ಧರ್ಮಸ್ಥಳ ನಾರ್ಯ ದಲ್ಲಿ ಸೇತುವೆ ಕುಸಿತ

Suddi Udaya

ಧರ್ಮಸ್ಥಳ:ಧರ್ಮಸ್ಥಳ ಗ್ರಾಮದ ನೇತ್ರಾ ನಗರ ದೊಂಡೋಲೆ ನಾರ್ಯ ಮಾರ್ಗವಾಗಿ ಬೆಳಾಲ್ ಗ್ರಾಮಕ್ಕೆ ಸಂಪರ್ಕ ವಾಗುವ ರಸ್ತೆಯ ನಾರ್ಯ ಎಂಬಲ್ಲಿ ಸೇತುವೆ ಕುಸಿದು ಬೀಳುವ ಅಪಾಯದ ಪರಿಸ್ಥಿತಿಯಲ್ಲಿದೆ. ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ಸ್ಥಳ ಭೇಟಿ ನೀಡಿ ಘನ ವಾಹನಗಳ ನಿಷೇಧ ಬಗ್ಗೆ ಕ್ರಮ ಕೈಗೊಳ್ಳಲಾಯಿತು. ಧರ್ಮಸ್ಥಳ ಬೆಲಾಲು ಸಂಪರ್ಕ ರಸ್ತೆ ಆಗಿರುವುದರಿಂದ ಮಳೆಹನಿ ಯೋಜನೆಯ ಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ದೊಡ್ಡ ವಾಹನ ಅಥವಾ ಸಾಮಾಗ್ರಿ ತುಂಬಿದ ಲೋಡ್ ವಾಹನ ಹೋದಲ್ಲಿ ಅಪಾಯ ಗ್ಯಾರಂಟಿ. ಹಾಗಾಗಿ ಗ್ರಾಮಸ್ಥರಲ್ಲಿ ಮತ್ತು ಸಾರ್ವಜನಿಕರಲ್ಲಿ ದೊಡ್ಡ ವಾಹನಗಳ ಸಂಚಾರಕ್ಕಾಗಿ ಬಳಕೆ ಮಾಡಬಾರದಾಗಿ ವಿನಂತಿಸಲಾಗಿದೆ. ಸದ್ರಿ ರಸ್ತೆಯಲ್ಲಿ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ಕೆ ಎಸ್ ಆರ್ ಟಿ ಸಿ ಬಸ್ಸು ಸಂಪರ್ಕವನ್ನು ಕಲ್ಪಿಸಲಾಗಿತ್ತು , ರಸ್ತೆಯ ಸಮಸ್ಯೆಯಿಂದಾಗಿ ತಾತ್ಕಾಲಿಕವಾಗಿ ಬಸ್ಸು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Leave a Comment

error: Content is protected !!