ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರಧಾರ ಬಳಿಯ ಪಂದ್ಯ ಮಾರ್ಗ ಬಳಿ ಇರುವ ಸೇತುವೆ ಹಾಗೂ ಅಕ್ಕಪಕ್ಕಗಳಲ್ಲಿ ಇದ್ದ ಕೊಳಚೆ ನೀರು ಕಸಕಡ್ಡಿಗಳು ಕೊಳಚೆ ವಸ್ತುಗಳನ್ನ ಸ್ವಚ್ಛಗೊಳಿಸುವ ಕಾರ್ಯ ಇಂದು ರವಿವಾರ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಘಟಕ ಹಾಗೂ ಡಾlರವಿ ಕಕ್ಕೆಪದವ್ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜಂಟಿಯಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು .
ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ನ ಅಧ್ಯಕ್ಷ ಡಾl ರವಿ ಕಕ್ಕೆ ಪದವು, ಸೀನಿಯರ್ ಚೇಂಬರ್ ನ ಸದಸ್ಯರುಗಳಾದ ಪ್ರಭಾಕರ ಪಡ್ರೆ ,ಸುಬ್ರಹ್ಮಣ್ಯ ಅತ್ಯಡಿ, ಗೀತಾ ರವಿ ಕಕ್ಕೆ ಪದವ್, ನಿತಿನ್ ಭಟ್ ಹಾಗೂ ಸಮಾಜ ಸೇವಾ ಟ್ರಸ್ಟ್ ನ ನಾಯಕರುಗಳಾದ ಜನಾರ್ದನ ಗೌಡ ,ರವಿ ಕುಲಕುಂದ, ರವಿ ಕುಮಾರಧಾರ, ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.













