ತಿರುವನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ

Suddi Udaya

Updated on:

ಕೊಕ್ಕಡ:ತಿರುವನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಅಡೈ ಬಡೆಕ್ಕರ ನಿವಾಸಿ ದಿ. ಸುಬ್ರಾಯ ತೋಡ್ತಿಲಾಯ ಮತ್ತು ಯಶೋಧ ದಂಪತಿಗಳ ದ್ವಿತೀಯ ಪುತ್ರ ಸತ್ಯನಾರಾಯಣರವರು ಇಂದು(ಜೂ.16)ಅಧಿಕಾರ ಸ್ವೀಕರಿಸಿದರು.


ಇವರ ಪೌರೋಹಿತ್ಯ ಹಾಗೂ ವೇದಪಾಂಡಿತ್ಯವನ್ನು ಪಾಲಲೆ ದಿ. ಸತೀಶ್ ಎಡಪಡಿತ್ತಾಯರವರಲ್ಲಿ ಪೂರೈಸಿದ್ದಾರೆ.
ಇವರು ತನ್ನ ವಿದ್ಯಾಭ್ಯಾಸವನ್ನು ಕೊಕ್ಕಡ ಹಾಗೂ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಮಾಡಿರುತ್ತಾರೆ.
ತಿರುವನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಮೊದಲಿನಿಂದಲೂ ಕೊಕ್ಕಡದ ಎಡಪಡಿತ್ತಾಯ ಕುಟುಂಬಸ್ಥರೆ ಪ್ರಧಾನ ಅರ್ಚಕರಾಗಿ ನಿಯುಕ್ತರಾಗುತ್ತಾರೆ.

Leave a Comment

error: Content is protected !!