April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಡಿರುದ್ಯಾವರದಲ್ಲಿ ಮುಂದುವರಿದ ಒಂಟಿ ಸಲಗನ ಸಂಚಾರ


ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹಲವೆಡೆ ಮೇ 27 ರಂದು ರಾತ್ರಿ ಒಂಟಿ ಸಲಗನ ಸಂಚಾರ ಮುಂದುವರಿದಿದೆ.


ಇಲ್ಲಿನ ಮಿತ್ತಕಟ್ಟಾಜೆ ಮೋಹನ ನಾಯ್ಕ ಎಂಬವರ ಮನೆಯಂಗಳಕ್ಕೆ ಬಂದು ಬಾಳೆ ಗಿಡ ತಿಂದು ಹಾಕಿದ ಬಳಿಕ ಸಲಗ ಫಣಿಕಲ್ಲು ಕಡೆ ಮುಂದುವರೆದಿದೆ. ಅಲ್ಲಿ ರಾಘವೇಂದ್ರ ಪಟವರ್ಧನ್ ರವರ ತೋಟಕ್ಕೆ ಕಾಡಾನೆ ಬರುತ್ತಿದ್ದಂತೆ ಮನೆಯವರಿಗೆ ತಿಳಿದು ಬಂದ ಕಾರಣ ಸ್ಥಳೀಯರು ಸೇರಿ ಆನೆಯನ್ನು ಓಡಿಸಿ, ಬೆಳಗಿನವರೆಗೆ ಗಸ್ತು ತಿರುಗಿದ ಕಾರಣ ಯಾವುದೇ ಕೃಷಿಹಾನಿ ಸಂಭವಿಸಿಲ್ಲ. ಸಲಗ ಇಲ್ಲಿಗೆ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.


ಮೇ 26 ರಂದು ರಾತ್ರಿ ಕಾಡಾನೆ ಇದೇ ಗ್ರಾಮದ ಬಸವದಡ್ಡು ಪರಿಸರದ ತೋಟಗಳಲ್ಲಿ ಕೃಷಿಹಾನಿ ಉಂಟು ಮಾಡಿತ್ತು. ಬಸವದಡ್ಡು, ಮಿತ್ತಕಟ್ಟಾಜೆ, ಫಣಿಕಲ್ಲು, ಮುಂಡಾಜೆ, ದುಂಬೆಟ್ಟು ಪರಿಸರ ಹತ್ತಿರ ಹತ್ತಿರವಿದ್ದು ಕಾಡಾನೆ ಉಪಟಳ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

Related posts

ಬಿಜೆಪಿ ಚಾರ್ಮಾಡಿ ಶಕ್ತಿಕೇಂದ್ರದ ಬೂತ್ ಮಟ್ಟದ ಯುವ ಮೋರ್ಚಾ ಸಂಚಾಲಕರ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಕೊನೆಗೊಳ್ಳಲು ಕೊಲ್ಲೂರು ಹಾಗೂ ಕದ್ರಿ ದೇವಸ್ಥಾನದಿಂದ ಧಮ೯ ಸಂರಕ್ಷಣಾ ಯಾತ್ರೆ

Suddi Udaya

ಮರೋಡಿ: ಯುವಕನ ಧ್ವನಿ ಪೆಟ್ಟಿಗೆಯ ಶಸ್ತ್ರಚಿಕಿತ್ಸೆಗೆ ಯುವವಾಹಿನಿ ವೇಣೂರು ಘಟಕ ಹಾಗೂ ಯುವವಾಹಿನಿ ಮರೋಡಿ ಸಂಚಲನಾ ಸಮಿತಿ ಸದಸ್ಯರಿಂದ ಆರ್ಥಿಕ ನೆರವು

Suddi Udaya

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಒಕ್ಕೂಟದ ಸಭೆ

Suddi Udaya

ವರ್ಲ್ಡ್ ರೈಲ್ವೇಸ್ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಅಶ್ವಲ್ ರೈ ರಿಗೆ ಭಾರತದ ಅತ್ಯುತ್ತಮ ಆಟಗಾರ -2024 ಹಾಗೂ ಉದಯ ಕುಮಾರ್ ರಾಷ್ಟ್ರೀಯ ಪ್ರಶಸ್ತಿ

Suddi Udaya

ಉಜಿರೆ ಶ್ರೀ ಧ.ಮಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆ: ಚಾರ್ಮಾಡಿ, ಮುಂಡಾಜೆ ಶಿಬಿರಗಳ ಉದ್ಘಾಟನೆ

Suddi Udaya
error: Content is protected !!