September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯಿಂದ ಹಾವೇರಿ ರಾಣಿ ಬೆನ್ನೂರಿನಲ್ಲಿ ಕಾರ್ಯಕ್ರಮ

ಬಳಂಜ: ಕುಣಿತಾ ಭಜನೆಯಲ್ಲಿ ರಾಜ್ಯವ್ಯಾಪ್ತಿ ಪ್ರಸಿದ್ಧಿ ಪಡೆದಿರುವಂತಹ ವಿವಿಧ ಭಜನೆ ಮಂಡಳಿಗಳಲ್ಲಿ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಕೂಡ ಒಂದು. ಹರೀಶ್ ವೈ ಚಂದ್ರಮ‌ ಬಳಂಜ ಇವರ ಸಂಚಾಲಕತ್ವದಲ್ಲಿ ಮುನ್ನಡೆಯುತ್ತಿರುವ ತಂಡ ಧಾರ್ಮಿಕತೆಯ ಭಕ್ತಿಯ ಹೆಜ್ಜೆಯ ಮೂಲಕ ಹೆಸರು ಗಳಿಸಿ ತನ್ನ ಭಕ್ತಿ ಪಯಣದ 230 ನೇ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನ ರಾಣೆಬೆನ್ನೂರು ಸಾಯಿ ಬಾಬಾ ಉತ್ಸವ ಮೂರ್ತಿಯ ಗುರುಪೂರ್ಣಿಮೆಯ ಕುಣಿತ ಭಜನೆ ಮೆರವಣಿಗೆಯ ಕಾರ್ಯಕ್ರಮವನ್ನು ನೀಡಿ ಎಲ್ಲರ ಮೆಚ್ಚುಗೆ ಗಳಿಸಿ, ಜನರ ಪ್ರಶಂಸೆಗೆ ಪಾತ್ರವಾಗಿದೆ.ಭಜನೆಯೊಂದಿಗೆ ಹಲವಾರು ಸಮಾಜಮುಖಿ ಕೆಲಸ ಕಾರ್ಯ ಸಾಧಿಸಿ ಸಾರ್ವಜನಿಕರಿಂದ ಪ್ರಶಂಸೆ ಗಳಿಸಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಿತ್ಯಾನಂದ ಕುಂದಾಪುರ ಅವರು ಬ್ರಹ್ಮಶ್ರೀ ಕುಣಿತ ಭಜನಾ ತಂಡದ ಸಂಚಾಲಕರಾದ ಹರೀಶ್ ವೈ ಚಂದ್ರಮ ಹಾಗೂ ತಂಡದ ಎಲ್ಲ ಸದಸ್ಯರಿಗೂ ಮತ್ತು ಉಪಸ್ಥಿತರಿದ್ದ ತಂಡದ ಪೋಷಕರಿಗೂ ಶಾಲು ಹಾಕಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರು, ಗುರುಗಳು, ಪೋಷಕರು ಪದಾಧಿಕಾರಿಗಳು ,ತಂಡದ ಸದಸ್ಯರು ಹಾಗೂ ಜಯರಾಮ್ ಕುಂದಾಪುರ ಉಪಸ್ಥಿತರಿದ್ದರು.

Related posts

ದೇಲಂಪುರಿ ಶ್ರೀ ಮಹಾಗಪತಿ ದೇವಸ್ಥಾನಕ್ಕೆ ವೀರಮ್ಮ ಸಂಜೀವ ಸಾಲಿಯಾನ್ ರವರಿಂದ ಮರದ ಕುರ್ಚಿ ಕೊಡುಗೆ

Suddi Udaya

ತೋಟತ್ತಾಡಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಖ್ಯಾತ ಯುರಾಲಜಿಸ್ಟ್‌ ಡಾ. ಸದಾನಂದ ಪೂಜಾರಿಗೆ ಪ್ರೈಡ್ ಆಫ್ ನೇಷನ್ ಅವಾರ್ಡ್ ಪ್ರದಾನ

Suddi Udaya

ವೇಣೂರು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಲೆಕ್ಕಿಗ ಲೋಕಯ್ಯ ಗೌಡ ನಿಧನ

Suddi Udaya

ಜ.7: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂತ್ರರೋಗ ತಪಾಸಣಾ ಶಿಬಿರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷದ ಪ್ರಯುಕ್ತ ರಂಗಪೂಜೆ ಹಾಗೂ ಉತ್ಸವಾದಿಗಳು

Suddi Udaya
error: Content is protected !!