25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ: ಅತಂತ್ರರಾದ ರಾಮಣ್ಣ ನಿಂತಿಕಲ್ಲು ಇವರಿಗೆ ತಾತ್ಕಾಲಿಕ ಮನೆ ನಿರ್ಮಾಣ

ಕಳೆಂಜ: ಇಲ್ಲಿಯ ಶಿಬರಾಜೆ ನಿಂತಿಕಲ್ಲು ನಿವಾಸಿ ರಾಮಣ್ಣ (ದಿನೇಶ್ ನಾಯ್ಕ) ರ ಸೋಗೆ ಮನೆ ಚಾವಣಿಯು ಜೂ.29 ರಂದು ರಾತ್ರಿ ಸುರಿದ ಜಡಿಮಳೆಗೆ ಸಂಪೂರ್ಣ ಛಾವಣಿ ಕುಸಿದಿದ್ದು ಅತಂತ್ರರಾದ ರಾಮಣ್ಣರವರ ಕುಟುಂಬದವರಿಗೆ ಪಕ್ಕದ ಮನೆಯ ಅನೂಪ್ ನಾಯ್ಕ ದೇರ್ಯ ಆಶ್ರಯ ನೀಡಿದ್ದರು. ಅವರಿಗೆ ತಾತ್ಕಾಲಿಕ ಮನೆಯನ್ನು ನಿರ್ಮಿಸಿ ಕೊಡಬೇಕೆಂದು ಪಣತೊಟ್ಟ ಹರೀಶ್ ವಳಗುಡ್ಡೆಯವರು ದಾನಿಗಳನ್ನು ಸಂಪರ್ಕಿಸಿದರು. ಅಂತೆಯೇ ವಿಶ್ವಹಿಂದೂ ಪರಿಷತ್ ಭಜರಂಗದಳ ಕಳೆಂಜದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು, ಊರ ದಾನಿಗಳ ಸಹಕಾರ ದೊರೆಯಿತು. ಸಂಪೂರ್ಣ ಶೀಟಿನ ಆರ್ಥಿಕ ನೆರವನ್ನು ನೀಡಿದ ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮುಂದಾಳತ್ವದಲ್ಲಿ ಈ ತಾತ್ಕಾಲಿಕ ಶೀಟಿನ ಮಾಡಿನ ಮನೆ ನಿರ್ಮಾಣವಾಯಿತು.


ಈ ವೇಳೆ ದಯಾನಂದ ನಾಯ್ಕ, ಸುಂದರ ಗೌಡ ಪಳ್ಳದಮೂಲೆ, ಪ್ರವೀಣ್ ಬಟ್ಯಾಲು, ಧನಂಜಯ ಗೌಡ ವಳಚ್ಚಿಲು, ಶೇಖರ ಗೌಡ ನೆಕ್ಕರಾಜೆ, ದಿನೇಶ ಸೀಂಬೂಲು, ಎನ್.ಕೆ ಚಾಕೋ ಗುಂಡಿಗದ್ದೆ, ಗಂಗಾಧರ ಗೌಡ ಪಲ್ಲದಮೂಲೆ, ಸುಂದರ ಗೌಡ ಪಲ್ಲದಮೂಲೆ, ಮಾಧವ ಗೌಡ ಪಲ್ಲದಮೂಲೆ, ಸಂತೋಷ್ ಕುಮಾರ್ ಜೈನ್ ವಳಂಬಲ, ರತ್ನಾಕರ ಗೌಡ ಗುತ್ತು, ಕಾರ್ತಿಕ್ ಗೌಡ ಮಾಪಾಲ್ತಿಮಾರು, ಹರೀಶ್ ಕುಮಾರ್ ವಳಗುಡ್ಡೆ ಮುಂತಾದ ದಾನಿಗಳು ತಾತ್ಕಾಲಿಕ ಮನೆ ನಿರ್ಮಿಸುವಲ್ಲಿ ಸಹಕರಿಸಿದರು.

Related posts

ಕೋಟದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರಿಗೆ ಕ್ರೀಡಾಕೂಟ: ಚಂದ್ರಯಾನ 3 ಬಾಹ್ಯಾಕಾಶ ನೌಕೆ ಸ್ಥಬ್ದ ಚಿತ್ರದಲ್ಲಿ ನಾರಾವಿ ಗ್ರಾ.ಪಂ. ಗೆ ಪ್ರಶಸ್ತಿ

Suddi Udaya

ರಾಜ್ಯದಲ್ಲಿ ಸಿವಿಲ್ ಸರ್ವಿಸ್ ಬೋರ್ಡ್ ರಚನೆಯ ಕುರಿತು ಸದನದಲ್ಲಿ ಪ್ರಶ್ನಿಸಿದ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya

ನಾಲ್ಕೂರು: ಹೃದಯಾಘಾತದಿಂದ ಮೆಲ್ವಿನ್ ನಿಧನ

Suddi Udaya

ಜ.12: ಬಳಂಜ ಬದಿನಡೆಯಲ್ಲಿ ಅಯ್ಯಪ್ಪ ಪೂಜೆ, ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ಕೊಕ್ಕಡದ‌ಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರವರ ಕಾರನ್ನು ಚುನಾವಣಾ ಅಧಿಕಾರಿಗಳಿಂದ ತಪಾಸಣೆ

Suddi Udaya

ಬೆಳ್ತಂಗಡಿ ನ್ಯಾಯಾಲಯಕ್ಕೆ‌ ಹಾಜರಾದ ಬುರುಡೆ ಚಿನ್ನಯ್ಯ ವಾಪಸ್ ಶಿವಮೊಗ್ಗ ಜೈಲಿಗೆ ಭದ್ರತೆಯಲ್ಲಿ ಪ್ರಯಾಣ

Suddi Udaya
error: Content is protected !!