July 23, 2026
Uncategorized

ವೇಣೂರು: ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿ, ಮಾರಗುತ್ತು ಯಂ. ವಿಜಯರಾಜ ಅಧಿಕಾರಿ ನಿಧನ

ವೇಣೂರು : ಇಲ್ಲಿಯ ಮಾರಗುತ್ತು ಮನೆ ನಿವಾಸಿ, ವೇಣೂರು ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿಗಳು, ದೈವದ ಗಡಿ ಪ್ರಧಾನರಾಗಿರುವ ಮಾರಗುತ್ತು ಯಂ. ವಿಜಯರಾಜ ಅಧಿಕಾರಿ ಅವರು ಹೃದಯಾಘಾತದಿಂದ ಆ.16 ರಂದು ನಿಧನರಾಗಿದ್ದಾರೆ. ಸುಮಾರು 3ದಶಕ ಕ್ಕೂ ಮಿಕ್ಕಿ ವಿಜ್ಞಾನ ದ ಅಧ್ಯಾಪಕರಾಗಿ ಜನಾನು ರಾಗಿ ಗಳಾಗಿದ್ದರು ಜೈನ ಧರ್ಮ ಹಾಗೂ ಹಿಂಧೂ ಧರ್ಮ ವಿವೇಕಾನಂದ ಚಿಂತನೆ ಗಳ ಬಗ್ಗೆ ಅಳವಾ ದ ಅಭ್ಯಾಸ ಮಾಡಿದವರು ಉತ್ತಮ ಸಂಘಟಕಧಾರ್ಮಿಕ ಉಪನ್ಯಾಸ ಕಾರ ರಾಗಿ ಜನಪ್ರಿಯ ರಾಗಿದ್ದರು ಇವರು ಪ್ರಗತಿಪರ ಕೃಷಿಕರೂ ಆಗಿ ಧಾರ್ಮಿಕ, ಸಮಾಜಸೇವೆಯಲ್ಲೇ ಸಮಯ ಕಳೆಯುತ್ತಿದ್ದರು. ಮಾರಗುತ್ತು ಮಾರವಾಂಡಿ ದೈವದ ಗಡಿ ಪ್ರದಾನರಾಗಿ ಗ್ರಾಮದ ಜನತೆಗೆ ಮಾರ್ಗದರ್ಶಕರಾಗಿದ್ದರು. ಮುದ್ದಾಡಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ವಿವೇಕಾನಂದ ಸೇವಾ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಯಲ್ಲೂ ನಿರತರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. ವಿಜಯರಾಜ ಅಧಿಕಾರಿ ಅವರು ಶ್ರೀ ಮಠ ದ ಶಿಷ್ಯ ವರ್ಗ ದವರಗಿದ್ದು ಸದಾ ಶ್ರೀ ಮಠ ದ ಸಂಪರ್ಕ ದಲ್ಲಿದ್ದರು ಅವರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ ಅವರ ಅಗಲುವಿಕೆ ಯಿಂದ ಆಗಿರುವ ದುಃಖ್ಖ ವನ್ನು ಸಹಿಸುವ ಶಕ್ತಿ ಅವರ ಕುಟುಂಬ ವರ್ಗ ಕ್ಕೆ ಸಿಗಲಿ ಎಂದು ಶ್ರೀ ಜಿನೇಂದ್ರ ಭಗವಂತ ರಲ್ಲಿ ಪ್ರಾರ್ಥಿಸುತ್ತೇವೆ ಎಂದು ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಶ್ರೀ ಜೈನ ದಿಗಂಬರ ಜೈನ ಮಠ, ಸ್ವಸ್ತಿ ಶ್ರೀ ಭಟ್ಟಾರಕ ನಗರ ಮೂಡುಬಿದಿರೆ ತಿಳಿಸಿದ್ದಾರೆ.

Related posts

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ

Suddi Udaya

ಬಂದಾರು ಓಟೆಚ್ಚಾರು ಪರಿಸರದಲ್ಲಿ ಒಂಟಿ ಸಲಗ ದಾಳಿ ಕೃಷಿ, ಸೊತ್ತುಗಳ ನಾಶ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಕಾಳಜಿಯ ಯಶಸ್ವೀ ಪ್ರಯೋಗಗಳು

Suddi Udaya

ಮೇ 28: ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲಾಮಯ ಧ್ವಜಸ್ತಂಭ

Suddi Udaya

ಉಜಿರೆ ಶ್ರೀ ಧ.ಮಂ. ಪಪೂ ಕಾಲೇಜಿನಲ್ಲಿ ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿ ಆಚರಣೆ

Suddi Udaya

ದಿಡುಪೆ : ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ ಮಸ್ಜಿದುಲ್ ಹಿದಾಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!