ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಉಜಿರೆ ನಿವಾಸಿ ಅಲ್ಪೋನ್ಸ್‌ ಕರ್ಡೋಜ್ ರಿಗೆ ರೂ. 2.72 ಲಕ್ಷ ವಂಚನೆ

ಬೆಳ್ತಂಗಡಿ: ದುಬೈ ಮೂಲದ ಆಲ್ ಜಬೇರ್ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉಜಿರೆ ಮೂಲದ ನಿವಾಸಿ ಅಲ್ಪೋನ್ಸ್‌ ಕರ್ಡೋಜ್ ರವರಿಂದ ಹಂತ ಹಂತವಾಗಿ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡ ಘಟನೆ ಜು.31 ರಂದು ನಡೆದಿದೆ.

ಉಜಿರೆ ಮಂಜುಶ್ರೀ ನಗರ ನಿವಾಸಿ ಕೊನ್ಸಟೆನಿ ಅಲ್ಪೋನ್ಸ್‌ ಕರ್ಡೋಜ್ (64 ವರ್ಷ)ಎಂಬವರು ಈ ಹಿಂದೆ ವಿದೇಶದಲ್ಲಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದವರು, ಕಳೆದ 4.5 ವರ್ಷದಿಂದ ಊರಿನಲ್ಲಿಯೇ ಇದ್ದವರು ಫೇಸ್ಬುಕ್ ಜಾಲತಾಣದ ಲಿಂಕ್ ಮುಖಾಂತರ ದುಬೈ ಮೂಲದ ಆಲ್ ಜಬೇರ್ (al jaber) ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗದ ಭರವಸೆ ಇರುವುದನ್ನು ಸತ್ಯ ಎಂದು ನಂಬಿ, ಲಿಂಕ್ ಮೂಲಕ ಅಪರಿಚಿತ ಕಂಪನಿಯ HRA ಅಧಿಕಾರಿ ಎಂದು ನಂಬಿಸಿ, ನಂತರ ಪಿರ್ಯಾದುದಾರರು ಆತನ ಮೊಬೈಲ್ ನಂಬ್ರ ಪಡೆದುಕೊಂಡು, ಆತನೊಂದಿಗೆ ವಾಟ್ಸಾಪ್ ಮೂಲಕ ಸಂವಹನ ಬೆಳೆಸಿದಾಗ ಪ್ರಾರಂಭಿಕ ಖರ್ಚು ಎಂದು ಅಲ್ಪೋನ್ಸ್‌ ಕರ್ಡೋಜ್ ನಂಬಿಸಿ ಅಲ್ಪೋನ್ಸ್‌ ಕರ್ಡೋಜ್ ರಿಂದ ಅಪರಿಚಿತನ ಬ್ಯಾಂಕ್ ಖಾತೆಗೆ ಜು. 24 ರಿಂದ ಜು.31 ರವರೆಗೆ ಹಂತ ಹಂತವಾಗಿ ರೂ. 2,72,621/- ಮೊತ್ತ ನಗದನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಅಲ್ಪೋನ್ಸ್‌ ಕರ್ಡೋಜ್ ಮೋಸ ಹೋಗಿರುವ ಬಗ್ಗೆ ತಿಳಿದು, ನಂಬಿಸಿ ಮೋಸ ಮಾಡಿದ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. 77/2024 ಕಲಂ: 318(2), 318(4) ಭಾರತೀಯ ನ್ಯಾಯ ಸಂಹಿತೆ ಮತ್ತು 67(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ನಡ ಸರಕಾರಿ ಪ್ರೌಢಶಾಲೆಗೆ ಶೇ. 97.82 ಫಲಿತಾಂಶ

Suddi Udaya

ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ: ಎಸ್. ಡಿ. ಎಂ ಆಂ.ಮಾ. ಶಾಲೆ ರಾಜ್ಯ ಪಠ್ಯಕ್ರಮದ, ವಿದ್ಯಾರ್ಥಿಗಳಾದ ಅಧಿಶ್ ಬಿ. ಸಿ ಮತ್ತು ಸಚಿತ್ ಭಟ್ ಅತ್ಯುತ್ತಮ ಸಂಶೋಧನೆ ಯ ಹೆಗ್ಗಳಿಕೆ

Suddi Udaya

ರಾಷ್ಟ್ರೀಯ ಹಬ್ಬಗಳ, ಮಹಾಪುರುಷರ ಜಯಂತಿ ಆಚರಣಾ ಸಮಿತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಆಚರಣೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ/ ಕನ್ಯಾಡಿ ಗ್ರಾಮ ಸಮಿತಿ ಮಹಿಳಾ ವೇದಿಕೆ ವತಿಯಿಂದ ಒಂಬತ್ತನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ: 18216 ಮತಗಳ ಅಂತರದಿಂದ ಹರೀಶ್ ಪೂಂಜ ಪ್ರಚಂಡ ಗೆಲುವು: ರಕ್ಷಿತ್ ಶಿವರಾಂಗೆ ಸೋಲು

Suddi Udaya
error: Content is protected !!