July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ: ಶಿವಕೀರ್ತಿ ನಿಲಯದಲ್ಲಿ‌ “ಹನುಮ‌ ಜಯಂತಿ” ಆಚರಣೆ

ಶಿಶಿಲ : ರಾಮ ಹನುಮ ಈ ಭೂಮಿಯಲ್ಲಿ ಚಿರಕಾಲ ಇದ್ದಾರೆ. ಎಲ್ಲಿ ಭಕ್ತಿಯಿಂದ ಭಜಿಸುವವರಿರುತ್ತಾರೊ ಅಲ್ಲಿ ರಾಮ ಹನುಮನಿರುತ್ತಾರೆ. ಭಜನೆ ಸಂಸ್ಕಾರ ಬೆಳೆಸುತ್ತದೆ. ಅಳುಕನ್ನು ದೂರ ಮಾಡುತ್ತದೆ. ನಮ್ಮ ಧರ್ಮ ನಂಬಿಕೆ ಇರುವಲ್ಲಿ ಹನುಮ ರಾಮನಿರುತ್ತಾರೆ. ನಾವು ಇರುವಲ್ಲಿಯವರೆಗೆ ಅವರೂ ಇರುತ್ತಾರೆ. ಅವರು ಇರುವಲ್ಲಿಯವರೆಗೆ ನಾವೂ ಇರುತ್ತೆವೆ. ಎಂದು ಸಾಹಿತಿ, ಬರಹಗಾರ, ನಿವೃತ್ತ ಪ್ರಾಂಶುಪಾಲರಾದ ಉಂಡೆಮನೆ ವಿಶ್ವೇಶ್ವರ ಭಟ್ ತಿಳಿಸಿದರು.


ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ‌ ನಡೆದ ” ಹನುಮ‌ ಜಯಂತಿ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಕಾರ್ಯಕ್ರಮವನ್ನು ಅರಿಕೆಗುಡ್ದೆ ದೇವಾಲಯದ ಪ್ರಕಾಶ್ ಪಿಲಿಕಬೆ ಉದ್ಘಾಟನೆ ಮಾಡಿ ಹನೂಮಂತ ರಾಮಾಯಣದ ರತ್ನ, ಭಕ್ತಿಗೆ ಮತ್ತು ಆದರ್ಶಕ್ಕೆ ಹನುಮ ನಮಗೆಲ್ಲಾ ಮಾದರಿ . ಹನುಮನ ಭಜಿಸಿದವರಿಗೆ ಎಲ್ಲಾ ಪುಣ್ಯ ಕಾರ್ಯಗಳೂ ಜೀವನದಲ್ಲಿ ಲಭಿಸಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯಿಂದ ಕುಣಿತ ಭಜನೆ, ಭಜನಾ ಪಟುಗಳಿಗೆ ಅಭಿನಂದನೆ, ರಾಮಾಯಣ ಹಕ್ಕಿ ನೋಟ ಪುಸ್ತಕ ವಿತರಣೆ ಮುಂತಾದ ಕಾರ್ಯಕ್ರಮ ಜರಗಿತ್ತು.
ಭಜನಾ ಕಾರ್ಯಕ್ರಮವನ್ನು ಸುಂದರ ಬಿಳಿನೆಲೆ ಮತ್ತು ತಂಡದವರು ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಗ್ಗ, ಉದಯಶಂಕರ ಅರಸಿನಮಕ್ಕಿ, ಪುತ್ತೂರು ರವೀಂದ್ರ ಕುದ್ದಣ್ನಾಯ, ಭಾಸ್ಕರ ರಾವ್ ಮುಂಡ್ರುಪ್ಪಾಡಿ , ರವಿ ಕಾಸರಗೋಡು, ವಿಶು ಕುಮಾರ್ ಪೆರೆಡೆಲು, ಪ್ರೇಮಚಂದ್ರ ಪೆರ್ಲ, ಮೋಹನ ನೆಲ್ಲಿತ್ತಾಯ, ಶಿವರಾಮ ನೆಲ್ಲಿತ್ತಾಯ, ಶ್ರೀಪತಿ ಶಿಶಿಲ, ಪ್ರಕಾಶ ನೆಲ್ಲಿತ್ತಾಯ ಮುಂತಾದವರು ಭಾಗವಹಿಸಿದ್ದರು.

Related posts

ಸಿಐಎಸ್ಎ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮೊದಲ ಭಾರತೀಯ ಸಾಧಕಿ ಸಪ್ನ ನಾರಾವಿ: ಅಮೇರಿಕಾದ ಬೋಸ್ಟನ್ ನಲ್ಲಿ ಡಿಜಿಟಲ್ ಟ್ರಸ್ಟ್ ಕಾನ್ಪರೇನ್ಸ್ ನಲ್ಲಿ ವಿಶಿಷ್ಟ ಸಾಧನೆಗೆ ಸನ್ಮಾನ ಸ್ವೀಕರಿಸಿದ ಸಪ್ನ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಕರಣ ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ನೀಡಲು ಬಂದ ತಿಮರೋಡಿ ಬೆಂಬಲಿಗರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಅಂಡಿಂಜೆ ಶಾಲೆಯ ವಿದ್ಯಾರ್ಥಿಗಳಾದ ನಮಿಷ ತಾಲೂಕಿಗೆ ಪ್ರಥಮ ಹಾಗೂ ಕು .ಪ್ರಜ್ಞಾ ತಾಲೂಕಿಗೆ ದ್ವಿತೀಯ ಸ್ಥಾನ

Suddi Udaya

ಮಲೆಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಾಣಾಪಾಯದಿಂದ ಪಾರು

Suddi Udaya

ಅಡಿಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಕೇಂದ್ರ ಕೃಷಿ ಸಚಿವರಿಗೆ ಸಂಸದ ಚೌಟ ಮನವಿ

Suddi Udaya

ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಜಿಲ್ಲಾ ಮಟ್ಟದ ಪರಿಷತ್ತು

Suddi Udaya
error: Content is protected !!