July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ : ಕೂಳೂರು ನಿವಾಸಿ ಪುತ್ತಾಕ‌ ನಿಧನ

ಮುಂಡಾಜೆ ಗ್ರಾಮದ ಕೂಳೂರು‌ ನಿವಾಸಿ, ಹಿರಿಯ ಮೇಸ್ತ್ರಿಗಳು ಹಾಗೂ ಧರ್ಮಬಂಧುವಾಗಿದ್ದ ಪುತ್ತಾಕ‌‌ ಕೂಳೂರು (78ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ.12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪಾರ್ಶ್ವ ವಾಯು ಪೀಡಿತರಾಗಿದ್ದ ಅವರು ಹಲವು ವರ್ಷಗಳಿಂದ ವಿಶ್ರಾಂತಿಯಲ್ಲೇ ಇದ್ದರಾದರೂ ರವಿವಾರ ಹಠಾತ್ ಹೃದಯ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು.

ಮರ್‌ಹೂಮ್ ಕಾಜೂರು ಜಮಲುಲ್ಲೈಲಿ ತಂಙಳ್ ಅವರ ಅನೇಕ ವರ್ಷ ನಿಕಟವರ್ತಿ ಮತ್ತು ಸೇವಕರಾಗಿದ್ದ ಅವರು ಮುಂಡಾಜೆ “ಮಸ್ಲಕ್” ಸಮಿತಿಯ ಸ್ಥಾಪಕಲ್ಲೊರ್ವರು‌ ಹಾಗೂ ಪ್ರಸ್ತುತ ಸಂಚಾಲಕರಾಗಿದ್ದರು. ಕೃಷಿಕರಾಗಿದ್ದ ಅವರು ಕನ್ಯಾಡಿ 2 ಇಲ್ಲಿ ಕೃಷಿ ತೋಟದ ಮೇಲ್ವಿಚಾರಕರಾಗಿ ದೀರ್ಘ ವರ್ಷ ಸೇವೆ ಸಲ್ಲಿಸಿದ್ದರು. ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ ಇದರ ಆಡಳಿತ ಸಮಿತಿಯಲ್ಲೂ ಹಲವು ವರ್ಷ ಸೇವೆ ಸಲ್ಲಿಸಿದ್ದು ಮಸೀದಿಯ ಆರಂಭಿಕ ದಾಖಲೆ ಪತ್ರಗಳು ಸರಿಪಡಿಸುವಲ್ಲಿ ತಮ್ಮ ಸೇವೆ ನೀಡಿದ್ದರು.

ಮೃತರು ಪತ್ನಿ, ಐವರು ಪುತ್ರರು ,‌ ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಸುರ್ಯ ದೇವಸ್ಥಾನ: ದೇವದಾಸ್ ಕಾಪಿಕಾಡ್ ಹಾಗೂ ಶ್ರೀನಿವಾಸ ಹೆಬ್ಬಾರ್‌ರಿಗೆ ಸನ್ಮಾನ

Suddi Udaya

ತೆಕ್ಕಾರು ಗ್ರಾಮದಲ್ಲಿ ರಾತ್ರಿ ವೇಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್

Suddi Udaya

ಪಡ್ಡಂದಡ್ಕ: ಕುರುಂಬಡ್ಕ ನಿವಾಸಿ ಕಬ್ಬು ನಿಧನ

Suddi Udaya

ಫೆಂಗಲ್ ಚಂಡಮಾರುತ: ಡಿ.02 ರಿಂದ 03 ರವರೆಗೆ ದ.ಕ. ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ

Suddi Udaya

ಬೆಳ್ತಂಗಡಿ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ನಾಗೇಶ್ ಕದ್ರಿ ನೇಮಕ

Suddi Udaya

ನ.7 ರಂದು ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆ

Suddi Udaya
error: Content is protected !!