22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿ

ಕಳಿಯ ಗ್ರಾ. ಪಂ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ :ಸೂಕ್ತ ಕ್ರಮಕ್ಕೆ ನಾಗರಿಕರ ಆಗ್ರಹ

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪ

—————————————————

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ ಇದ್ದು, ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪರಪ್ಪು ರಸ್ತೆ ಬದಿಯ ಸಮೀಪದ ಸುಣ್ಣಲಡ್ಡ ಕಾಂಪ್ಲೆಕ್ಸ್ ಹತ್ತಿರದ ನೆಲಕ್ಕೆ ಹಾಕಿಕೊಂಡಿರುವ ಅಕೇಶಿಯ ಮರಕ್ಕೆ ತಂತಿ ತಾಗುವುದಕ್ಕೆ ಕೇವಲ (½)ಅರ್ಧ ಅಡಿ ಮಾತ್ರ ಇದೆ.

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪದ ಮಾರ್ಗ ಬದಿಯಲ್ಲಿ ರುವ ಅಪಾಯಕಾರಿ ಒಣಗಿದ ಮರವೊಂದಿದ್ದು, ಸಾವಿರಾರು ವಾಹನ, ಜನರು ಓಡಾಡುವ ಸ್ಥಳ ಇದಾಗಿದೆ.


ಪೆಲತ್ತಳಿಕೆ ಕಾಸಿಂ ಮನೆಯ ತೋಟದಲ್ಲಿ ಹಾಗೂ ಸಾರ್ವಜನಿಕ ಟಾರು ರಸ್ತೆಯ ಪಕ್ಕದಲ್ಲಿರುವ 3 ವರ್ಷಗಳ ಹಿಂದೆ ಒಣಗಿದ ಅಪಾಯದಲ್ಲಿರುವ ಮರವೊಂದಿದೆ.

ದೇರ್ಜಾಲು ಅನಂದ ಪೂಜಾರಿ ಯವರ ತೋಟದಲ್ಲಿ ಬಾಳೆ ಗಿಡ ಮತ್ತು ಹಲಸಿನ ಮರದ ಕೊಂಬೆಗಳು ವಿದ್ಯುತ್ ಸ್ಪರ್ಶಿಸಿ ಸುಟ್ಟು ಕರಕಲಾಗಿದೆ.

ರಕ್ತೇಶ್ವರಿಪದವು ಕ್ರಾಸ್ ರಸ್ತೆ ಮೇಲ್ಬಾಗದಲ್ಲಿ ತಂತಿಯ ಮೇಲೆ ಮರದ ಕೊಂಬೆ ತಾಗುತ್ತಿವೆ. (ಕಳೆದ ತಿಂಗಳು ಬೈ ಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದ ಹತ್ತಿರದ ಸ್ಥಳ),

ಪೇಲತ್ತಳಿಕ್ಕೆ ಮನೆಯ ಮುಂಭಾಗದಲ್ಲಿರುವ ತಂತಿಗಳು ಮರಕ್ಕೆ ತಾಗುತ್ತಿವೆ ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರ

Related posts

ಉಜಿರೆ : ಶ್ರೀ.ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ‘ವಿದ್ಯಾರ್ಥಿ ಸಂಸತ್ತು ಪದಗ್ರಹಣ’

Suddi Udaya

ಕೊಯ್ಯೂರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: ಏಷಿಯನ್ ಯೋಗ ಚಾಂಪಿಯನ್ ಚಿನ್ನದ ಪದಕ ವಿಜೇತೆ ನಿರ್ಮಲಾ ಸುಭಾಷ್ ಕೊಡ್ಲಿಕಾರ ಅಭಿನಂದನೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ನ ವತಿಯಿಂದ ಮಾನವ ಸಂಬಂಧ ತರಬೇತಿ ಕಾರ್ಯಕ್ರಮ

Suddi Udaya

ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹದಾಕಾರದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ನಿಡ್ಲೆ : ಸ. ಪ್ರೌ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಮದ್ದಡ್ಕ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!