23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಡಿಮಳೆ: ಕಳೆಂಜ ಕುಟ್ರುಪ್ಪಾಡಿ ರಾಮಣ್ಣ ನಾಯ್ಕರ ಸೋಗೆ ಮನೆ ಛಾವಣಿ ಸಂಪೂರ್ಣ ಕುಸಿತ

ಕಳೆಂಜ: ಇಲ್ಲಿಯ ಶಿಬರಾಜೆ ಕುಟ್ರುಪ್ಪಾಡಿ ನಿವಾಸಿ ರಾಮಣ್ಣ (ದಿನೇಶ್) ನಾಯ್ಕರ ಸೋಗೆ ಮನೆ ಛಾವಣಿಯು ಜೂ.29 ರಾತ್ರಿ ಸುರಿದ ಜಡಿಮಳೆಗೆ ಮುಂಜಾನೆ 3.30ಕ್ಕೆ ಸಂಪೂರ್ಣ ಛಾವಣಿ ಕುಸಿದಿದ್ದು, ಈ ವೇಳೆ ಮನೆಯಲ್ಲಿ ನಿದ್ರಿಸುತ್ತಿದ್ದ ರಾಮಣ್ಣ (ದಿನೇಶ್) ನಾಯ್ಕ, ಪತ್ನಿ ವಾರಿಜ, ಪುತ್ರ ಅಪಾಯದಿಂದ ಪಾರಾಗಿದ್ದಾರೆ.


ಈ ಸಂದರ್ಭ ಅತಂತ್ರರಾದ ರಾಮಣ್ಣರವರ ಕುಟುಂಬದವರಿಗೆ ಪಕ್ಕದ ಮನೆಯ ಅನೂಪ್ ನಾಯ್ಕ ದೇರ್ಯ ಆಶ್ರಯ ನೀಡಿದ್ದರು. ವಿಷಯ ತಿಳಿದು ತಕ್ಷಣ ಧಾವಿಸಿದ ಬಿಜೆಪಿ ಬೂತ್ ಸಮಿತಿ 174ರ ಅಧ್ಯಕ್ಷ ಹರೀಶ ವಳಗುಡ್ಡೆ, ಸದಸ್ಯರು ಮತ್ತು ಕಾರ್ಯಕರ್ತರು ಮುರಿದು ಬಿದ್ದ ಮನೆಯ ಸಾಮಾನುಗಳನ್ನು ವಿಲೇವಾರಿ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸಿದರು.


ಬಡವರಾದ ರಾಮಣ್ಣ (ದಿನೇಶ) ನಾಯ್ಕರವರಿಗೆ ಒಂದು ತಾತ್ಕಾಲಿಕ ಮನೆಯನ್ನು ಒಂದು ವಾರದೊಳಗೆ ನಿರ್ಮಿಸಿ ಕೊಡಬೇಕೆಂದು ಪಣತೊಟ್ಟ ಹರೀಶ ವಳಗುಡ್ಡೆಯವರು, ಕಾರ್ಯಕರ್ತರು, ಗ್ರಾಮಸ್ಥರು, ದಾನಿಗಳನ್ನು ಸಂಪರ್ಕಿಸುತ್ತಿದ್ದಾರೆ.
ಸದ್ಯದ ಮಟ್ಟಿಗೆ ರಾಮಣ್ಣ ನಾಯ್ಕರ ಕುಟುಂಬದವರು ಸಂಬಂಧಿಕರಾದ ದಯಾನಂದ ನಾಯ್ಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ.

Related posts

ಸವಣಾಲು ಅ. ಹಿ. ಪ್ರಾ. ಶಾಲೆಯ ನಡ್ತಿಕಲ್ಲುವಿನಲ್ಲಿ ಹಣ್ಣಿನ ಗಿಡನಾಟಿ

Suddi Udaya

ಕಣಿಯೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕಾಂಗ್ರೇಸ್ ಸೇರ್ಪಡೆ

Suddi Udaya

ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವರ್ಗಾವಣೆ: ನೂತನ ಸಿಇಒ ಆಗಿ ನರ್ವಾಡೆ ವಿನಾಯಕ್ ನೇಮಕ

Suddi Udaya

ಹೆದ್ದಾರಿ ಕಾಮಗಾರಿಯನ್ನು ಕಕ್ಕಿಂಜೆ ಪೇಟೆ ಮೂಲಕ ಮಾಡುವಂತೆ ಆಗ್ರಹ: ಬೈಪಾಸ್ ರಸ್ತೆ ಬೇಡ: ಪೇಟೆಯ ವರ್ತಕರ ಬೆಂಬಲ ಇದೆ

Suddi Udaya

ಶಿಬರಾಜೆ ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya
error: Content is protected !!