July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ಹರೀಶ್ ಮೂಲ್ಯ ರವರಿಗೆ ಆರ್ಥಿಕ ಧನಸಹಾಯ

ನಾವರ ಗ್ರಾಮದ ದೇವರಗುಡ್ಡೆ ನಿವಾಸಿ ಹರೀಶ್ ಮೂಲ್ಯ ರವರು ಮರದ ಕಟ್ಟಿಂಗ್ ನ ಕೆಲಸ ಮಾಡುತ್ತಿರುವಾಗ ಮೆಷೀನ್ ಜಾರಿ ಅವರ ಕಾಲಿನ ಮೇಲೆ ಬಿದ್ದು ಸುಮಾರು 12 ಹೊಲಿಗೆಗಳನ್ನು ಹಾಕಿರುತ್ತಾರೆ. ಅವರ ಮಗನು ಶ್ರೀರಾಮ ಶಾಲೆ ಸುಳ್ಕೇರಿಯ ವಿದ್ಯಾರ್ಥಿಯಾಗಿದ್ದು ಅವನ ಕಾಲಿನ ಮೇಲೆ ಡೆಸ್ಕ್ ಬಿದ್ದು ಅವನು ಕೂಡ ಶಾಲೆಗೆ ಹೋಗಲಾರದೇ ಮನೆಯಲ್ಲಿಯೇ ಇದ್ದಾನೆ.. ತುಂಬಾ ಬಡತನದಲ್ಲಿರುವ ಅವರ ಕುಟುಂಬಕ್ಕೆ ಲಯನ್ಸ್ ಕ್ಲಬ್ ಬೆಳ್ತಂಗಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾವರ ಇವರ ವತಿಯಿಂದ 25 ಸಾವಿರ ರೂಪಾಯಿ ಯನ್ನು ಅವರ ಮನೆಗೆ ಹೋಗಿ ನೀಡಲಾಯಿತು.


ಈ ಸಂದರ್ಭ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ ಹಿಮರೋಡಿ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದಂತಹ ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷ ಲಯನ್ ನಿತ್ಯಾನಂದ ನಾವರ, ಆಡಳಿತ ಸಮಿತಿಯ ಸದಸ್ಯ ಲಯನ್ ರವಿ ಪೂಜಾರಿ ಹಾರಡ್ಡೆ, ಲಯನ್ ಪ್ರಶಾಂತ್ ಪೂಜಾರಿ ಹಿಮರಡ್ಡ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಎಕ್ಸೆಲ್ ಕಾಲೇಜು ಆದರ್ಶ ವಿದ್ಯಾಲಯ: ಡಾ. ಸುಬ್ರಹ್ಮಣ್ಯ ಭಟ್

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಾರಂಭ

Suddi Udaya

ಕುವೆಟ್ಟು: ಮದ್ದಡ್ಕ ನಿವಾಸಿ ಹೆನ್ರಿ ಡಿಸೋಜ ನಿಧನ

Suddi Udaya

ಕನಾ೯ಟಕ ಸಂಗೀತ ನೃತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ಕೃಪಾ ಫಡಕೆ ನೇಮಕ

Suddi Udaya

ಕನ್ಯಾಡಿ: ಮತ್ತಿಲ ನಿವಾಸಿ ಶಿವರಾಜ್ ಆತ್ಮಹತ್ಯೆ

Suddi Udaya

ವಿ.ಪ. ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ ತಣ್ಣೀರುಪoತ, ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸoಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಶಾಸಕ ಹರೀಶ್ ಪೂಂಜರಿಂದ ಮತಪ್ರಚಾರ

Suddi Udaya
error: Content is protected !!