ಹದಗೆಟ್ಟ ರಸ್ತೆ : ಮಡಂತ್ಯಾರು ವಲಯ, ಬಿ.ಎಂ.ಎಸ್ ಆಟೋ ಚಾಲಕ ಮಾಲಕರ ಸಂಘದಿಂದ ದುರಸ್ತಿ ಕಾರ್ಯ

Suddi Udaya

ಮಚ್ಚಿನ: ಇಲ್ಲಿಯ ಬಳ್ಳಮಂಜ ಸಮೀಪ ಬರೋಡ ಬ್ಯಾಂಕ್ ನ ಹತ್ತಿರ ರಸ್ತೆಯು ತೀರ ಹದಗೆಟ್ಟಿದ್ದು ಈ ಬಗ್ಗೆ ಮಡಂತ್ಯಾರು ವಲಯ, ಬಿ.ಎಂ.ಎಸ್ ಆಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಆನಂದ ದೇವಾಡಿಗ ಮಚ್ಚಿನ ಗ್ರಾ.ಪಂ.ಗೆ ದೂರನ್ನು ನೀಡಿದರು.

ತಕ್ಷಣ ಪ್ರತಿಕ್ರಿಯಿಸಿ ಮಚ್ಚಿನ ಗ್ರಾ.ಪಂ. ನಿಂದ ರಸ್ತೆಗೆ ಜಲ್ಲಿ ಹೂಡಿ ತಂದು ಹಾಕಿದರು. ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಆನಂದ ದೇವಾಡಿಗ ಮತ್ತು ಸುನೀಲು ಕುಮಾರ್ ರವರು ರಸ್ತೆಗೆ ಜಲ್ಲಿ ಹೂಡಿ ಹಾಕಿ ಸರಿಪಡಿಸಿದರು.

Leave a Comment

error: Content is protected !!