July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ನಿರಂತರ

ಚಾಮಾ೯ಡಿ: ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಆಗಾಗ ಕಂಡು ಬರುತ್ತಿದ್ದು ವಾಹನ ಸವಾರರಲ್ಲಿ ಭೀತಿಯ ವಾತಾವರಣ ಮೂಡಿದೆ. ಭಾನುವಾರ ರಾತ್ರಿ ಒಂದನೇ ತಿರುವಿನ ಸಮೀಪ ಕಾಡಾನೆ ಕಂಡುಬಂದಿತ್ತು‌.ಬಳಿಕ ಸೋಮವಾರ ರಾತ್ರಿ ಎರಡು ಹಾಗೂ ಮೂರನೇ ತಿರುವಿನ ಬಳಿಯು ಕಾಡಾನೆಯನ್ನು ವಾಹನ ಸವಾರರು ಕಂಡಿದ್ದಾರೆ ಮಂಗಳವಾರ ಬೆಳಿಗ್ಗೆ 2ನೇ ತಿರುವಿನ ಬಳಿ ಆನೆ ರಸ್ತೆ ಮಧ್ಯೆ ನಿಂತು ಈಚಲ ಮರವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ಹಿಂದೆಯೂ ಎರಡು ಮೂರು ಬಾರಿ ಒಂಟಿ ಸಲಗ ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದಿದ್ದು ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಪ್ರಸ್ತುತ ಕಾಡಾನೆ ಪದೇ ಪದೇ ಘಾಟಿ ರಸ್ತೆ ವ್ಯಾಪ್ತಿಯಲ್ಲಿ ಕಾಣಿಸುತ್ತಿದೆ ಪ್ರತಿದಿನ ಸಾವಿರಾರು ವಾಹನಗಳು ಓಡಾಟ ನಡೆಸುವ ಇಲ್ಲಿ ಕಾಡಾನೆ ರಸ್ತೆ ಬದಿ ಕಂಡುಬರುವುದರಿಂದ ಹಲವು ಕಾಲ ವಾಹನಗಳು ಸರದಿ ನಿಲ್ಲಬೇಕಾದ ಸ್ಥಿತಿ ಇದೆ ಹಾಗೂ ಈ ಹೊತ್ತಿನಲ್ಲಿ ಜೀವ ಭಯದೊಂದಿಗೆ ಕಾಯಬೇಕು.

ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಕಾಡಾನೆ ನಿರಂತರ ಕಂಡು ಬರುತ್ತಿದ್ದು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ. ಇದುವರೆಗೆ ಕಾಡಾನೆ ವಾಹನ ಅಥವಾ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ‌ ಆದರೆ ಕೆಲವು ವರು ಆನೆಯನ್ನು ಓಡಿಸುವ ಸಲುವಾಗಿ ಕಲ್ಲುಗಳನ್ನು ಬೀರುವುದು, ಫೋಟೋ ಕ್ಲಿಕ್ಕಿಸಲು ಮುಂದಾಗುವುದು, ಬೊಬ್ಬೆ ಹಾಕುವುದು ಇತ್ಯಾದಿ ಮಾಡುತ್ತಾರೆ‌. ಇದರಿಂದ ಆನೆ ಕೋಪಗೊಳ್ಳುವ ಸಂಭವವಿದ್ದು, ಈ ಸಮಯ ಜನ ವಾಹನದ ಮೇಲೆ ದಾಳಿಗೂ ಮುಂದಾಗಬಹುದು.

ಒಟ್ಟಿನಲ್ಲಿ ಘಾಟಿ ಪ್ರಯಾಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದ್ದು ರಾತ್ರಿ ಪ್ರಯಾಣವನ್ನು ಆದಷ್ಟು ಮುಂದೂಡಿದರೆ ಉತ್ತಮ.

Related posts

ಸವಣಾಲು : ಕೋಟಿ ಚೆನ್ನಯ್ಯ ಸೈಬರ್ ಸೆಂಟರ್ ಶುಭಾರಂಭ

Suddi Udaya

ಜಾಗತಿಕ ಹಾದಿಯಲ್ಲಿ ಅಗ್ರಿಲೀಫ್‌ಗೆ ಭಾರೀ ಬಲ: ರೂ.10 ಕೋಟಿ ನಿಧಿ ಸಂಗ್ರಹ — ಭಾರತ ಮತ್ತು ಯುರೋಪ್–ಯುಕೆ ವಿಸ್ತರಣೆಗೆ ವೇಗ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ 10ನೇ ವರ್ಷದ ಸಂಭ್ರಮದ ಗಣೇಶೋತ್ಸವ

Suddi Udaya

ಫ್ಯಾಬ್ರಿಕ್ ಪೈಂಟ್ ಡಿಸೈನ್ ಉಚಿತ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಉಜಿರೆ ಭಜನಾ ಪರಿಷತ್ತಿನ ತಾಲೂಕು ಹಾಗೂ ವಲಯ ಪದಾಧಿಕಾರಿಗಳ ಸಭೆ

Suddi Udaya
error: Content is protected !!