July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುದ್ದಿ ಉದಯ ಫಲಶ್ರುತಿ :ಕುಸಿದು ಬಿದ್ದ ಸರಳೀಕಟ್ಟೆ ಹಿ.ಪ್ರಾ. ಶಾಲೆಯ ಹಂಚು: ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾ.ಪಂ. ಮುಖ್ಯಾಧಿಕಾರಿ

ಬೆಳ್ತಂಗಡಿ: ಧಾರಾಕಾರ ಮಳೆಗೆ ಸರಳಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಹಂಚು ಕುಸಿತಗೊಂಡಿದ್ದರ ಬಗ್ಗೆ ಸುದ್ದಿ ಉದಯ ವೆಬ್ ಸೈಟ್ ನಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು ಇದೀಗ ಬೆಳ್ತಂಗಡಿ ತಾ.ಪಂ. ಮುಖ್ಯಾಧಿಕಾರಿ ಭವಾನಿ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಒಂದು ವಾರದ ಒಳಗೆ ಸರಿಪಡಿಸಲು ಸೂಚನೆಯನ್ನು ನೀಡಿದ್ದಾರೆ.

ಜು.1 ರಂದು ವಿಪರೀತ ಮಳೆಯಿಂದಾಗಿ ಸರಳಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಹಂಚು ಕುಸಿತಗೊಂಡಿದ್ದರ ಪರಿಣಾಮ ಮಕ್ಕಳನ್ನು ತುರ್ತಾಗಿ ಬೇರೆ ಕೊಠಡಿಗೆ ಸ್ಥಳಾಂತರಿಸಿದ ಶಿಕ್ಷಕರು ಸುಮಾರು 50 ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಶಾಲೆಯ ಹಂಚು ಅತಿ ಶಿಥಿಲ ವ್ಯವಸ್ಥೆಗೆ ತಲುಪಿ ಕುಸಿತಗೊಂಡಿದೆ. ಆದಷ್ಟು ಬೇಗೆ ಸರಿಪಡಿಸುವಂತೆ ಅಧಿಖಾರಿಗಳಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಬಿಇಒ, ಜಿಲ್ಲಾ ಪಂಚಾಯತಿ ಇಂಜಿನಿಯರ್, ಗ್ರಾಮ ಪಂಚಾಯತಿ ಪಿಡಿಒ, ಗ್ರಾಮ ಸಹಾಯಕ, ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಉಪಸ್ಥಿತರಿದ್ದರು.

Related posts

ಬಳಂಜ: ನಾಲ್ಕೂರು ಕೃಷಿಕ ಕರಿಯ ಪೂಜಾರಿ ಅನಾರೋಗ್ಯದಿಂದ ನಿಧನ

Suddi Udaya

ನಡ ಗ್ರಾಮ ಪಂಚಾಯತ್ ನಲ್ಲಿ 22ನೇ ಜನಸ್ಪಂದನ ಸಭೆ

Suddi Udaya

ನಾಲ್ಕೂರು: ಗಾಳಿ ಮಳೆಗೆ ಬಾಕ್ಯರಡ್ಡದಲ್ಲಿ ಹಟ್ಟಿ ಕುಸಿತ

Suddi Udaya

ಲಾಯಿಲ: ರಸ್ತೆ ದಾಟುತ್ತಿರುವ ವೇಳೆ ಪಿಕಪ್ ಡಿಕ್ಕಿ: ಪಾರೆಂಕಿಯ ಬಾಲಕ ರಂಝಿನ್ ಸಾವು

Suddi Udaya

ಬೆಳ್ತಂಗಡಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಾಮಾನ್ಯ ಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ಎಕ್ಸಲೆ೦ಟ್ ಮೂಡುಬಿದಿರೆ: ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪ೦ದ್ಯಾಟ ಉದ್ಘಾಟನೆ

Suddi Udaya
error: Content is protected !!