23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿ

ಕಳಿಯ ಗ್ರಾ. ಪಂ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ :ಸೂಕ್ತ ಕ್ರಮಕ್ಕೆ ನಾಗರಿಕರ ಆಗ್ರಹ

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪ

—————————————————

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ ಇದ್ದು, ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪರಪ್ಪು ರಸ್ತೆ ಬದಿಯ ಸಮೀಪದ ಸುಣ್ಣಲಡ್ಡ ಕಾಂಪ್ಲೆಕ್ಸ್ ಹತ್ತಿರದ ನೆಲಕ್ಕೆ ಹಾಕಿಕೊಂಡಿರುವ ಅಕೇಶಿಯ ಮರಕ್ಕೆ ತಂತಿ ತಾಗುವುದಕ್ಕೆ ಕೇವಲ (½)ಅರ್ಧ ಅಡಿ ಮಾತ್ರ ಇದೆ.

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪದ ಮಾರ್ಗ ಬದಿಯಲ್ಲಿ ರುವ ಅಪಾಯಕಾರಿ ಒಣಗಿದ ಮರವೊಂದಿದ್ದು, ಸಾವಿರಾರು ವಾಹನ, ಜನರು ಓಡಾಡುವ ಸ್ಥಳ ಇದಾಗಿದೆ.


ಪೆಲತ್ತಳಿಕೆ ಕಾಸಿಂ ಮನೆಯ ತೋಟದಲ್ಲಿ ಹಾಗೂ ಸಾರ್ವಜನಿಕ ಟಾರು ರಸ್ತೆಯ ಪಕ್ಕದಲ್ಲಿರುವ 3 ವರ್ಷಗಳ ಹಿಂದೆ ಒಣಗಿದ ಅಪಾಯದಲ್ಲಿರುವ ಮರವೊಂದಿದೆ.

ದೇರ್ಜಾಲು ಅನಂದ ಪೂಜಾರಿ ಯವರ ತೋಟದಲ್ಲಿ ಬಾಳೆ ಗಿಡ ಮತ್ತು ಹಲಸಿನ ಮರದ ಕೊಂಬೆಗಳು ವಿದ್ಯುತ್ ಸ್ಪರ್ಶಿಸಿ ಸುಟ್ಟು ಕರಕಲಾಗಿದೆ.

ರಕ್ತೇಶ್ವರಿಪದವು ಕ್ರಾಸ್ ರಸ್ತೆ ಮೇಲ್ಬಾಗದಲ್ಲಿ ತಂತಿಯ ಮೇಲೆ ಮರದ ಕೊಂಬೆ ತಾಗುತ್ತಿವೆ. (ಕಳೆದ ತಿಂಗಳು ಬೈ ಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದ ಹತ್ತಿರದ ಸ್ಥಳ),

ಪೇಲತ್ತಳಿಕ್ಕೆ ಮನೆಯ ಮುಂಭಾಗದಲ್ಲಿರುವ ತಂತಿಗಳು ಮರಕ್ಕೆ ತಾಗುತ್ತಿವೆ ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರ

Related posts

ಉಜಿರೆ: ಸಾನಿಧ್ಯ ಕೌಶಲ್ಯ ತರಬೇತಿ ಕೆಂದ್ರದಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ವಾಣಿ ಕಾಲೇಜು: ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ, ಭಜನಾ ಸಂಕೀರ್ತನೆ ಉದ್ಘಾಟನೆ

Suddi Udaya

ಪತ್ನಿ – ಮಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪಿ ಬಂಧನ

Suddi Udaya

ಮಾರ್ಚ್ 1-9ರವರೆಗೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಬ್ರಹ್ಮಕಲಶೋತ್ಸವ ಸಮಿತಿಯಿಂದ ಮುಜರಾಯಿ ಸಚಿವರ ಭೇಟಿ

Suddi Udaya

ಧರ್ಮಸ್ಥಳ ಶತಾಯಿಷಿ ಮತದಾರರಿಗೆ ಚುನಾವಣಾ ಆಯೋಗದಿಂದ ಗೌರವಪೂರ್ವಕ ಸನ್ಮಾನ ಹಾಗೂ ಪ್ರಮಾಣ ಪತ್ರ ವಿತರಣೆ

Suddi Udaya
error: Content is protected !!