September 6, 2026
ಆಯ್ಕೆ

ಕೊಯ್ಯೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದೇಜಪ್ಪ ಗೌಡ

ಕೊಯ್ಯೂರು : ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿ(ರಿ) ಆದೂರ್ ಪೇರಲ್ ಕೊಯ್ಯೂರು ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ ನಡೆಯುವ 37 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಮಹಾಸಭೆಯು ಗಣೇಶೋತ್ಸವ ಸಮಿತಿಯ ಹಿಂದಿನ ಅಧ್ಯಕ್ಷ ವಿನಯ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಹಾಗೂ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.


ಗೌರವ ಅಧ್ಯಕ್ಷರಾಗಿ ವಿನಯ ಕೆ, ಅಧ್ಯಕ್ಷರಾಗಿ ದೇಜಪ್ಪ ಗೌಡ ಬೆಲ್ದೆ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಕುಮಾರ್ ಕಜೆ, ಉಪಾಧ್ಯಕ್ಷರಾಗಿ ಯಶವಂತ ಗೌಡ ಪುರ್ಯಳ ಮತ್ತು ಹೇಮಂತಗೌಡ ನಾಗನೊಡಿ, ಕೋಶಾಧಿಕಾರಿಯಾಗಿ ಶ್ರೀಮತಿ ಗೀತಾರಾಮಣ್ಣ ಗೌಡ, ಕಾರ್ಯದರ್ಶಿಗಳಾಗಿ ನಾರಾಯಣ ನಾಯ್ಕ್ ಪುಂಡೈದಡಿ ಮತ್ತು ದಿನೇಶ್ ಗೌಡ ಜಾಲ್ನಪು ಸಲಹೆಗರರಾಗಿ ವಿಜಯ್ ಕುಮಾರ್ ಎಮ್ ಸಮೃದ್ಧಿ ನಿಲಯ, ಕ್ರೀಡಾ ಸಮಿತಿ ಸಂಚಾಲಕರಾಗಿ ದಾಮೋದರ ಗೌಡ ಬೆರ್ಕೆ ಮತ್ತು ಶ್ರೀಮತಿ ಪೂರ್ಣಿಮಾ ಹೇಮಂತಗೌಡ ಜಂಕಿನಡ್ಕ, ಅಲಂಕಾರ ಸಮಿತಿಯ ಸಂಚಾಲಕರಾಗಿ ದಯಾನಂದ ಆಚಾರ್ಯ ಆದರ್ಶ ನಗರ, ಧಾರ್ಮಿಕ ಸಮಿತಿ ಶ್ರೀ ಕೃಷ್ಣ ಭಜನಾ ಮಂಡಳಿಯ ಪುರುಷ ಮತ್ತು ಮಹಿಳಾ ಮಂಡಳಿಯ ಸರ್ವ ಸದಸ್ಯರು, ಆಹ್ವಾನಿತ ಭಜನಾ ಮಂಡಳಿಗಳ ಸಂಚಾಲಕರಾಗಿ ಪಿ ಚಂದ್ರಶೇಖರ ಸಾಲ್ಯಾನ್ ಆದರ್ಶ ನಗರ, ಮೆರವಣಿಗೆ ಸಮಿತಿಯ ಪ್ರಧಾನ ಸಂಚಾಲಕರಾಗಿ ಶೇಖರ ಗೌಡ ಕೋರಿಯಾರು, ಸಹ ಸಂಚಾಲಕರಾಗಿ ಕುಶಾಲಪ್ಪ ನಾಯ್ಕ ಕುಕ್ಕುದಡಿ, ಅನ್ನದಾನ ಸಮಿತಿಯ ಸಂಚಾಲಕರಾಗಿ ರಮೇಶ್ ಗೌಡ ಮೈಂದಕೋಡಿ, ನಾರಾಯಣ ಗೌಡ ನಾಗನೋಡಿ ಹಾಗೂ ಹರ್ಮಾಡಿ ಬಳಗ ಮತ್ತು ಇನ್ನಿತರ ಸಮಿತಿಗಳನ್ನು ರಚಿಸಲಾಯಿತು.


ನಾರಾಯಣ ನಾಯ್ಕ ಸ್ವಾಗತಿಸಿ , ಗೀತಾರಾಮಣ್ಣ ಗೌಡ ವಂದಿಸಿದರು.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿ ರಹಿಮಾನ್ ಪಡ್ಪು ಆಯ್ಕೆ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಪ್ಪೆಟ್ಟಿಗೆ ಕಿರಿಯ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಬೆಳ್ತಂಗಡಿ ತಾ.ಪಂ.ವ್ಯವಸ್ಥಾಪಕರಾಗಿ ನಿಶಾ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಮುರಳಿ ಬಲಿಪ ತಂಡದ ಪದಗ್ರಹಣ

Suddi Udaya
error: Content is protected !!