September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು: ಕೃಷಿ ಮತ್ತು ಕುಡಿಯುವ ನೀರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಮೆಸ್ಕಾಂ ಅಧಿಕಾರಿಗೆ ಗ್ರಾಮಸ್ಥರಿಂದ ಮನವಿ

ಬೆಳ್ತಂಗಡಿ: ಕೃಷಿ ಮತ್ತು ಕುಡಿಯುವ ನೀರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಹಾಗೂ ಪಿಚಾಲಾರು ಟಿಸಿ ಮೇಲ್ದಾರ್ಜೆಗೇರಿಸುವ ಕುರಿತು ಇಂದಬೆಟ್ಟು ಗ್ರಾಮಸ್ಥರಿಂದ ಮೆಸ್ಕಾಂ ಅಧಿಕಾರಿ ಬೆಂಜಮಿನ್ ಬ್ರಕ್ಸ್ ಗೆ ಮನವಿ ನೀಡಿದರು.

ಬಂಗಾಡಿ ಕೊಲ್ಲಿ ವ್ಯಾಪ್ತಿಯ ವಿದ್ಯುತ್ ಫೀಡರ್ ನಲ್ಲಿ ಕೃಷಿ ಹಾಗೂ ಹೈನುಗಾರಿಕೆ ಮಾಡಿ ಜನ ಬದುಕುತ್ತಿದ್ದು, ಈ ವ್ಯಾಪ್ತಿಯಲ್ಲಿ ಜನವರಿ ತಿಂಗಳಿನಿಂದ 3 ಫೇಸ್ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಅತೀ ಲೋವೋಲ್ಟಜ್ ಸಮಸ್ಯೆ ಹಾಗೂ ಹಲವು ದಿನಗಳಿಂದ ಪ್ರತಿದಿನ ರಾತ್ರಿ ಪೂರ್ತಿ ಗಾಳಿ ಮಳೆ ಇಲ್ಲದಿದ್ದರೂ ಬೆಳಗ್ಗಿನ ಜಾವದವರೆಗೂ ವಿದ್ಯುತ್ ಇರುವುದಿಲ್ಲ, ಮಳೆಗಾಲ ಪ್ರಾರಂಭವಾದರೆ ಈ ಭಾಗದಲ್ಲಿ ಹಗಲು ರಾತ್ರಿ ಸರಿಯಾಗಿ ವಿದ್ಯುತ್ ಇರುವುದಿಲ್ಲ ಈ ಭಾಗದ ಲೈನ್ ಗಳಲ್ಲಿ ಮರದ ಗೆಲ್ಲುಗಳನ್ನು ಸರಿಯಾದ ಸಮಯದಲ್ಲಿ ಮರ ತುಂಡರಿಸದೆ ಇರುವುದು ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ. ಬಂಗಾಡಿಯ ಪಿಚಾಲಾರು ಟಿಸಿ ಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಪಂಪು ಸೆಟ್ ಹಾಗೂ ಅಧಿಕ ಮನೆಗಳಿಗೆ ಸಂಪರ್ಕ ನೀಡಿರುವುದರಿಂದ ಈ ಭಾಗದ ಜನರಿಗೆ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ. ಇಲ್ಲಿ ಹೆಚ್ಚಿನ ಸಾಮರ್ಥ್ಯದ ಟಿಸಿ ಅಳವಡಿಸಿ ಅಥವಾ ಲಿಂಗಾಂತ್ಯಾರು ಪ್ರದೇಶದಲ್ಲಿ ಹೊಸ ಟಿಸಿ ಯನ್ನು ನಿರ್ಮಿಸುವಂತೆ ಮನವಿ ಮಾಡಿದರು.

ಪಿಚಾಲರು ಹಾಗೂ ಲಿಂಗಾಂತ್ಯಾರು ಕಾಲೋನಿಯಲ್ಲಿ ಹಾದೂ ಹೋಗಿರುವ ಹೆಚ್ ಟಿ ಲೈನ್ ಗಳು 50 ವರ್ಷಗಳ ಹಳೆಯದಾಗಿದ್ದು , ತುಕ್ಕು ಹಿಡಿದು ಕರಗಿ ಹೋಗಿ ಬೀಳುವ ಅಪಾಯದ ಸ್ಥಿತಿಯಲ್ಲಿ ಇದೆ. ಹಲವಡೆ ತಂತಿಗಳ ಬದಲಾವಣೆಯು ಆಗಿಲ್ಲ , ವಿದ್ಯುತ್ ಸಮಸ್ಯೆಯ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಈ ಪರಿಸರದಲ್ಲಿರುವ ಹಳೆ ಟಿಸಿ ಗಳು ಕಾರ್ಯನಿರ್ವಹಣೆಯಾಗಿಲ್ಲ. ಸಮರ್ಪಕವಾಗಿ ವಿದ್ಯುತ್ ಕಾರ್ಯನಿರ್ವಹಣೆ ಮಾಡದೆ ಇರುವುದೇ ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಮನವಿ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಪಳಿನಿ ಸ್ವಾಮಿ ಕೃಷಿಕರು ಎರ್ಮಾಳ, ವೆಂಕಪ್ಪ ಕೋಟ್ಯಾನ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಭರತ ಕುಮಾರ್, ತಾ. ಪಂ. ಮಾಜಿ ಅಧ್ಯಕ್ಷ ಮುಕುಂದ ಸುವರ್ಣ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇಬ್ರಾಹಿಂ., ಚಂದ್ರಶೇಖರ, ಕರೀಂ, ನವೀನ್, ವೀರಪ್ಪ ಮೋಹಿಲಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ ವತಿಯಿಂದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕ ರವರಿಗೆ ರೂ.30 ಸಾವಿರ ಚೆಕ್ ಹಸ್ತಾಂತರ

Suddi Udaya

ಉಜಿರೆಯಲ್ಲಿ ಅರೆಭಾಷೆ ಅಭಿಮಾನಿ ಬಳಗದಿಂದ “ಆಟಿನ ನೆಂಪುಗ ” ಕಾರ್ಯಕ್ರಮ

Suddi Udaya

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಪ್ರಶಸ್ತಿ

Suddi Udaya

ನಾಲ್ಕೂರು : ಕಾಂಗ್ರೆಸ್ ಕಾರ್ಯಕರ್ತರು ಹಲವು ಮಂದಿ ಬಿಜೆಪಿ ಸೇರ್ಪಡೆ

Suddi Udaya

ತಣ್ಣೀರುಪಂತ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!