22.6 C
ಪುತ್ತೂರು, ಬೆಳ್ತಂಗಡಿ
July 23, 2026
ತಾಲೂಕು ಸುದ್ದಿಪ್ರಮುಖ ಸುದ್ದಿಸಮಸ್ಯೆ

ತೆಕ್ಕಾರು ಗ್ರಾಮದಲ್ಲಿ ರಾತ್ರಿ ವೇಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್

ತೆಕ್ಕಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಿದ್ಯುತ್ ತೆಕ್ಕಾರು ಗ್ರಾಮದ ಸರಳಿಕಟ್ಟೆ, ಬಾಜಾರು, ಕುಟ್ಟಿಕಾಳ, ಬಂಟ್ವಾಳ ತಾಲೂಕಿನ ಮಣಿನಾಲ್ಗೂರು, ನಡುಮೊಗರು, ಬೈಲಮೆರ್, ನೆಲ್ಲಿಪಲ್ಕೆ, ಗೋದಾಮ್ ಗುಡ್ಡೆ, ಪೊರ್ಕಲದವರೆಗೆ ಮಳೆ ಆರಂಭವಾದಗಿನಿಂದ ವಿದ್ಯುತ್ ಸಮಸ್ಯೆ ಪ್ರಾರಂಭವಾಗಿದೆ. ರಾತ್ರಿ ೧೦ ಗಂಟೆಗೆ ಹೋದಂತಹ ಕರೆಂಟ್ ಬರುವುದು ಬೆಳಗ್ಗೆ. ಸಂಜೆ ಏನಾದರೂ ಫ್ಯೂಸ್ ಹೋಗಿದೆ ಎಂದು ದೂರು ನೀಡಿದರೆ ಅದನ್ನು ಪವರ್‌ಮ್ಯಾನ್‌ಗಳು ಮರುದಿನ ಬಂದು ಹಾಕುತ್ತಾರೆ.
ತೆಕ್ಕಾರು ಗ್ರಾಮದಲ್ಲಿ ಇಬ್ಬರು ಖಾಯಂ ಪವರ್‌ಮ್ಯಾನ್‌ಗಳು ಇದ್ದಾರೆ. ಎಲ್ಲಿಯಾದರು ವಿದ್ಯುತ್ ಕಂಬ, ತಂತಿ ಬಿದ್ದಿದೆ ಎಂದು ದೂರು ನೀಡಿದರೆ ಇವತ್ತು ಜನ ಇಲ್ಲ ನಾಳೆ ಬರುತ್ತೇವೆ ಎಂದು ಹೇಳಿ ಹೋಗುತ್ತಾರೆ. ಜನರಿಗೆ ಇದ್ದರಿಂದ ಸಮಸ್ಯೆ ಆಗುತ್ತಿದೆ.

ಪಂಚಾಯತ್‌ನಲ್ಲೂ ಸರಿಯಾಗಿ ಕರೆಂಟ್ ಇರುವುದಿಲ್ಲ. ಗ್ರಾಮಸ್ಥರು ಏನಾದರು ಕೆಲಸಕ್ಕಾಗಿ ಬಂದರೆ, ಎಲ್ಲಾ ಕೆಲಸಗಳು ಕಂಪ್ಯೂಟರ್‌ನಲ್ಲಿ ಆಗುವುದರಿಂದ ಸರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ, ಗ್ರಾಮಸ್ಥರು ಪಂಚಾಯತ್ ಸಿಬ್ಬಂದಿಗಳು ಕೆಲಸ ಮಾಡುವುದಿಲ್ಲ ಎಂದು ಹಿಡಿ ಶಾಪ ಹಾಕಿ ಹೋಗುತ್ತಾರೆ. ಮೇ ತಿಂಗಳಿನಲ್ಲಿಯೇ ಮರದ ಗೆಲ್ಲುಗಳನ್ನು ತೆಗೆಯುವಂತಹ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ: ಚಂಡಿಕಾ ಹೋಮ, ಪ್ರಸನ್ನಪೂಜೆ, ಪಾದಪೂಜೆ

Suddi Udaya

ಆ.14: ಕಳೆಂಜ ವಿ.ಹಿಂ.ಪ. ಬಜರಂಗದಳ ಗ್ರಾಮ ಸಮಿತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಮತ್ತು ಧ್ವಜಾರೋಹಣ

Suddi Udaya

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ವಾಣಿ ಕಾಲೇಜಿನ ಬಾಲಕರ ತಂಡವು ದ್ವಿತೀಯ ಪ್ರಶಸ್ತಿ

Suddi Udaya

2025-26 ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ

Suddi Udaya

ಜಿಲ್ಲಾ ಮಟ್ಟದ ಭಾವೈಕ್ಯತೆ ಮಕ್ಕಳ ಮೇಳ: ಕುಂಭಶ್ರೀ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಸ್ಕೌಟ್ ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ

Suddi Udaya
error: Content is protected !!