25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ನಿರಂತರ ಮಳೆ: ನಡ ಅಂತ್ರಾಯಪಲ್ಕೆಯ ಗುಡ್ಡ ಕುಸಿತ- ಶ್ಯಾಮ್‌ಸುಂದರ್‌ರ ಮನೆಯ ಕಂಪೌಂಡ್‌ಗೆ ಹಾನಿ

ನಡ: ಇಲ್ಲಿಯ ನಡ ಗ್ರಾಮದ ಅಂತ್ರಾಯಪಲ್ಕೆ ನಿವಾಸಿ ಶ್ಯಾಮಸುಂದರ್ ಅವರ ಮನೆಯ ಬಳಿಯಲ್ಲಿ ರಬ್ಬರ್ ತೋಟದ ಮೂಲಕ ಮಳೆ ನೀರು ಹರಿದು ಬಂದು ಗುಡ್ಡ ಕುಸಿತಕ್ಕೊಳಗಾಗಿದ್ದು, ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿದೆ. ಇದರಿಂದಾಗಿ ಮನೆಗೆ ಅಪಾಯವಾಗಬಹುದೆಂಬ ಭೀತಿ ಎದುರಾಗಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಸಂಜೆ ಮನೆಯ ಸಮೀಪ ಎತ್ತರ ಪ್ರದೇಶದಲ್ಲಿರುವ ರಬ್ಬರ್ ತೋಟದಿಂದ ಮಳೆ ನೀರು ರಭಸವಾಗಿ ಹರಿದು ಕೆಳಗೆ ಬಂದಿದೆ. ಇದರಿಂದ ಮನೆಯ ಸಮೀಪದ ಗುಡ್ಡ ಕುಸಿತಗೊಂಡು ಮಣ್ಣು ಸಹಿತ ನೀರು

ಮನೆಯ ಅಂಗಲದವರೆಗೆ ಬಂದಿದೆ. ರಬ್ಬರ್ ತೋಟದಿಂದ ಮಣ್ಣು ಸಹಿತಿ ನೀರು ಬರುತ್ತಿರುವುದರಿಂದ ರಬ್ಬರ್ ಮರಗಳಿಗೆ ಸಮಸ್ಯೆ ಕಾಡಿದೆ. ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿ ಹಾನಿ ಉಂಟಾಗಿದೆ. ರಬ್ಬರ್ ತೋಟ ಎತ್ತರದಲ್ಲಿದ್ದು, ಒಮ್ಮೆಲೆ ನೀರು ಹರಿದು ಬಂದು ಈ ಘಟನೆ ನಡೆದಿದೆ ಎಂದು ಶ್ಯಾಮಸುಂದರ್ ಮಾಹಿತಿ ನೀಡಿದ್ದಾರೆ.

Related posts

ಬೆಳ್ತಂಗಡಿ ನಗರದಲ್ಲಿ ರೂ.40 ಲಕ್ಷ ವೆಚ್ಚದ ಹಿಂದೂ ರುದ್ರಭೂಮಿ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 25ನೇ ವರ್ಷದ ಶಾಲಾ ವಾರ್ಷಿಕೋತ್ಸವ

Suddi Udaya

ಹತ್ಯಡ್ಕ: ತುಂಬೆತಡ್ಕ ರಾಣಿಯಾರ್ ಸಮಾಜ ಸೇವಾ ಸಂಘದಿಂದ “ಸ್ವಚ್ಛ ಭಾರತ ಅಭಿಯಾನ ” ಪ್ರಯುಕ್ತ ಸ್ವಚ್ಛತಾ ಕಾರ್ಯ

Suddi Udaya

ನಾವೂರು ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಪಡಂಗಡಿ ಗ್ರಾ.ಪಂ ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya

ಚಾರ್ಮಾಡಿ : ಅನ್ನಾರ್ ನದಿಯ ಸೇತುವೆಯ ಅಡಿಯಲ್ಲಿ ದನದ ತಲೆ ಸೇರಿದಂತೆ ಅವಶೇಷಗಳು ಪತ್ತೆ

Suddi Udaya
error: Content is protected !!