25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಶ್ರೀ ವೀರಾಂಜನೇಯ ಸೇವಾ ಸಮಿತಿ ವತಿಯಿಂದ ಬಡಕುಟುಂಬಗಳಿಗೆ ಸಹಾಯಧನ ಹಸ್ತಾಂತರ

ಬೆಳ್ತಂಗಡಿ: ಬಡವರ ಸೇವೆಯೇ ನಮ್ಮ ಧ್ಯೇಯ ಎಂಬ ಪರಿಕಲ್ಪನೆಯೊಂದಿಗೆ ಸುಮಾರು 82 ಅಶಕ್ತ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಯುವಕರ ಸ್ಪೂರ್ತಿಯ ಚಿಲುಮೆಯಾದ “ವೀರಾಂಜನೇಯ ಸೇವಾ ಸಮಿತಿ” ವತಿಯಿಂದ 78, 79ನೇ ಸೇವಾಯೋಜನೆಯನ್ನು ಎರಡು ಬಡಕುಟುಂಬಕ್ಕೆ ಸಹಾಯಹಸ್ತ ನೀಡಲಾಯಿತು.

78ನೇ ಸೇವಾಯೋಜನೆಯ ಹಸ್ತಾಂತರ:-
ಕಡಬ ತಾಲೂಕಿನ ಏನೇಕಲ್ಲು ಗ್ರಾಮದ 4 ವರ್ಷ ಪ್ರಾಯದ ವಂಶಿ ಎಂಬ ಪುಟ್ಟ ಕಂದಮ್ಮ ಕಳೆದ ಎರಡು ತಿಂಗಳುಗಳಿಂದ blood ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಳು. ಇವಳು ಕೆಎಂಸಿ ಹಾಸ್ಪಿಟಲ್ ಅತ್ತಾವರದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇದುವರೆಗೆ ಅಂದಾಜು 4 ಲಕ್ಷದವರೆಗೆ ಹಾಸ್ಪಿಟಲ್ ವೆಚ್ಚವನ್ನು ಭರಿಸಿರುತ್ತಾರೆ. ಮುಂದಿನ ಚಿಕಿತ್ಸೆ ನಡೆಸಲು 15 ಲಕ್ಷಕ್ಕಿಂತಲೂ ಅಧಿಕ ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುತ್ತಾರೆ. ಈ ಬಡಕುಟುಂಬದ ಕಷ್ಟವನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 12,000ರೂ ಸಹಾಯಧನದ ಚೆಕ್ಕನ್ನು ತಂಡದ ಸಹೋದರರ ಸಮ್ಮುಖದಲ್ಲಿ ವಂಶಿ ಇವರ ತಂದೆ ಕೈಯಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

79ನೇ ಸೇವಾಯೋಜನೆಯ ಹಸ್ತಾಂತರ:-
ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ನಿವಾಸಿಯಾದ ಗೌತಮ್ ಇವರು, ರಸ್ತೆ ಅಪಘಾತಕ್ಕೊಳಗಾಗಿ ತನ್ನ ಹೊಟ್ಟೆಗೆ ಬಲವಾಗಿ ಪೆಟ್ಟು ಬಿದ್ದು ಪ್ರಸ್ತುತ ಕೆ.ಎಸ್ ಹೆಗ್ಡೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ. ಇವರ ತಂದೆ ಮತ್ತು ತಾಯಿ ಇಬ್ಬರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು ಮಗನ ಚಿಕಿತ್ಸಾ ವೆಚ್ಚ ಭರಿಸಲು ಕಂಗಾಲಾಗಿದ್ದರು. ಈ ಬಡಕುಟುಂಬದ ಕಷ್ಟವನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 12,000ರೂ ಸಹಾಯಧನದ ಚೆಕ್ಕನ್ನು ತಂಡದ ಸಹೋದರರ ಸಮ್ಮುಖದಲ್ಲಿ ಗೌತಮ್ ಇವರ ತಾಯಿಯ ಕೈಯಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

Related posts

ಕೊಯ್ಯೂರು ಪಂಚದುರ್ಗ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಮಚ್ಚಿನ: ಮಾಣೂರು ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಬಾಲಾಲಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಕಲಶಾಭಿಷೇಕ

Suddi Udaya

ಬೆಳ್ತಂಗಡಿ ಮಾಳವ ಯಾನೆ ಮಲ್ಲವರ ಯುವಕ ಸಂಘದ 28ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆ

Suddi Udaya

ರಾಜ್ಯದ ಜನರ ತೀರ್ಮಾನ, ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ: ಪ್ರತಾಪಸಿಂಹ ನಾಯಕ್

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಬಳಂಜ: ಶ್ರೀ ಶಾರದೋತ್ಸವದ ಅಂಗವಾಗಿ ವಾಲಿಬಾಲ್ ಪಂದ್ಯಾಟ, ಯುವ ಉದ್ಯಮಿ ರಾಕೇಶ್ ಹೆಗ್ಡೆಯವರಿಂದ ಕ್ರೀಡಾಂಗಣ ಉದ್ಘಾಟನೆ

Suddi Udaya
error: Content is protected !!