July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಲ್ಲೊಟ್ಟು -ಕೊಯ್ಯೂರು ವಿದ್ಯುತ್ ಫೀಡರ್ ನಲ್ಲಿ ಪರಿಹಾರ ಕಾಣದ ವಿದ್ಯುತ್ ಸಮಸ್ಯೆ.

ಗೇರುಕಟ್ಟೆ: ಮಲ್ಲೊಟ್ಟು-ಕೊಯ್ಯೂರು ಭಾಗದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ಪದೇ-ಪದೇ ಸಮಸ್ಯೆಗಳು ಎದುರಾಗುತ್ತಿದ್ದು ಜನರು ಕತ್ತಲೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಕೊಯ್ಯೂರಿನಲ್ಲಿ ಫೀಡರ್ ಇದ್ದು, ಮಲ್ಲೊಟ್ಟುನಿಂದ ಕೊಯ್ಯೂರಿಗೆ ಸಂರ್ಪಕದ ವಿದ್ಯುತ್‌ ಲೈನ್‌ ನಲ್ಲಿ ರಾತ್ರಿಯಿಂದ ಬೆಳಗಿನವರೆಗೆ ವಿದ್ಯುತ್ ಇರುವುದಿಲ್ಲ. ಕೊಯ್ಯೂರು ಮತ್ತು ಮಲ್ಲೊಟ್ಟು ಭಾಗಕ್ಕೆ ಬೇರೆ ಬೇರೆ ಪವರ್ ಮ್ಯಾನ್‌ ಗಳಿದ್ದರೂ ಕೂಡ ಸಮರ್ಪಕವಾಗಿ ಟೀ ಕಟ್ಟಿಂಗ್ ನಡೆಸದ ಪರಿಣಾಮ ವಿದ್ಯುತ್ ಸಮಸ್ಯೆ ಉಂಟಾಗಿದೆ. ಮಲ್ಲೊಟ್ಟು ವಿಭಾಗದ ಪವರ್‌ಮಾನ್‌ಗೆ ಕೇಳಿದರೆ ಕೊಯ್ಯೂರು ಭಾಗದ ಲೈನ್‌ ಸಮಸ್ಯೆ ಎಂದಷ್ಟೇ ಉತ್ತರ ಬರುತ್ತದೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಬಂದರೆ ಅಥವಾ ಮರ ಬಿದ್ದ ಹಾನಿಯಾದನ್ನು ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ, ದೂರವಾಣಿ ಸಂಖ್ಯೆ ಮತ್ತು ವಿಳಾಸ ಕೇಳಿ ಅವರು ಸುಮ್ಮನಾಗುತ್ತಾರೆ. ಈ ಬಗ್ಗೆ ಜೆ.ಇ ಮತ್ತು ಎ.ಇ.ಇ ಅವರಿಗೆ ದೂರು ನೀಡಿದ್ದರು ಅವರಿಂದಲೂ ಕೂಡ ಸಮಸ್ಯೆ ಪರಿಹಾರವಾಗದೆ ಸಾರ್ವಜನಿಕರು ಕತ್ತಲಲ್ಲಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಪರಿಹರಿಸದಿದ್ದಲ್ಲಿ ಮಲ್ಲೊಟ್ಟು-ಕೊಯ್ಯೂರು ವಿಭಾಗದ ವಿದ್ಯುತ್ ಬಳಕೆದಾರರು ಕಚೇರಿಯಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ರೆಖ್ಯ: ಪರಕ್ಕಳ ನಿವಾಸಿ ಶಾಂತ ಭಟ್ ಹೃದಯಾಘಾತದಿಂದ ನಿಧನ

Suddi Udaya

ಎನ್‌ಎಸ್‌ಎಸ್ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಶಿಬಿರಕ್ಕೆ ಟಿ. ಸುದರ್ಶನ್ ನಾಯಕ್ ಆಯ್ಕೆ

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಮೇ 18: ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪಿಯು ಕಾಲೇಜಿನಲ್ಲಿ ಪಾಳೇಗಾರಿಕೆ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮುಂದಿರುವ ಸವಾಲುಗಳು ವಿಚಾರ ಸಂಕಿರಣ

Suddi Udaya

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ( ಡಿ .ಇಎಲ್. ಇಡಿ) ಸಂಸ್ಥೆಯಲ್ಲಿ ಕಾಲೇಜು ವಾರ್ಷಿಕೋತ್ಸವ

Suddi Udaya
error: Content is protected !!