September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ : ಕೂಳೂರು ನಿವಾಸಿ ಪುತ್ತಾಕ‌ ನಿಧನ

ಮುಂಡಾಜೆ ಗ್ರಾಮದ ಕೂಳೂರು‌ ನಿವಾಸಿ, ಹಿರಿಯ ಮೇಸ್ತ್ರಿಗಳು ಹಾಗೂ ಧರ್ಮಬಂಧುವಾಗಿದ್ದ ಪುತ್ತಾಕ‌‌ ಕೂಳೂರು (78ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ.12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪಾರ್ಶ್ವ ವಾಯು ಪೀಡಿತರಾಗಿದ್ದ ಅವರು ಹಲವು ವರ್ಷಗಳಿಂದ ವಿಶ್ರಾಂತಿಯಲ್ಲೇ ಇದ್ದರಾದರೂ ರವಿವಾರ ಹಠಾತ್ ಹೃದಯ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು.

ಮರ್‌ಹೂಮ್ ಕಾಜೂರು ಜಮಲುಲ್ಲೈಲಿ ತಂಙಳ್ ಅವರ ಅನೇಕ ವರ್ಷ ನಿಕಟವರ್ತಿ ಮತ್ತು ಸೇವಕರಾಗಿದ್ದ ಅವರು ಮುಂಡಾಜೆ “ಮಸ್ಲಕ್” ಸಮಿತಿಯ ಸ್ಥಾಪಕಲ್ಲೊರ್ವರು‌ ಹಾಗೂ ಪ್ರಸ್ತುತ ಸಂಚಾಲಕರಾಗಿದ್ದರು. ಕೃಷಿಕರಾಗಿದ್ದ ಅವರು ಕನ್ಯಾಡಿ 2 ಇಲ್ಲಿ ಕೃಷಿ ತೋಟದ ಮೇಲ್ವಿಚಾರಕರಾಗಿ ದೀರ್ಘ ವರ್ಷ ಸೇವೆ ಸಲ್ಲಿಸಿದ್ದರು. ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ ಇದರ ಆಡಳಿತ ಸಮಿತಿಯಲ್ಲೂ ಹಲವು ವರ್ಷ ಸೇವೆ ಸಲ್ಲಿಸಿದ್ದು ಮಸೀದಿಯ ಆರಂಭಿಕ ದಾಖಲೆ ಪತ್ರಗಳು ಸರಿಪಡಿಸುವಲ್ಲಿ ತಮ್ಮ ಸೇವೆ ನೀಡಿದ್ದರು.

ಮೃತರು ಪತ್ನಿ, ಐವರು ಪುತ್ರರು ,‌ ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಡಿ.28-ಜ.1: ಓಡಿಲ್ನಾಳ ಕಿರಾತಮೂರ್ತಿಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ವಾಣಿ ಪಿಯು ಕಾಲೇಜಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗೀಯ ಅಧಿಕಾರಿ ಶ್ರೀಮತಿ ಸವಿತಾ ಎರ್ಮಾಳ್ ಭೇಟಿ

Suddi Udaya

ಕಲ್ಮಂಜ : ಸಿದ್ದಬೈಲು ಪರಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನ

Suddi Udaya

ಕೊಕ್ಕಡ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya

ಶಿಶಿಲ: ಹಾವು ಕಡಿತ ಪ್ರಕರಣ-ಉಪ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣದ ಚಿಕಿತ್ಸೆಗೆ ಕರುಣಾಕರ ಶಿಶಿಲರಿಂದ ಮನವಿ

Suddi Udaya
error: Content is protected !!