ಬಂದಾರು: ಬಟ್ಲಡ್ಕ ಜುಮಾ ಮಸೀದಿಯ ಜಮಾಅತ್ ಮಹಾಸಭೆ: ನೂತನ ಸಮಿತಿ ರಚನೆ

Suddi Udaya

ಬಂದಾರು: ಇಲ್ಲಿನ ಬಟ್ಲಡ್ಕ ಜುಮಾ ಮಸೀದಿಯ ಜಮಾಅತ್ ಮಹಾಸಭೆಯು ಮೇ 17 ರಂದು ಜುಮಾ ನಮಾಜು ಬಳಿಕ ಬಟ್ಲಡ್ಕ ಜಮಾಅತ್ ಗೌರವಾಧ್ಯಕ್ಷರಾದ ಬಹು! ಅಬ್ದುಲ್ ರಹಿಮಾನ್ ಸಾದಾತ್ ತಂಙಲ್ ರವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ಬಂದಾರು, ಉಪಾಧ್ಯಕ್ಷರಾಗಿ ಸುಲೈಮಾನ್. ಪಿ, ಪ್ರ.ಕಾರ್ಯದರ್ಶಿಯಾಗಿ ಅಬ್ಬಾಸ್. ಬಿ, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್.ಪಿ ಮತ್ತು ಹಮೀದ್. ಎಮ್, ಕೋಶಾಧಿಕಾರಿಯಾಗಿ ಇಸುಬು ಪಿ, ಸದಸ್ಯರುಗಳಾಗಿ ಅಬೂಬಕ್ಕರ್ ಬಿ., ಆದಂ ಪಿ, ಅಬ್ದುಲ್ ಖಾದರ್ ಡಿ, ಹಬೀಬ್ ಪಿ, ರಫೀಕ್ ಪಿ, ಸೈಫ್ ಬಿ, ರಹೀಂ ಬಿ, ಇಸ್ಮಾಯಿಲ್ ಬಿ, ಆಯ್ಕೆಯಾದರು.

ಜಮಾಅತ್ ಖತೀಬ್ ಮುಹಮ್ಮದ್ ಆಸಿಫ್ ಸಖಾಫಿ ಯವರು ಸ್ವಾಗತಿಸಿದರು. ವರದಿ ಹಾಗೂ ಲೆಕ್ಕ ಪತ್ರಗಳನ್ನು ಸಮಿತಿಯ ಜೊತೆಕಾರ್ಯದರ್ಶಿ ರಹೀಂ ಬಟ್ಲಡ್ಕ ಮಂಡಿಸಿದರು.

    Leave a Comment

    error: Content is protected !!