23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಮೈಂದಕೋಡಿ ಮನೆಯಲ್ಲಿ ಭಜನಾ ಕಮ್ಮಟ ಹಾಗೂ ದೈವಗಳ ಗಗ್ಗರ ಸೇವೆ

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಮೈಂದಕೋಡಿ ಮನೆಯಲ್ಲಿ ಕಮ್ಮಟ ಭಜನೆ ಹಾಗೂ ಸತ್ಯ ದೇವತೆ ಮತ್ತು ಇತರ ದೈವಗಳ ನೇಮೋತ್ಸವ ಎ.14 ರಂದು ರಾತ್ರಿ ವಿಜೃಂಭಣೆಯಿಂದ ಜರುಗಿತು.


ನಾರಾಯಣ ಗೌಡ ಮತ್ತು ದಂಪತಿಗಳ ಹಲವು ದಿನದ ಕನಸು ಧಾರ್ಮಿಕ ಆಶಯದಂತೆ ಮನೆಯಲ್ಲಿ ಕೊಯ್ಯೂರು ಸ್ಥಳೀಯ ಮಕ್ಕಳ, ಮಹಿಳಾ ಮತ್ತು ಪುರುಷರ 6 ಭಜನಾ ತಂಡದಿಂದ ಏಕಕಾಲಕ್ಕೆ ಕುಣಿತ ಭಜನೆ ಯಶಸ್ವಿಯಾಗಿ ನಡೆಯಿತು.
ಕಾಣಿಯೂರು ಚಾರ್ವಕ ಶ್ರೀಮತಿ ಯಶೋಧ ಎ.ಹಾಗೂ ಜಯಂತ ವೈ ಪುತ್ರರಾದ ಸಾಕ್ಷಾತ್ ವೈ.ಜೆ.ಶಿವಜಿತ್ ವೈ.ಜೆ ಭಜನೆ ಹಾಡುವ ಜೊತೆಗೆ ತಾಳ, ಹಾರ್ಮೋನಿಯಂ ನುಡಿಸುವ ಮೂಲಕ ಭಜನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.
ನಂತರ ಮನೆಯ ಸತ್ಯದೇವತೆ ಹಾಗೂ ಇನ್ನಿತರ ದೈವಗಳ ನೇಮೋತ್ಸವ ನಡೆಯಿತು.

ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲಿಯಾನ್ ಕೊಯ್ಯೂರು ಮತ್ತು ಭಜನಾ ತರಬೇತುದಾರರಾದ ವಿ.ಹರೀಶ್ ನೆರಿಯ ಸಹಕಾರದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಮ್ಮಟೋತ್ಸವ ಮೆಚ್ಚುಗೆ ಪಡೆಯಿತು.

Related posts

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರ

Suddi Udaya

ಆ.19: ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ಸಮಾರಂಭ

Suddi Udaya

ಐಟಿ ಪೆಸ್ಟ್ ನಲ್ಲಿ ಶ್ರೀ ಗುರುದೇವ ಕಾಲೇಜು ಸಮಗ್ರ ಚಾಂಪಿಯನ್

Suddi Udaya

ಅಂಡಿಂಜೆಯಲ್ಲಿ ಬೈಕ್ ಅಪಘಾತ: ಅಂಡಿಂಜೆ ನಿವಾಸಿ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಮೃತ್ಯು

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 30ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ:

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ: ಸರ್ವಧರ್ಮೀಯರು ಆಚರಿಸುವ ವಿಶ್ವವಿಖ್ಯಾತ ಹಬ್ಬ ದೀಪಾವಳಿ: ಪ್ರಕಾಶ ಶೆಟ್ಟಿ ನೊಚ್ಚ

Suddi Udaya
error: Content is protected !!