ್ಣಾನಂದ ರಾವ್ ಅವಿರೋಧ ಆಯ್ಕೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಬಿಜೆಪಿ ಶಾಸಕರ ಹೋರಾಟ ಯಶಸ್ವಿ -ಕಳೆಂಜ ದೇವಣ್ಣ ಗೌಡರ ಮನೆ ತೆರವು ಅರಣ್ಯ ಇಲಾಖೆಯ ಪ್ರಯತ್ನ ವಿಫಲ – ಜಂಟಿ ಸರ್ವೆಗೆ ಸಮ್ಮತಿ: ಸರ್ವೆ ನಡೆಸುವವರೆಗೆ ಯಥಾ ಸ್ಥಿತಿ ಮುಂದುವರಿಕೆ

Suddi Udaya
error: Content is protected !!