ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ

Suddi Udaya

ಗೇರುಕಟ್ಟೆ : ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ ವಲಿಯುಲ್ಲಾಹಿ ಫಖೀರ್ ಮುಹ್‌ಯಿದ್ದೀನ್ ಖ.ಸಿ ಪರಪ್ಪು ಮಹಾತ್ಮರ ಝಿಯಾರತ್ ಸಯ್ಯಿದ್ ಬದ್ರುದ್ದೀನ್ ಅಲ್ ಹಾದಿ ತಂಙಳರ ನೇತೃತ್ವದಲ್ಲಿ ಚಾಲನೆಗೊಂಡು ಗೇರುಕಟ್ಟೆ ಜಂಕ್ಷನ್‌ನಲ್ಲಿ‌ ಸಂದೇಶ ಭಾಷಣ ನಡೆಯಿತು. ಮುಹಮ್ಮದ್ ಮುಸ್ತಪಾ ಹಿಮಮಿ ಅಲ್ ಫುರ್ಖಾನಿ ಹಾಗೂ ಮುಹಮ್ಮದ್ ಶರ್ವಾನಿ ರಝ್ವಿ ಅಲ್ ಫುರ್ಖಾನಿ ಸಂದೇಶ ಭಾಷಣ ಮಾಡಿದರು.


ಪ್ರಸ್ತುತ ಕಾರ್ಯಕ್ರಮದಲ್ಲಿ ಸಯ್ಯಿದ್ ಬದ್ರುದ್ದೀನ್ ತಂಙಳ್, ಮಿಸ್ಬಾಹಿ, ಮಡಂತ್ಯಾರ್ ಸಖಾಫಿ, ಹಂಝ ಮದನಿ, ಫಾರೂಖ್ ಸಖಾಫಿ ಇಕ್ಬಾಲ್ ಮರ್ಝೂಖಿ, ಪರಪ್ಪು ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಎಸ್.ವೈ.ಎಸ್ ನಾಯಕರಾದ ಸಿದ್ದೀಖ್ ಪರಪ್ಪು, ಎಸ್.ಎಸ್.ಎಫ್ ನಾಯಕರಾದ ಜಬ್ಬಾರ್ ಪರಪ್ಪು, ಕೆ.ಎಮ್.ಜೆ ನಾಯಕರಾದ ಅಬೂಸ್ವಾಲಿಹ್, ಅಲಿ ಹಸನ್ ಹಾಜಿ, ಅಶ್ರಫ್ ಮಾಚಾರ್ ಸಹಿತ ಹಲವಾರು ಫುರ್ಖಾನಿ ವಿದ್ವಾಂಸರು, ರಿಕ್ಷಾ ಚಾಲಕ-ಮಾಲಕರು ಉಪಸ್ಥಿತರಿದ್ದರು. ಎಸ್.ಎಸ್.ಎಫ್ ಪರಪ್ಪು ಶಾಖಾ ವತಿಯಿಂದ ತಂಪು ಪಾನೀಯ ವಿತರಿಸಲಾಯಿತು.

Leave a Comment

error: Content is protected !!