23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊದ ಸಮಾರೋಪ ಸಮಾರಂಭ

ಬೆಳ್ತಂಗಡಿ : ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊ ಜು.28ರಂದು ಡಾ. ಬಿ. ಆರ್. ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ತುಳುನಾಡು ಒಕ್ಕೂಟ ಸಂಘಟನೆಯ ವತಿಯಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುತ್ತೊಟ್ಟು ಫಿನ್ ಕಾರ್ಪ್ ಮೂಡಬಿದ್ರೆ ಶಾಖೆಯ ಸೀನಿಯರ್ ಮ್ಯಾನೇಜರ್ ಶ್ರೀಮತಿ ಮಲ್ಲಿಕಾ ಪುನೀತ್ ಇವರು ಮಾತನಾಡಿ ತುಳುನಾಡಿನ ಪಾರಂಪರಿಕ ಆಚರಣೆಗಳನ್ನು ಉಳಿಸಿ ಬೆಳೆಸುವುದು ಎಲ್ಲಾ ತುಳುವರ ಕರ್ತವ್ಯವಾಗಿದೆ. ಮಕ್ಕಳಿಗೆ ಪಾರಂಪರಿಕ ಚೆನ್ನೆಮಣೆ ಆಟವನ್ನು ಕಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ತುಳು ನಾಟಕ ರಚನೆಕಾರ ಮತ್ತು ರಂಗನಿರ್ದೇಶಕ ವಿ. ಎನ್. ಕುಲಾಲ್ ವೇಣೂರು, ವಕೀಲರಾದ ಅನಿಲ್ ಕುಮಾರ್ ಯು., ರಾಜೀವ್ ಕಕ್ಕೆ ಪದವು, ಜಯಾನಂದ ಬಂಗೇರ ಕುವೆತ್ಯಾರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ತುಳುನಾಡ್ ಒಕ್ಕೂಟ ಸಂಘಟನೆಯ ಉಪಾಧ್ಯಕ್ಷರಾದ ನವೀನ್ ಪೂಜಾರಿ ಅಡ್ಕದಬೈಲು, ತುಳುನಾಡ್ ಒಕ್ಕೂಟ ಸಂಘಟನೆಯ ಜಿಲ್ಲಾಧ್ಯಕ್ಷರಾದ ಉದಯ ಗೋಳಿಯಂಗಡಿ ಗೌರವ ಉಪಸ್ಥಿತರಿದ್ದರು. ತುಳುನಾಡ್ ಒಕ್ಕೂಟ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ರಾಜೇಶ್ ಕುಲಾಲ್ ಬೈರೊಟ್ಟು ಅಧ್ಯಕ್ಷತೆ ವಹಿಸಿದ್ದರು.


ಬೆಳಿಗ್ಗೆಯಿಂದ ನಡೆದ ಸಂಧಿ ಪಾರ್ದನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀಮತಿ ಹೊನ್ನಮ್ಮ, ಎರಡನೇ ಬಹುಮಾನ ಅವನಿ, ಮೂರನೇ ಬಹುಮಾನ ಶಿಫಾನಿ ಪಡೆದರು.

ಚೆನ್ನೆಮಣೆ ಆಟದ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಅವನಿ, ಎರಡನೇ ಬಹುಮಾನ ಶಿವಾಣಿ, ಮೂರನೇ ಬಹುಮಾನ ಸುಪ್ರಿತಾ ರಾವ್, ನಾಲ್ಕನೇ ಬಹುಮಾನ ಶ್ರಾವ್ಯ ಪಡೆದರು.

ಚೆನ್ನೆಮಣೆ ಆಟದ ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಸಂಜೀವ, ಎರಡನೇ ಬಹುಮಾನ ಪ್ರವೀಣ್, ಮೂರನೇ ಬಹುಮಾನ ಜಿ. ವಿ. ಹರೀಶ್ ಸವಣಾಲು ಮತ್ತು ಮನೋಹರ್ ಜಂಟಿಯಾಗಿ ಪಡೆದರು. ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ಸಮಾರೋಪ ಸಮಾರಂಭದಲ್ಲಿ ನೀಡಲಾಯಿತು. ರಮೇಶ್ ಸಾಲಿಯಾನ್ ಅರಳಿ ಸ್ವಾಗತಿಸಿ, ಆಕಾಶ್ ಪೂಜಾರಿ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯ ಗೌರವ: ಕಾಂಬೋಡಿಯಾ ದೇಶದಲ್ಲಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023 ಸ್ವೀಕರಿಸಿ ಸ್ವದೇಶಕ್ಕೆ ಮರಳಿದ ಸಂಚಾಲಕ ರಾಜೇಶ್ ಪೈ ಉಜಿರೆ

Suddi Udaya

ನೆರಿಯ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಕಾಯರ್ತಡ್ಕ : ಯುವತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಉಜಿರೆ ಗುರಿಪಳ್ಳ -ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ

Suddi Udaya

ಹೈದರಾಬಾದಿನಲ್ಲಿ ನಡೆದ ವಿದ್ಯಾ ಭಾರತೀಯ ಕ್ಷೇತ್ರಿಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆ: ಸುಶಾಂತ್ ಎಸ್ ಪೂಜಾರಿ ಕುದ್ಯಾಡಿ ಪ್ರಥಮ‌ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಡಿ.24-25: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ

Suddi Udaya
error: Content is protected !!