September 6, 2026
ಗ್ರಾಮಾಂತರ ಸುದ್ದಿ

ಕಳಿಯ ಗ್ರಾ. ಪಂ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ :ಸೂಕ್ತ ಕ್ರಮಕ್ಕೆ ನಾಗರಿಕರ ಆಗ್ರಹ

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪ

—————————————————

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ ಇದ್ದು, ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪರಪ್ಪು ರಸ್ತೆ ಬದಿಯ ಸಮೀಪದ ಸುಣ್ಣಲಡ್ಡ ಕಾಂಪ್ಲೆಕ್ಸ್ ಹತ್ತಿರದ ನೆಲಕ್ಕೆ ಹಾಕಿಕೊಂಡಿರುವ ಅಕೇಶಿಯ ಮರಕ್ಕೆ ತಂತಿ ತಾಗುವುದಕ್ಕೆ ಕೇವಲ (½)ಅರ್ಧ ಅಡಿ ಮಾತ್ರ ಇದೆ.

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪದ ಮಾರ್ಗ ಬದಿಯಲ್ಲಿ ರುವ ಅಪಾಯಕಾರಿ ಒಣಗಿದ ಮರವೊಂದಿದ್ದು, ಸಾವಿರಾರು ವಾಹನ, ಜನರು ಓಡಾಡುವ ಸ್ಥಳ ಇದಾಗಿದೆ.


ಪೆಲತ್ತಳಿಕೆ ಕಾಸಿಂ ಮನೆಯ ತೋಟದಲ್ಲಿ ಹಾಗೂ ಸಾರ್ವಜನಿಕ ಟಾರು ರಸ್ತೆಯ ಪಕ್ಕದಲ್ಲಿರುವ 3 ವರ್ಷಗಳ ಹಿಂದೆ ಒಣಗಿದ ಅಪಾಯದಲ್ಲಿರುವ ಮರವೊಂದಿದೆ.

ದೇರ್ಜಾಲು ಅನಂದ ಪೂಜಾರಿ ಯವರ ತೋಟದಲ್ಲಿ ಬಾಳೆ ಗಿಡ ಮತ್ತು ಹಲಸಿನ ಮರದ ಕೊಂಬೆಗಳು ವಿದ್ಯುತ್ ಸ್ಪರ್ಶಿಸಿ ಸುಟ್ಟು ಕರಕಲಾಗಿದೆ.

ರಕ್ತೇಶ್ವರಿಪದವು ಕ್ರಾಸ್ ರಸ್ತೆ ಮೇಲ್ಬಾಗದಲ್ಲಿ ತಂತಿಯ ಮೇಲೆ ಮರದ ಕೊಂಬೆ ತಾಗುತ್ತಿವೆ. (ಕಳೆದ ತಿಂಗಳು ಬೈ ಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದ ಹತ್ತಿರದ ಸ್ಥಳ),

ಪೇಲತ್ತಳಿಕ್ಕೆ ಮನೆಯ ಮುಂಭಾಗದಲ್ಲಿರುವ ತಂತಿಗಳು ಮರಕ್ಕೆ ತಾಗುತ್ತಿವೆ ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರ

Related posts

ಜ.14: ಆಮಂತ್ರಣ ಪರಿವಾರದ ಸಾರಥ್ಯದಲ್ಲಿ ಕುಣಿತ ಭಜನೆ

Suddi Udaya

ಅಳದಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಖೋ ಖೋ ಪಂದ್ಯಾಟ ಉದ್ಘಾಟನೆ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಯಕ್ರಮ

Suddi Udaya

ಉಜಿರೆಯಲ್ಲಿ ಜಿ-ಮಾಲ್ ಉದ್ಘಾಟನೆ: ಬೆಳೆಯುತ್ತಿರುವ ಉಜಿರೆಗೆ ಜಿ-ಮಾಲ್ ಶೋಭೆ ತಂದಿದೆ: ಶರತ್‌ಕೃಷ್ಣ ಪಡ್ವೆಟ್ನಾಯ

Suddi Udaya

ಮುಂಡಾಜೆ: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆಯ ನೀರು

Suddi Udaya

ದೆಹಲಿಯಲ್ಲಿ ನಿರ್ಮಾಣಗೊಳ್ಳಲಿರುವ ಯೋಧರ ಉದ್ಯಾನವನಕ್ಕೆ ಬೆಳ್ತಂಗಡಿಯಿಂದ ಮಣ್ಣು ಸಮರ್ಪಣೆ

Suddi Udaya
error: Content is protected !!