July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಶಿಶಿಲ ಅಡ್ಡಹಳ್ಳ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ಬೃಹತ್ ಗಾತ್ರದ ಮರ: ಶೌರ್ಯ ವಿಪತ್ತು ತಂಡದ ಸದಸ್ಯರಿಂದ ಮರ ತೆರವು

ಶಿಶಿಲ: ಜು.14ರಂದು ಸುರಿದ ವಿಪರೀತ ಗಾಳಿ ಮಳೆಗೆ ಶಿಶಿಲದ ಅಡ್ಡಹಳ್ಳ ಎಂಬಲ್ಲಿ ಬೃಹತ್ ಗಾತ್ರದ ಧೂಪದ ಮರವೊಂದು ಮುರಿದು ರಸ್ತೆಗೆ ಅಡ್ಡವಾಗಿ 11 kV ಹಾಗೂ LT ಲೈನ್‌ಗಳ ಮೇಲೆ ಬಿದ್ದು ಕೆಳಗೂ ಬೀಳದೆ ಅಪಾಯಕಾರಿಯಾಗಿ ನಿಂತಿದೆ.

ತಕ್ಷಣ ಸ್ವಯಂಸೇವಕ ಗಂಗಾಧರ ಬದಿಗುಡ್ಡೆ ತಂಡದ ಸದಸ್ಯರಿಗೆ ಹಾಗೂ ಸಂಯೋಜಕಿಯವರಿಗೆ ಮಾಹಿತಿಯನ್ನು ನೀಡಿದರು.
ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ರವರ ಮಾರ್ಗದರ್ಶನದಲ್ಲಿ ಸಂಯೋಜಕಿ ಶ್ರೀಮತಿ ರಶ್ಮಿತಾರವರ ಕರೆಯ ಮೇರೆಗೆ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಾದ ಶೀನಪ್ಪ ನಾಯ್ಕ್, ಕುಶಾಲಪ್ಪ ಗೌಡ, ಗಂಗಾಧರ ಬದಿಗುಡ್ಡೆ, ಸೋಮಶೇಖರ್ ಶಿಬಾಜೆ, ಅವಿನಾಶ್ ಭಿಡೆ, ಕಿರಣ್ ಸಂಕೇಶ, ರಮೇಶ ಬೈರಕಟ್ಟ ಸ್ಥಳಕ್ಕೆ ಧಾವಿಸಿ ಪವರ್‌ಮ್ಯಾನ್ ಸಂತೋಷ್ ಹಾಗೂ ಉಮೇಶ್ ಇವರ ಉಪಸ್ಥಿತಿಯಲ್ಲಿ ತಂತಿಯ ಮೇಲಿದ್ದ ಬೃಹತ್ ಮರವನ್ನು ತೆರವುಗೊಳಿಸಿದರು.

ತೆರವುಗೊಳಿಸಿದ ಮರದ ಒಂದು ಪಾರ್ಶ್ವ ಅಪಾಯಕಾರಿಯಾಗಿ ನಿಂತೇ ಇದ್ದು ಅದನ್ನು ದಯಮಾಡಿ ತೆರವುಗೊಳಿಸುವಂತೆ ಹತ್ತಿರದ ಮನೆಯವರಾದ ನಾರಾಯಣ ನಾಯ್ಕರವರು ತಂಡದವರಲ್ಲಿ ವಿನಂತಿಸಿದಾಗ ಕುಶಾಲಪ್ಪ ಗೌಡರು ತಮ್ಮ ಮರಹತ್ತುವ ಕೌಶಲ್ಯವನ್ನು ಉಪಯೋಗಿಸಿ ಮರದ ತುದಿಗೆ ಹಗ್ಗ ಕಟ್ಟಿ ಮರವನ್ನು ಆ ಕಡೆ ವಿದ್ಯುತ್ ಲೈನ್ ಈ ಕಡೆ ಮನೆಯ ನಡುವೆ ಸುರಕ್ಷಿತವಾಗಿ ಕತ್ತರಿಸಿ ಹಾಕಲಾಯಿತು.

Related posts

ಬಳಂಜ ಗ್ರಾ.ಪಂ. ಸದಸ್ಯರ ಸಹಕಾರದಿಂದ ಕಾಪಿನಡ್ಕದಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಸರಿಪಡಿಸಿದ ಮೆಸ್ಕಾಂ ಇಲಾಖೆ, ಗ್ರಾಮಸ್ಥರಿಂದ ಶ್ಲಾಘನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಎಡನೀರು ಮಠದ ಸಚಿದಾನಂದ ಭಾರತಿ ಸ್ವಾಮೀಜಿಯವರು ಭೇಟಿ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ದೇಜಮ್ಮ ನಿಧನ

Suddi Udaya

ನಿಡ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥ

Suddi Udaya

ಉಪ್ಪಿನಂಗಡಿ – ಮಡಂತ್ಯಾರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಬಿಡುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಎಸ್‌ಡಿಪಿಐ ನಿಯೋಗ

Suddi Udaya

ಮುಂದಿನ ತಲೆಮಾರಿನ ಫಾರ್ಮಸಿಸ್ಟ್ ಗಳಿಗೆ ವೃತ್ತಿ ಮಾರ್ಗದರ್ಶನ: ಪ್ರಸನ್ನಾ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಪ್ರೇರಣಾದಾಯಕ ಸೆಮಿನಾರ್

Suddi Udaya
error: Content is protected !!